ನಾಳೆಯಿಂದ ಒಂದು ಹೊಸ ಹೂವಿನ ಹೆಸರು

ಪ್ರಿಯರೇ, 
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ [...]

‘ಪಾತು’ - ಒಂದು ಸಣ್ಣ ಕತೆ

[ಚಿತ್ರ:ಚರಿತಾ]
ಯಾರು ಯಾರೆಂದು ಗೊತ್ತಾಗದಂತೆ ಸುರಿಯುತ್ತಿರುವ ಬೆಳ್ಳನೆಯ ಮಳೆಯಲ್ಲಿ ಪಾತು ತಲೆಯ ಮೇಲೊಂದು ಗೊರಬೆ ಹಾಕಿಕೊಂಡು ನಡೆದು ಹೋಗುತ್ತಿದ್ದಳು. ಗೊರಬೆಯ ಒಳಗೆ ಅವಳ ಮುಖ ಬೆವರಿಕೊಂಡು, ಅವಳ ಕೆನ್ನೆ, ಮೂಗು, ತುಟಿಯ ಮೇಲೆಲ್ಲಾ ಮಳೆಯ ಹನಿಗಳು ಸಿಡಿದು ಅವಳು ಮಳೆಗೆ ಮುಖ ಓರೆ ಮಾಡಿಕೊಂಡು ಕೆಸರಲ್ಲಿ ಹೆಜ್ಜೆ ಹಾಕುತ್ತಿದ್ದಳು. ಅವಳ ನಡುವಲ್ಲಿ ಸೀರೆಯ ಮೇಲೆ ಬಿಗಿದು ಕಟ್ಟಿರುವ ಗೋಣಿಯ ಚೀಲ, ಅವಳ ಕೈಯ್ಯಲ್ಲಿನ ಕಚ್ಚರೆ ತೆಗೆಯುವ ದಬ್ಬೆ ಕತ್ತಿ, ಅವಳ ಕುಳ್ಳನೆ ಕಾಲಿನ ದಪ್ಪಮೀನಖಂಡಗಳು, ಅತ್ತು ಮುಗಿಸಿದಂತೆ ಕೆಂಪಗೆ [...]

ಮಂಗಗಳಾದ ಮೂವರು ಹುಡುಗರು [ಒಂದು ಹಳೆಯ ಕಥೆ]

 
‘ಆತನನ್ನು ಇವರೆಲ್ಲಾದರೂ ಕೊಂದುಬಿಟ್ಟರೆ ಮಾರನೇ ದಿನವೇ ನಾನು ನಮ್ಮ ಧರ್ಮ ಬಿಟ್ಟುಬಿಡುವೆ’.
ನಾನು ನನ್ನ ಉಮ್ಮನ ಮುಂದೆ ಜಗಳಕ್ಕೆ ಹೋಗುವವನಂತೆ ಹಠ ಹಿಡಿಯುತ್ತಾ ಕೂತುಬಿಟ್ಟೆ. ಆಕೆ ಒಲೆಯ ಮುಂದೆ ಅನ್ನಕ್ಕೆ ನೀರಿಟ್ಟು ಸುಮ್ಮನೇ ನಿಂತಿದ್ದಳು. ಬೆಳಗ್ಗೆಯೇ ಪೇಪರ್ ಓದಿದ್ದ ನನ್ನ ಬಾಪಾ ಸಲ್ಮನ್ ರಷ್ದಿ ಎಂಬುವನು ಸೈತಾನನ ಅಡಿಯಾಳಿನಂತೆ ದೇವರನ್ನು ಮಹಮದ್ ನೆಬಿ ಪ್ರವಾದಿಯನ್ನೂ ಹಾಗೂ ಇಷ್ಟೂ ಸಾಲದೆಂಬಂತೆ ಇಡೀ ಇಸ್ಲಾಂ ಧರ್ಮವನ್ನೂ ತಮಾಷೆ ಮಾಡಿ ಕಥೆಯೋ ಮಣ್ಣಾಂಗಟ್ಟಿ ಏನನ್ನೋ ಬರೆದಿರುವುದು ಹಾಗೂ ಇರಾನ್ ಎಂಬ ದೇಶದ ಆಯತುಲ್ಲಾ ಖೋಮೇನಿ [...]

ಹಾಲು ಕುಡಿದ ಹುಡುಗಾ- ಒಂದು ಕತೆ

 [ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬರೆದ ಈ ನಾಚುಗೆಯ ಕತೆಯನ್ನು ಈಗಲೂ ಅಷ್ಟೇ ನಾಚುಗೆಯಿಂದ ಈ ಬ್ಲಾಗಿನಲ್ಲಿ ಅಡಗಿಸಿಡುತ್ತಿರುವೆ. ಈ ಕತೆಗೆ ಹೊಸತಾಗಿ ಚಿತ್ರಗಳನ್ನು ಬರೆದ ಚರಿತಾ ರಿಗೆ ಈ ಕಥೆಗಾರ ಚಿರಋಣಿ ]
 
 

     ಆ ಮೂರು ಜನ ಹೆಂಗಸರು ನದಿಬಟ್ಟೆಯ ಗಂಟು ಹೊತ್ತು ಒಂದು ಮೆಟ್ಟಲು, ಎರಡು ಮೆಟ್ಟಲು, ಮೂರು ಮೆಟ್ಟಲು ಜರಿದ ಬರೆ ಇಳಿದು ಸೊಂಟಕ್ಕೆ ಸೊಂಟಕುಕ್ಕಿ ನನ್ನ ಕರೆದರು.
‘ಹಾ ಹುಡುಗ, ಏ ಹುಡುಗ, ಏ ಹಾಳು ಗಂಡಾದವನೇ, ಬಾ ಬಾಲ್ಯಕಾರ ಹುಡುಗನೇ [...]

ಮೂಸಾ ಮೊಯಿಲಿಯಾರರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟ ಜಂತುವೂ

[೨೪ ವರ್ಷಗಳ ಹಿಂದಿನ ನನ್ನ ಮೊದಲ ಕಥೆ-ಬರೆದದ್ದು ಯೋಚಿಸಿದರೆ ಜುಂ ಎನ್ನುತ್ತೆ]
 

                                                                         [ಚಿತ್ರಗಳು-ಚರಿತಾ]
ಕರುಣಾನಿಧಿಯೂ, ಕಾರುಣ್ಯಮಯನೂ ಆದ ಅಲ್ಲಾಹುವು ಮೊತ್ತ ಮೊದಲು ಆದಂಪಾಪಾ ಮತ್ತು ಅವ್ವಾಬೀಬಿ ಎಂಬ ಗಂಡು ಹೆಣ್ಣುಗಳನ್ನು ಸೃಷ್ಟಿಸಿದನು. ಆಮೇಲೆ ಅವರಿಗಾಗಿ ಭೂಮಿಯ ಮೇಲಿನ ಸಕಲ ಚರಾಚರ, ಜೀವಜಂತುಗಳನ್ನೂ, ಪಶುಪಕ್ಷಿಗಳನ್ನೂ, ಗಿಡಮರಗಳನ್ನೂ ಉಂಟು ಮಾಡಿದನು. ಆದರೆ ಹಾರುವ ಈ ಕೆಂಪು ಹೆಲಿಪೆಟ್ಟರನ್ನು ಆತನೇ ಉಂಟು ಮಾಡಿದನೇ…. ಆತ ಎಲ್ಲವನ್ನು ಕಾಣುವವನೂ, ಕೇಳುವವನೂ ಆಗಿದ್ದಾನೆ…. ಹಾಗಾದರೆ ಆ ಸರ್ವಶಕ್ತಿನಿಗೆ ಮೈನಾಡಿನ ರಬ್ಬರ್ ತೋಟದ ಮೇಲೆ ಭರ್ರ್ ಎಂದು ಹಾರಾಡುತ್ತಾ, [...]

ಮಣ್ಣಾಂಗಟ್ಟಿ - ಒಂದು ಸಣ್ಣ ಕಥೆ

 
[ಚಿತ್ರಗಳು:ಚರಿತಾ]
ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ ಹಸನ್ಮುಖರಾಗಿ ಎಂದಿನಂತೆ ಒಬ್ಬರೊಬ್ಬರ ಮುಖನೋಡಿಕೊಂಡು ನೀರ ಸದ್ದು ಮಾಡಿಕೊಂಡು ಮೌನವಾಗಿ ಕುಳಿತಿರುವುದನ್ನು ಕಂಡು ಕರಳು ಕಿವಿಚುತ್ತಿತ್ತು.
 ನೆಬೀಸಾಳ ಅಣ್ಣ ಇಸುಬು ತನ್ನ ಸುಟ್ಟ ತಟ್ಟಿ ಹೋಟೆಲ್ಲಿನ ಮುಂದೆ ಕರಕಲಾದ ಬೆಂಚು ಮೇಜು ಅಲುಮಿನಿಯಂ ಪಾತ್ರೆಗಳನ್ನು ಹರಡಿಕೊಂಡು ಅವುಗಳ ನಡುವೆ ತನ್ನ ಎಂದಿನ ಭಂಗಿಯಲ್ಲಿ [...]

ಒಂದು ಪುರಾತನ ಪ್ರೇಮ- ಒಂದು ಸಣ್ಣ ಕಥೆ.

 
                                                                                    [ರೇಖಾ ಚಿತ್ರಗಳು:ಚರಿತಾ] 

ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು  ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ ತರಗೆಲೆಗಳ ಹಾಗೆ ಕಂಡುಬಿಡುವೆನೆಂದು ಅಂದು ಕೊಂಡಿರಲಿಲ್ಲ.  
ವೀರಾಜಪೇಟೆಯ ಆ ಪುಟ್ಟ ಗಜಿಬಿಜಿ ಖಾಸಗೀ ಬಸ್ಸು ನಿಲ್ದಾಣದಲ್ಲಿ ಕಂಡಕ್ಟರು ಏಜಂಟರುಗಳ ಕೂಗು, ಬಸ್ಸುಗಳ ತಾರಾಟ, ಹಳೆಯ ಲಟಾರಿ ಯಜ್ದಿ ಬೈಕುಗಳನ್ನು ಸುಮ್ಮನೆ ಸದ್ದು ಮಾಡುತ್ತಾ ಓಡಿಸುವ ಯುವಕರು,ಸೀರೆಯ ನೆರಿಗೆ ಎತ್ತಿಕೊಂಡು ನಡೆಯುವ ಯುವತಿಯರು,ಮಲಯಾಳಿ [...]

‘ಬೀಜ’-ಒಂದು ಹಳೆಯ ಸಣ್ಣ ಕಥೆ

ಬೀಜ
ಬಂಗಲೆಯೋ ಗೂಡಂಗಡಿಯೋ  ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ.ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು ಬುಟ್ಟಿ ಇಟ್ಟುಕೊಂಡು ಆ ವ್ಯಾಪಾರಕ್ಕೂ ಹೊರಡಬೇಕಾಗುತ್ತದೆ ಎಂದು ತನ್ನ ಉದ್ದ ಕಾಗದದ ಕೊನೆಯಲ್ಲಿ ಶರಾ ಬರೆದಿದ್ದ.ಜಾಗತೀಕರಣಕ್ಕೂ ಮುಕ್ತ ಮಾರುಕಟ್ಟೆಗೂ  ಕೊಡಗಿನಲ್ಲಿ ಕಾಫಿ ಬೆಲೆ ಕುಸಿದು ಬೆಳೆಗಾರ ಕಂಗಾಲಾಗಿರುವುದಕ್ಕೂ ಹತ್ತಿರದ ಕೇರಳದಿಂದ ಮಲಯಾಳಿಗಳು ಕೊಡಗಿನ ಭತ್ತದ ಗದ್ದೆಗೆ ನುಗ್ಗಿ ಶುಂಠಿ ಬೆಳೆದು ಕೊಬ್ಬಿಹೋಗಿರುವುದಕ್ಕೂ ಹೇಗೆ [...]