ನಾಳೆಯಿಂದ ಒಂದು ಹೊಸ ಹೂವಿನ ಹೆಸರು

ಪ್ರಿಯರೇ, 
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ [...]

ಹೂವಿನ ಕೊಲ್ಲಿಯ ಪೂರ್ವ ದಿಕ್ಕಿನಲ್ಲಿ

ನಿನ್ನೆ ಹೂವಿನ ಕೊಲ್ಲಿಯ ಹತ್ತಿರ ಹೋಗಿದ್ದೆ. ಅಮ್ಮನ ಹತ್ತಿರ ಇನ್ನಷ್ಟು ಹಳೆಯ ವಿವರಗಳನ್ನು ಕೇಳಬೇಕಿತ್ತು.ಆದರೆ ಯಾಕೋ ಆಕೆ ತೀರಿಹೋದ ನನ್ನ ಅಪ್ಪನನ್ನೂ ಸೇರಿಸಿ ನನ್ನನ್ನೂ ಎಲ್ಲರನ್ನೂ ಕಠುವಾಗಿ ಟೀಕಿಸುತ್ತಿದ್ದಳು.ಯಾಕೋ ಆಕೆ ತೀರಾ ಸಂಕಟದಲ್ಲಿದ್ದಂತೆ ಇತ್ತು.ಪೆಚ್ಚಾಗಿ ಹೂವಿನಕೊಲ್ಲಿಯ ಪೂರ್ವ ದಿಕ್ಕಿನಲ್ಲಿರುವ ಈ ಹೊಳೆಬದಿಗೆ ಹೋದೆ.

ನಾಳೆ ಹೂವಿನಕೊಲ್ಲಿಯ ೧೩ನೇ ಕಂತು ಬರೆಯಬೇಕು.ಏನೂ ಗೊತ್ತಾಗುತ್ತಿಲ್ಲ………….

ನಡೆಯಲು ಕಲಿಸಿದ ಪಾತಿಂಞ ಮತ್ತು ಆಧುನಿಕೋತ್ತರ ಬಿಕ್ಕಟ್ಟು!

ನನಗೆ ನಡೆಯಲು ಕಲಿಸಿದ ಮೇಲಿನ ಹಾಡಿಯ ಪಾತಿಂಞ ಮೊನ್ನೆ ಹೂವಿನಕೊಲ್ಲಿಗೆ ಹೋದಾಗ ಸಿಕ್ಕಿ ತುಂಬ ಖುಷಿ ಪಟ್ಟರು. ಕಾಲು ಪಾಲು ಕಾದಂಬರಿ ಬರೆದು ಸಾಗುತ್ತಿರುವ ನನಗೆ ಅವರ ಆಶೀರ್ವಾದ ಇನ್ನೂ ಸಿಕ್ಕಿಲ್ಲ.ಏಕೆಂದರೆ ಬರೆಯುತ್ತೇನೆ ಎಂದು ಅವರಲ್ಲಿ ಹೇಳಲು ನನಗೆ ದೈರ್ಯವಿಲ್ಲ.ಹೇಳಿದರೆ ಅದು ಪಾತಿಂಞಳಿಗೆ ಅರಿವಾಗುವುದೂ ಇಲ್ಲ.
ಎಂತಹ ಆಧುನಿಕೋತ್ತರ ಬಿಕ್ಕಟ್ಟು ಇದು ಪಾತಿಂಞ! ನೀವು ನನಗೆ  ನಡೆಯಲು ಕಲಿಸದಿದ್ದರೆ ಹೀಗೆಲ್ಲಾ ಆಗುತ್ತಿತ್ತಾ???