ನಾಳೆಯಿಂದ ಒಂದು ಹೊಸ ಹೂವಿನ ಹೆಸರು

ಪ್ರಿಯರೇ, 
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ [...]

ನುಡಿಜಯಂತಿ ಮೋಜಿನಲ್ಲಿ ಮೌನವಾದ ಚಪ್ಪರ

ಇಂದು ತೀರ್ಥಹಳ್ಳಿಯಲ್ಲಿ ತೀರಿಹೋದ ಚಿ.ಶ್ರೀನಿವಾಸರಾಜು ಮೇಷ್ಟರ ಅಂತ್ಯಕ್ರಿಯೆ ಇರುವುದಿಲ್ಲ.ಏಕೆಂದರೆ ಅವರು ತಮ್ಮ ಶರೀರವನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಎಂದಿಗೂ ತನಗಾಗಿ ಬದುಕದ ಜೀವ ಶರೀರವನ್ನೂ ಕ್ರಿಯೆಗಳಿಗೆ ಬಿಟ್ಟುಕೊಡಲಿಲ್ಲ.
ಮೇಷ್ಟರ ನೆನಪಿಗೆ ಅವರೇ ಬರೆದು ರುಜು ಮಾಡಿದ ಈ ಕವಿತೆ.

ತೀರ್ಥಹಳ್ಳಿಯಲ್ಲಿ ತೀರಿ ಹೋದ ಚಿ.ಶ್ರೀನಿವಾಸರಾಜು ಮೇಷ್ಟರು

ಕನ್ನಡದ ಹೊಸ ಹುಡುಗ ಹುಡುಗಿಯರಲ್ಲಿ  ಕವಿತೆ ಬರೆಯುವ ಖುಷಿ ತುಂಬಿ, ಬೆನ್ನು ತಟ್ಟಿ, ಬಹುಮಾನ ಕೊಟ್ಟು ತಾನೂ ಖುಷಿ ಕಂಡುಕೊಂಡ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಶ್ರೀನಿವಾಸರಾಜು ಮೇಷ್ಟ್ರು ಇಂದು ಬೆಳಿಗ್ಗೆ ಏಳು ಗಂಟೆಗೆ ಕುಪ್ಪಳ್ಳಿಗೆ ಹೋಗವ ದಾರಿಯಲ್ಲಿ ತೀರ್ಥಹಳ್ಳಿಯ ಬಸ್ಸು ನಿಲ್ದಾಣದ ಬಳಿ ಹೃದಯಾಘಾತದಿಂದ ತೀರಿಹೋದರು. ಕುಪ್ಪಳ್ಳಿಯಲ್ಲಿ ನಡೆಯುವ  ಬೇಂದ್ರೆ ಕಾವ್ಯ ಸಂಕಿರಣದಲ್ಲಿ ಭಾಗವಹಿಸಲು ಬೆಂಗಳೂರಿಂದ ಬಂದು, ಬಸ್ಸು ಇಳಿದು, ಹೋಟೆಲ್ ರೂಂ ಹುಡುಕುತ್ತಾ ನಡೆಯುತ್ತಿದ್ದರು.
 ಸರಳ, ಸಜ್ಜನ, ಮಗುವಿನ ಪ್ರೀತಿಯ ರಾಜು ಮೇಷ್ಟರಿಗೆ ಕವಿತೆ ಓದುವ ಬರೆಯುವ [...]

ಈವತ್ತು ಕಂಡ ಅನಂತಮೂರ್ತಿ

 
ಈವತ್ತು ಬೆಂಗಳೂರಲ್ಲಿ ಶಶಿಕಿರಣ್ ಅವರ ಜೊತೆಗಿದ್ದೆ . ಅನಂತ ಮೂರ್ತಿಯವರಲ್ಲಿ ‘ಬರಲಾ?’ ಎಂದು ಕೇಳಿದೆ
`ಬಾ ಮಗುವೇ’ ಅನ್ನುವಂತೆ ಕರೆದು ನಮ್ಮ ಜೊತೆಬಹಳ ಹೊತ್ತು ಮಾತನಾಡಿದರು
`ಟೀ ಮಾಡಿಕೊಡಲೇ’ ಎಂದು ಕೇಳಿದರು.
ಅಷ್ಟು ಪ್ರೀತಿ, ಅಷ್ಟು ಮಮತೆಯ ಈ ಹಿರಿಯ ಜೀವವನ್ನು ನಾವು ಇನ್ನೂ ತುಂಬಾ ಪ್ರೀತಿಸಬೇಕಿತ್ತು ಅಂದು ಕೊಂಡು ಕಣ್ಣು ತುಂಬಿ ಬಂತು.

ಪ್ರೊಫೆಸರ್. ಕೆ .ರಾಮದಾಸ್ ಇಂದು ಬೆಳಿಗ್ಗೆ ತೇಜಸ್ವಿಯವರ ಬಳಿ ಹೋದರು

ನಮ್ಮ ಪ್ರೀತಿಯ ಮೇಷ್ಟ್ರು, ಚಿಂತಕ, ಹೋರಾಟಗಾರ, ತುಂಟ ಮನಸಿನ ಓಡಾಟಗಾರ ಕೆ.ರಾಮದಾಸ್ ಇದೀಗ ಕೊಂಚ ಹೊತ್ತಿನ ಮೊದಲು ಮೈಸೂರಿನ ಕುವೆಂಪು ನಗರದ ತಮ್ಮ `ಚಾರ್ವಾಕ’ ಎಂಬ ಮನೆಯಲ್ಲಿ ತೀರಿ ಹೋದರು.ಅವರಿಗೆ ೬೬ ವರ್ಷವಾಗಿತ್ತು. ಮಹಾರಾಜಾ ಕಾಲೇಜಿನಲ್ಲಿ ನನಗೆ ಅರಿವನ್ನು ಕಲಿಸಿದ ಗುರು, ಲಂಕೇಶ್, ತೇಜಸ್ವಿಯವರ ಪ್ರಾಣಮಿತ್ರ, ಕೆ. ರಾಮದಾಸ್ -ಇದೀಗ ಅವರನ್ನು ಸೇರಿಕೊಂಡಿದ್ದಾರೆ .ಯಾಕೋ ಏನೂ ಬರೆಯಲಾಗದ ಹಾಗೆ ಕಣ್ಣು ತುಂಬಿಕೊಳ್ಳುತ್ತಿದೆ.
ರಾಮದಾಸ್ ಅವರ ಆಲ್ಬಂನಿಂದ ಕೆಲವು ಚಿತ್ರಗಳು:

[ಪ್ರೀತಿಯ ತಾಯಿ ಮಂಜಮ್ಮ]

[ಮದುವೆಯ ದಿನ ಮಡದಿ ನಿರ್ಮಲಾ]

[ಮದುವೆಯಾದ ಮೇಲೆ ಕರೆಯೋಲೆ]

[ಲಂಕೇಶ್ [...]

ಮಲೆನಾಡಿನ ತರಳೆಯೊಬ್ಬಳ ಕವಿತೆಗಳು

 ನಾನು ಸಾಗರದ ಶಿಲಾಬಾಲಿಕೆ ಅಂತ ಹೇಳಿ ಒಬ್ಬರು ಕವಿತೆಗಳನ್ನು ಮೇಲ್ ಮಾಡಿದ್ದಾರೆ. ಓದಲು ಚೆನ್ನಾಗಿಯೇ ಇರುವ ಈ ಕವಿತೆಗಳು ನಿಮ್ಮ ಸಂತೋಷಕ್ಕಾಗಿ:
 

 
 
1

ಇದು ತೀರಾ ಖಾಸಗಿ ಸಂಗತಿ ಎಂಬಂತೆ
 ಉರಿಯ ನಡುವೆ ಮಳೆ ಎರಡು ಹನಿ
 ಬೀಳಿಸಿ  ಹೋಯಿತು.ಮಣ್ಣೆಲ್ಲ ‘ಘಂ‘ ಅಂತ ಪುಲಕಗೊಂಡು
ನೀ ಬಂದಾಗ ನನಗೆ ಆಗುವ ಹಾಗೆ
ಬನದಲ್ಲಿ ನವಿಲುಗಳು ಕೇಕೆ ಹಾಕಲು ತೊಡಗಿತು.

                     2
 ನನಗೆ ನೀಲ ವರ್ಣ ಬಲು ಹಿತವೆನಿಸುತ್ತೆ
ಅವನ ಹಿಮ್ಮಡಿಯ ಒಡೆದ ಬಿರುಕೂ ಅಷ್ಟೆ
ಮೈಯುಜ್ಜುವ ಹೊಳೆಯ ಕಲ್ಲಿನ ಹಾಗೆ
ವರದಾ ನದಿಯ ನೀರು ನೀಲಿ
ಅವನ ಬಣ್ಣಗಾರಿಕೆಯ ಮಾತುಗಳ ಹಾಗೆ!

 
3
 ನೀನು ಸಣ್ಣಗಿದ್ದೀಯಆದರೂ  ಚನ್ನಾಗಿದ್ದೀಯ
ಯಾಕೆ [...]