ನಾಳೆಯಿಂದ ಒಂದು ಹೊಸ ಹೂವಿನ ಹೆಸರು

ಪ್ರಿಯರೇ, 
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ [...]

ಮಡಿಕೇರಿ , ದೇವರಕೊಲ್ಲಿ ,ಆಗುಂಬೆ ಇತ್ಯಾದಿ….

ತಲೆಯೊಳಗೆ ಏನೋ ಒಂದು ದುಂಬಿ ಹೊಕ್ಕವನ ಹಾಗೆ, ಒಬ್ಬನೇ , ಅನ್ಯಮನಸ್ಕನಾಗಿ ಕಳೆದ ಎರಡುದಿನಗಳಲ್ಲಿ ಮೈಸೂರಿನಿಂದ ಹೊರಟು ಪುನಃ ಇಲ್ಲಿಗೇ ಹೊರಟು ಬಂದೆ. ಬರಿಯ ಸುರಿವ ಮಳೆ ಮತ್ತು ಕಾರಿರುಳು.ಮಡಿಕೇರಿ-ಸಂಪಾಜೆ-ಹೆಬ್ರಿ-ಆಗುಂಬೆ-ತೀರ್ಥಹಳ್ಳಿ-ಶಿವಮೊಗ್ಗೆ-ಅರಸೀಕೆರೆ-ಮೈಸೂರು.ಇಲ್ಲಿ ಬಂದು ಇಷ್ಟು ಹೊತ್ತಾದರೂ ಹೋಗದ ಈ ಅನ್ಯಮನಸ್ಕತೆ! ಹೋಗಲಿ ಬಿಡಿ-ಈ ಚಿತ್ರಗಳನ್ನು ನೋಡಿ!

 [ಬೆಳ್ಳಂಬೆಳಗೆ ರಾಜಾಸೀಟು]                                                   [ಕಾಟಕೇರಿಯಲ್ಲಿ...]

[ಮದೆನಾಡಿನ ಬಳಿ]

 [ದೇವರ ಕೊಲ್ಲಿ]                                                           
[ಸೋಮೇಶ್ವರ]
ಉಳಿದಂತೆ ಬರಿಯ ಮಳೆ ಮತ್ತು ಕಾರಿರುಳು.
—————————————-
                           

ಈ ಚಿತ್ರ ತೆಗೆದ ಚಿತ್ರಗಾರನ ಹೆಸರೇನು?

ಮೈಸೂರಿನ ಜಗನ್ಮೋಹನ ಅರಮನೆಯ ಎದುರಿಗಿರುವ ಈ ಅಂಗಡಿಯಲ್ಲಿ ಹಳೆಯ ಕಲಾಕೃತಿಗಳೂ,ಅವುಗಳ ನಕಲು ಪ್ರತಿಗಳೂ ಸಿಗುತ್ತವೆ.

ಈ ಚಿತ್ರ ತೆಗೆದ ಛಾಯಾಚಿತ್ರಗಾರನ ಚಿತ್ರ ಕೆಳಗಿದೆ

ಇವರು ಯಾರೆಂದು ಹೇಳುತ್ತೀರಾ? ಇವರನ್ನು ಕಂಡರೆ ನಿಮಗೆ  ಯಾಕೆ ಅಷ್ಟೊಂದು ಇಷ್ಟ?…ಹೇಳುತ್ತೀರಾ..

ಈವತ್ತಿನ ಚಿತ್ರ

 ಇವತ್ತು ಈ ಚಿತ್ರ ಸಾಕು.

ಚಾಮುಂಡಿ ಬೆಟ್ಟದ ಮೆಟ್ಟಲ ಮೇಲೆ ಬತ್ತಿ ಮಾರುವ ಈತ
ಮತ್ತು ಸದಾ ಈತನ ಹಿಂದಿರುವ  ಈ ಆಕಳು
ಈವತ್ತು ಸೋಮವಾರ .
ಈ ದಿನ ದೂಡಲು ಇವರಿಬ್ಬರ ಮುಖದ ನೆನಪು ಸಾಕು