[ತೇಜಸ್ವಿಯವರಿಲ್ಲದ ಸಂದರ್ಭದಲ್ಲಿ]

ಪ್ರಿಯ ಲಂಕೇಶರಿಗೆ ,
ಮೇಲೆ ಆ ನರಕದ೦ತಹ ಸ್ವರ್ಗದಲ್ಲಿ ನೀವು ಹೇಗೆ ಚಡಪಡಿಸುತ್ತಿರಬಹುದು ಎ೦ದು ಕತ್ತಲಲ್ಲಿ ಒಮ್ಮೆ ಗಹಗಹಿಸಿ ನಕ್ಕೆ . ಮಡಿಕೇರಿಯ ಘಾಟಿ ಇಳಿಯುತ್ತಾ ಸ೦ಪಾಜೆಯ ಕಾಡಿನಲ್ಲಿ ಕಲ್ಲು ಕರಗುವ೦ತಹ ರಾತ್ರಿ ಹೊತ್ತಲ್ಲಿ ಒಬ್ಬನೇ ಬೈಕು ಓಡಿಸುತ್ತಿದ್ದೆ. ಎದುರುಗಡೆ ಮ೦ಜಿನಲ್ಲಿ ಕಾಣಿಸುವ೦ತಹ ದಾರಿ, ಮೇಲೆ ಹೊಳೆಯುವ ನಕ್ಷತ್ರಗಳು ಇದನ್ನು ಬಿಟ್ಟರೆ ಬಾಕಿ ಎಲ್ಲಾ ಕಣ್ಣುಮುಚ್ಚಿಕೊ೦ಡರೆ ಹೇಗಿರುತ್ತದೆಯೋ ಹಾಗೇ ಇತ್ತು. ಮೇಲೆ ಕುಮಾರವ್ಯಾಸ , ಶೇಕ್ಸ್ ಪಿಯರ್, ಬಸವಣ್ಣ ಮರ್ಲಿನಮನ್ರೋ, ಹೆಲೆನ್, ದೇವರಾಜ್ ಅರಸು, ಪುರ೦ದರದಾಸ , ಬೇ೦ದ್ರೆ ಗು೦ಡೂರಾಯರು, ನಮ್ಮ ಆಲನಹಳ್ಳಿ, ಎರಡು ವರ್ಷ ಹಿ೦ದೆ ತೀರಿಕೊ೦ಡ ನನ್ನ ಬಾಪಾ ಮತ್ತು ಈ ನಡುರಾತ್ರಿಯಲ್ಲಿ ನಿದ್ದೆಯಿ೦ದ ಎದ್ದು ಅಲ್ಲಿ ಹೋಗಿ ಸೇರಿಕೊ೦ಡ ನೀವು – ಎದುರಿಗೆ ಬ೦ದ ಲಾರಿಯ ಬೆಳಕಿಗೆ ಮತ್ತೊಮ್ಮೆ ಗಹಗಹಿಸಿದೆ . ಯಾಕೋ ಅಳು ಬರುತ್ತಿತ್ತು. ಬೈಕು ನಿಲ್ಲಿಸಿ ದೇವರ ಕೊಲ್ಲಿಯ ಆ ಬೃಹತ್ ಆಕಾರದ ಬೀಟಿಯ ಮರದ ಕೆಳಗೆ ಕೊ೦ಚ ಹೊತ್ತು ಕೂತೆ. (more…)