ನಾಳೆಯಿಂದ ಒಂದು ಹೊಸ ಹೂವಿನ ಹೆಸರು

ಪ್ರಿಯರೇ, 
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ [...]

ಲಂಕೇಶರ ಮೇಲಿನ ವಿಳಾಸಕ್ಕೆ ಬರೆದ ಒಂದು ಹಳೆಯ ಪತ್ರ

[ತೇಜಸ್ವಿಯವರಿಲ್ಲದ ಸಂದರ್ಭದಲ್ಲಿ]

ಪ್ರಿಯ ಲಂಕೇಶರಿಗೆ ,
ಮೇಲೆ ಆ ನರಕದ೦ತಹ ಸ್ವರ್ಗದಲ್ಲಿ ನೀವು ಹೇಗೆ ಚಡಪಡಿಸುತ್ತಿರಬಹುದು ಎ೦ದು ಕತ್ತಲಲ್ಲಿ ಒಮ್ಮೆ ಗಹಗಹಿಸಿ ನಕ್ಕೆ . ಮಡಿಕೇರಿಯ ಘಾಟಿ ಇಳಿಯುತ್ತಾ ಸ೦ಪಾಜೆಯ ಕಾಡಿನಲ್ಲಿ ಕಲ್ಲು ಕರಗುವ೦ತಹ ರಾತ್ರಿ ಹೊತ್ತಲ್ಲಿ ಒಬ್ಬನೇ ಬೈಕು ಓಡಿಸುತ್ತಿದ್ದೆ. ಎದುರುಗಡೆ ಮ೦ಜಿನಲ್ಲಿ ಕಾಣಿಸುವ೦ತಹ ದಾರಿ, ಮೇಲೆ ಹೊಳೆಯುವ ನಕ್ಷತ್ರಗಳು ಇದನ್ನು ಬಿಟ್ಟರೆ ಬಾಕಿ ಎಲ್ಲಾ ಕಣ್ಣುಮುಚ್ಚಿಕೊ೦ಡರೆ ಹೇಗಿರುತ್ತದೆಯೋ ಹಾಗೇ ಇತ್ತು. ಮೇಲೆ ಕುಮಾರವ್ಯಾಸ , ಶೇಕ್ಸ್ ಪಿಯರ್, ಬಸವಣ್ಣ ಮರ್ಲಿನಮನ್ರೋ, ಹೆಲೆನ್, ದೇವರಾಜ್ ಅರಸು, ಪುರ೦ದರದಾಸ , ಬೇ೦ದ್ರೆ [...]

ಯಾಕಳುವೆ ಮಗು ತೇಜಸ್ವಿ…

ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು..
‘ಯಾಕಳುವೆ ಮಗು ತೇಜಸ್ವಿ..’ಎಂದು ಕುವೆಂಪು ಬರೆದಿದ್ದರು
‘ನೀನು ಎರಡು ವರ್ಷದ ಮಗು ನಾನು ಎರಡು ವರ್ಷದ ತಂದೆ’ ಎಂದಿದ್ದರು.
ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು
ಏನು ಬರೆಯುವುದು ಏನು ಚಿತ್ರ ತೆಗೆಯುವುದು ಏನು ಚಿಂತಿಸುವುದು
ಎಲ್ಲವೂ ಮಣ್ಣಲ್ಲಿ ಮಣ್ಣಾಗಿ ಬಿಡುವುದು.
ಕುರಿತು ಬರೆದ ಮರ , ಕುರಿತು ಬರೆದ ಮಲೆ- ಸರೋವರ,
ಮಾತು ಕೇಳಿ ನಕ್ಕು ಹೋದ ಜನ. ಬೈಸಿಕೊಂಡು ಕುಗ್ಗಿ ಹೋದ ಸಜ್ಜನ,
ಕಾಜಾಣ, ಕವಿಶೈಲ,- ಯಾವುದೂ ಉಳಿಯಬಿಡುವುದಿಲ್ಲ.
ತೇಜಸ್ವಿ, ನೀವಿಲ್ಲದ ಮೊದಲ ದಿನ - ಕೈ ಆಡುತ್ತಿಲ್ಲ.ಬಾಯಿ [...]