ಶರತ್ತಿನ ಒಂದು ದಿನ
ಪ್ರಭುವೇ, ಇದೀಗ ಸಮಯ:
ಕಳೆಯುತ್ತಿದೆ ಬೇಸಗೆಯ ಹೊತ್ತು;
ನಿನ್ನ ನೆರಳಿಂದ ಸೂರ್ಯನ ಕಣ್ಣಾಲಿಗಳನ್ನು ಮುಚ್ಚು.
ಹಸಿರ ಬಯಲುಗಳಲ್ಲಿ ಗಾಳಿ ತೇಲಿಹೋಗಲು ಅನುವು ಮಾಡಿಕೊಡು,
ಹಣ್ಣುಗಳನ್ನು ತುಂಬಿಕೊಳ್ಳಲು ಹೇಳು ಮರಗಳಲ್ಲಿ,ಬಳ್ಳಿಗಳಲ್ಲಿ
ಅವುಗಳಿಗಿನ್ನೂ ಕೊಂಚ ಬೆಚ್ಚನೆಯ ಸ್ವಚ್ಚ ಹಗಲುಗಳನ್ನು ದಯಪಾಲಿಸು.
ಹೇಳು ಮೈ ತುಂಬಿಕೊಳ್ಳಲು, ಹಿಂಡಿ ಇಳಿಸು ಸಿಹಿಯನ್ನು
ಅವುಗಳೊಳಗೆ.
ಈ ಹೊತ್ತು ಇರಲು ನೆಲೆ ಯಾರಿಗಿಲ್ಲವೋ ಇನ್ನು ಎಂದೂ ಇರುವುದಿಲ್ಲ
ಈಗ ಒಂಟಿಯಾದವನು ಇನ್ನೆಂದಿಗೂ ಒಂಟಿ
ಕೂರುವನು,ಓದುವನು, ದೀರ್ಘ ಪತ್ರಗಳ ಬರೆಯುವನು ಸಂಜೆಯೆಲ್ಲಾ
ಸಾಲುಮರಗಳ ದಾರಿಯಲಿ ನಡೆಯುವನು ಒಣ
ಎಲೆಗಳು ಹಾರುವವು ವ್ಯಗ್ರವಾಗಿ.
“ರೈನರ್ ಮರಿಯಾ ರಿಲ್ಕನ ಒಂದು ಸುನೀತ” ಗೆ ಒಂದು ಪ್ರತಿಕ್ರಿಯೆ
ಪ್ರಿಯ ರಶೀದ್,
“ಈಗ ಒಂಟಿಯಾದವನು ಇನ್ನೆಂದಿಗೂ ಒಂಟಿ…” ಎಂತ ಗಾಢ ಭಾವ!
ಅವುಗಳಿಗಿನ್ನೂ ಕೊಂಚ ಬೆಚ್ಚನೆಯ ಸ್ವಚ್ಚ ಹಗಲುಗಳನ್ನು ದಯಪಾಲಿಸು… ಎಷ್ಟೊಂದು ಒಳ್ಳೆಯತನ!
ತುಂಬ ಇಷ್ಟವಾಯಿತು ಕವಿತೆ. ಚನಾಆಆಆಆಆಗಿದೆ.