ನಾಳೆಯಿಂದ ಒಂದು ಹೊಸ ಹೂವಿನ ಹೆಸರು

ಪ್ರಿಯರೇ, 
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ [...]

ಕಡಲು, ಕನ್ನಡ ಮತ್ತು ಮುಳುಗುತ್ತಿರುವ ಹಡಗು

ಹಲವು ವರುಷಗಳ ಮೊದಲು ಒಂದು ಸಂಕ್ರಾಂತಿಯ ಮಾರನೇ ದಿನ ವಿಮರ್ಶಕ ಪ್ರೊಫೆಸರ್ ಕಿ.ರಂ.ನಾಗರಾಜರನ್ನ ಬೈಕಿನಲ್ಲಿ ಕೂರಿಸಿಕೋಂಡು ಮಂಗಳೂರಿನ ಬೆನ್ನ ಹಿಂದೆ ಇರುವ ಒಂದು ಅಪರೂಪದ ಜಾಗಕ್ಕೆ ಕರೆದುಕೊಂಡು ಹೋಗಿದ್ದೆ. ಈ ಜಾಗ ತುಂಬಾ ಅಪರೂಪ.ಯಾಕೆಂದರೆ ಈ ಜಾಗ ಕೆಲವೇ ಕೆಲವರಿಗೆ ಗೊತ್ತಿದೆ ಮತ್ತು ಇಲ್ಲಿ ಎರಡು ದೊಡ್ಡ ನದಿಗಳು ಕಡಲನ್ನು ಸೇರುತ್ತದೆ.ಇಲ್ಲಿ ನಿಂತರೆ ಯಾವುದು ಯಾವ ನದಿ ಮತ್ತು ಯಾವುದು ಕಡಲು ಎಂದು ಗೊತ್ತಾಗುವುದಿಲ್ಲ. ಮುಳುಗುತ್ತಿರುವ ಸೂರ್ಯ ಇದೇ ಹೊತ್ತಲ್ಲಿ ಎಲ್ಲಿ ಉದಯಿಸುತ್ತಿರುವ ಎಂದು ಗೊತ್ತಾಗುತ್ತಿದೆ ಎಂದು [...]

ರೂಮಿಯ ಸಹವಾಸ

  ಒಬ್ಬ ಸಾಧಾರಣ ಮತ ಪಂಡಿತ. ಇನ್ನೊಬ್ಬ ಅಲೆಮಾರೀ ದರ್ವೇಶಿ. ಒಬ್ಬ ದರ್ಮಗ್ರಂಥಗಳನ್ನು ಅರೆದು ಕುಡಿದವನು.ಇನ್ನೊಬ್ಬ ಕಾಡು ಮೇಡು ಗುಹೆ ಹೆಂಡದ ಪಡಶಾಲೆ ಇಲ್ಲೆಲ್ಲ ಅಲೆದಾಡಿ ಪಡೆದವನನ್ನು ಹುಡುಕುವ ದಾರಿಯಲ್ಲಿ ನನಗೆ ಸಾಂಗತ್ಯ ನೀಡುವವನೊಬ್ಬ ಬೇಕೆಂದು ಕಂಡಕಂಡಲ್ಲಿ ಅರಲುವವನು.
 `ಸಂಗಾತಿ ದೊರಕಿದರೆ ಏನು ನೀಡುತ್ತೀ?’
 `ನನ್ನ ಶಿರವನ್ನು’
 `ಹಾಗಾದರೆ ನಿನಗೆ ಸಾಂಗತ್ಯ ಬೇಕಾಗಿರುವುದು ಜಲಾಲುದ್ದೀನ್ ರೂಮಿಯದ್ದು’ 
ಹೀಗೆ ಅಫಘಾನಿಸ್ತಾನದ ತಬ್ರೀಜ ಎಂಬಲ್ಲಿನ ಶಂಷ್ ಎಂಬ ಸಂತ ಜಲಾಲುದ್ದೀನ್ ರೂಮಿ ಎಂಬವನನ್ನು ಆತ್ಮಸಾಂಗತ್ಯಕ್ಕಾಗಿ ಸುಮಾರು ಏಳುನೂರ ಐವತ್ತು ವರ್ಷಗಳ ಹಿಂದೆ ಒಂದು ಸಂಜೆ ಭೇಟಿಯಾದ ಅಂತ [...]

ಮೈಸೂರಿನ ಮುದುಕನ ಬೆರಳ ಪರಿಮಳ

 ಎಷ್ಟೇ ಕೀಟಲೆ ಮಾಡಬಾರದೆಂದಿಟ್ಟುಕೊಂಡರೂ ಹಾಗೆ ಮಾಡಲಾಗದಿರುವುದೇ ಇಲ್ಲ  ಎಲ್ಲ ಕೀಟಲೆ ಮುಗಿಸಿ ಇನ್ನು ಗಂಭೀರವಾಗಿರಬೇಕೆಂದುಕೊಂಡರೆ ಆತ ಫೋನ್ ಮಾಡಿ ‘ಎಲ್ಲಿದ್ದೀಯಾ?’ ಎಂದು ಕೇಳುತ್ತಾನೆ.
 ’ಇಲ್ಲೇ ಕಣೋ ಮುಂಬೈನಲ್ಲಿ’ ಎಂದು   ಸುಳ್ಳು ಹೇಳಿ ಆತನಿಗೆ ಫೋನ್ ನಲ್ಲಿ ಮೈಸೂರು ನಗರದ ನಾನಾ ಸದ್ದುಗಳನ್ನು ಕೇಳಿಸುತ್ತೇನೆ.ಆತ ಇದು ಮುಂಬೈ ಎಂದೇ ತಿಳಿದು ಸಖ ತ್ ಸಂಕಟ ಪಟ್ಟುಕೊಳ್ಳುತ್ತಾನೆ. ‘ನೀನು ಬಿಡು ಮಾರಾಯ ಸಖತ್ ಸುತ್ತುತ್ತೀಯಾ .ನಾನಾದರೋ ನೋಡು ಪಾಠ ಮುಗಿಸಿ ಪರೀಕ್ಷೆ ಮುಗಿಸಿ ಈಗ ಮೌಲ್ಯಮಾಪನ ಮುಗಿಸಿ ಟ್ಯಾಬುಲೇಷನ್ ನಡೆಸುತ್ತಾ ಇರುವೆ [...]

ಒಂದು ಹಳೆಯ ಪತ್ರ

 
ಪ್ರಿಯ ಸಖ,
ಈ ಕಾಲಂ-ಗೀಲಂ ಎಲ್ಲ ಬಿಟ್ಟು ಸುಮ್ಮನೆ ಒಂದು ಪತ್ರ ಬರೆಯುತ್ತಾ ನಡುನಡುವೆ ನಿಂಬೂ ಟೀ ಹೀರುತ್ತಾ ಆಷಾಡದ ಈ ಜಡಿಮಳೆಯಲ್ಲೂ ಬೆವರುತ್ತಾ ಈ ನಡುವೆ ನಡೆದ ಸುಖ-ಸಂತೋಷಗಳನ್ನು ನೆನೆಸಿಕೊಳ್ಳುವುದು ಎಷ್ಟೊಂದು ಆಹ್ಲಾದದ ಕೆಲಸ ಗೊತ್ತಾ!ಯಾಕೋ  ಈಗ ಯಾರಾದರು ಏನಾದರು ಬರೆಯಲು ಹೇಳಿದರೆ ಕೊಲ್ಲಲು ಕರೆದುಕೊಂಡುಹೋಗುವ ಹಾಗೆ ಅನಿಸುತ್ತದೆ.
ಸಣ್ಣದಿರುವಾಗ ಕೊಡಗಿನ ಆ ಚಳಿಯಲ್ಲಿ ಬೆಳಗ್ಗೆ ಎದ್ದು ಅರಬೀ ಮದರ್ರಸಕ್ಕೆ ಕುರಾನ್ ಕಲಿಯಲು ಹೋಗಬೇಕಿತ್ತು.ಆಗಲೂ ಹೀಗೇ ಅನಿಸುತ್ತಿತ್ತು.ಆಗಲಾದರೆ ಕೈ ಹಿಡಿದು ಕರೆದೊಯ್ಯುತ್ತಿದ್ದ ಅಕ್ಕನಿಗೆ ಏನೋ ಸುಳ್ಳು ಹೇಳಿ ತಪ್ಪಿಸಿಕೊಳ್ಳಬಹುದಿತ್ತು.ಈಗ [...]

ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ

 ಇಪ್ಪತ್ತು ವರ್ಷಗಳಹಿಂದೆ ಒಂದುದಿನ ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ ಬಹುಶಃ ಆತ ಈ ದಿನಗಳಲ್ಲಿ ಒಂದು ದಿನ ಪೋಲೀಸರ ಗುಂಡಿಗೆ ಬಲಿಯಾಗುತ್ತಿದ್ದ ಅನಿಸುತ್ತಿದೆ. ಆತನ ಅಕ್ಕ ಹಸಿಹಸಿ ರೊಮಾಂಟಿಕ್ ಕವಿತೆ ಗಳನ್ನೂ ಕಡುಬಡವರ ಕುರಿತು ಲೇಖನಗಳನ್ನೂ ಬರೆಯುತ್ತಿದ್ದವಳು ಹೆಸರು ಮೀನಾಕ್ಷಿ ಅಂತ ಇಟ್ಟುಕೊಳ್ಳಿ ಆಂದ್ರದ ಪೋಲೀಸರ ಗುಂಡಿಗೆ ಈಗಾಗಲೇ ಆಹುತಿಯಾಗಿ ವರ್ಷಗಳೇ ಕಳೆದಿವೆ. ಮೀನಾಕ್ಷಿಯನ್ನು ಮದುವೆಯಾಗಿದ್ದ  ಕಾಮ್ರೇಡ್ ಕೂಡಾ ಇತ್ತೀಚೆಗಷ್ಟೇ ಪೋಲೀಸರ ಗುಂಡಿಗೆ ಬಲಿಯಾದ.
ಆದರೆ ಅದೃಷ್ಟವಶಾತ್ ಇಪ್ಪತ್ತು ವರ್ಷಗಳ ಹಿಂದೆ ಒಂದು ದಿನ ಒಂದು ಹಾಡಿಯಲ್ಲಿ [...]

ರಾಬಿಯಾಳಿಗೆ ಮದುವೆಯಾದ ಪ್ರಸಂಗ

`ಈ ಹಿಂದೆ ಕುಂಞಮ್ಮದನ ಮದುವೆಯ ಅಲ್ಲೋಲ ಕಲ್ಲೋಲದ ಕುರಿತು ಏನನ್ನೂ ಹೇಳದೆ  ನೀನು ಬಚಾವಾದೆ.ಈ ವಾರವೂ ನೀನು ಅದನ್ನು ಬರೆಯದೆ ಬೇರೆ ಏನಾದರೂ ಲಡಾಸು ಬರೆಯಲು ಹೋದರೆ ನಿನ್ನ ತಲೆಯ ಜೊತೆ ನನ್ನ ತಲೆಯೂ ಸಹಸ್ರ ಹೋಳಾಗುವುದು.ಆ ಕತೆ ಹೇಳಿ ಮುಗಿಸು ಮಾರಾಯ. ನಿನ್ನ ಜೊತೆ ನಾನೂ ಬದುಕಿಕೊಳ್ಳುತ್ತೇನೆ’ ಎಂದು ಆತ ಅಕ್ಕರೆಯಿಂದ ಕೇಳಿಕೊಳ್ಳುತ್ತಿದ್ದ.ನಾನು ಮನಸಿನ ಒಳಗೊಳಗೆ ಮುಸಿಮುಸಿ ನಗು ಬಂದರೂ ತೋರಿಸಿಕೊಳ್ಳದೆ ಸುಮ್ಮಗೆ ಕೇಳಿಸಿಕೊಳ್ಳುತ್ತಿದ್ದೆ.
 ’ಆ ಕೋಲಾಹಲದ ಮದುವೆಯ ಕುರಿತು ಈಗ ಏನು ಬರೆಯುವುದು?ಅದು ಸಂಭವಿಸಿ ಹತ್ತುಮೂವತ್ತು [...]

ಕವಿತೆ,ಸಮಾಜ ಮತ್ತು ಕ್ರಾಂತಿ ಇತ್ಯಾದಿ

  ’ಸಾರ್,ಕವಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕೂ ಅಂತೀರಾ?’
ಆಗ ತಾನೇ ಮೀಸೆ ಮೂಡಲು ತೊಡಗಿದ್ದ ಆ ಹುಡುಗ ಮುಖವನ್ನು ಚೂಪು ಮಾಡಿಕೊಂಡು ನನ್ನನ್ನು ಗುರಿಯಾಗಿಟ್ಟುಕೊಂಡು ಪ್ರಶ್ನೆಯೊಂದನ್ನು ಒಗೆದ.
ನಾನಾಗಿದ್ದಿದ್ದರೆ, ‘ಸಾರ್ ಕವಿತೆಯನ್ನು ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಬರೆಯಬೇಕಾ?ಅಥವಾ ಎರಡೂ ಕಡೆ ಬರೆದರೆ ಆಗುತ್ತದಾ?’ ಎಂದು ಕೇಳುವಂತಹ ವಯಸ್ಸು. ‘ಇದೆಲ್ಲಾ ಹೋಗಲಿ ಮಾರಾಯಾ..ನಿನ್ನ ಊರು ಯಾವುದು ? ಏನು ಮಾಡುತ್ತಿದ್ದೀಯಾ? ಹಾಸ್ಟೆಲಲ್ಲಿ ಊಟ ಸರಿಯಾಗುತ್ತದಾ? ಎಂದು ಕೇಳಿದೆ.
‘ಅಲ್ಲ  ಸಾರ್ ಸಮಾಜದಲ್ಲಿ ಕವಿಗಳ ಪಾತ್ರ ಏನು ಸಾರ್?’ಆತ ಪುನಃ ಶುರು ಮಾಡಿದ.
  ‘ಅಲ್ಲ [...]

ಆಕೆಯ ಬಟ್ಟೆಯ ಅದೇ ಬಣ್ಣ.. ಆಕೆಯ ಅದೇ ಪರಿಮಳ

 
ಆಗಲೇ ಆರೇಳು ಮಕ್ಕಳಿದ್ದ ನಮ್ಮ ಮನೆಗೆ ಅದು ಯಾವುದೋ ಹೊತ್ತಲ್ಲಿ ನಮ್ಮ ಹಾಗೇ ಇದ್ದ ಇನ್ನೊಬ್ಬಳು ಹುಡುಗಿ ಬಂದು ಸೇರಿಕೊಂಡಿದ್ದಳು.ಕೇ ಳಿದರೆ ಅದು ಯಾರೋ ಒಬ್ಬ ಒಂದು ಚೀಲ ಗಂಧಶಾಲೆ ಅಕ್ಕಿ ಗೆ ಅವಳನ್ನು ಕೊಟ್ಟು ಹೋದರು ಎಂದು ಕಣ್ಣು ಕಾಣಿಸದ, ಕಿವಿಕೇಳಿಸದ, ತಲೆಸರಿಯಿಲ್ಲದ ನನ್ನ ಅಜ್ಜಿ ಸುಳ್ಳು ಹೇಳಿದ್ದಳು.ಈ ಅಜ್ಜಿಗೆ ಎಷ್ಟು ತಲೆ ಸರಿಯಿರಲಿಲ್ಲ ಅಂದರೆ ನಾನು ಸಣ್ಣ ಮಗುವಾಗಿದ್ದಾಗ ಇಲಿಮರಿಯ ಹಾಗೆ ಇದ್ದೆ ಎಂಬ ಒಂದೇ ಕಾರಣಕ್ಕೆ ಈ ಅಜ್ಜಿ ತಾನು ನಮಾಜ್ ಮಾಡುವಾಗ ಹಾಕುವ [...]

ಒಂದನೆಯ ತರಗತಿಯಿಂದ ಇಂಗ್ಲಿಷ್: ಒಂದು ಗಂಭೀರ ಚಿಂತನೆ!

     
 
 ’ನೀನು ಬರೆಯುವುದರಲ್ಲಿ ನನಗೆ ಯಾವ ಪ್ರಯೋಜನವೂ ಕಾಣಿಸುವುದಿಲ್ಲ.ನೀನು ಬರೆಯುವುದು,ಅಲೆಯುವುದು,ಅದರಿಂದ ಸಿಗುವ ಸುಳ್ಳು ಖ್ಯಾತಿ,ಅದರಿಂದ ಉಂಟಾಗುವ ಕಳ್ಳ ಪ್ರಣಯ, ನಿನ್ನ ಈ ಹುಚ್ಚಿನಿಂದಾಗಿ ಆರ್ಥಿಕವಾಗಿಯಾಗಲೀ ಸಾಮಾಜಿಕವಾಗಿಯಾಗಲೀ ನಯಾಪೈಸೆ ಲಾಭವಿಲ್ಲ.ನೀನು ಮುಚ್ಚಿಕೊಂಡು ಸುಮ್ಮನೆ ಕೂತುಕೋ. ಬೀಡಿಸಿಗರೇಟಿಗೆ ಟೀಗೆ ನಾನು ಕೊಡುತ್ತೇನೆ. ಮನೆಗೂ ಸಮಾಜಕ್ಕೂ ಎಲ್ಲರಿಗೂ ಒಳಿತಾಗುತ್ತದೆ’ಎಂದೆಲ್ಲ ಅವಳು ಸಂಕಟದಲ್ಲಿ  ಉಲಿಯುತ್ತಿದ್ದಳು. 
 ನನಗೂ ಅವಳು ಅನ್ನುತ್ತಿರುವುದು ನೂರಕ್ಕೆ ನೂರರಷ್ಟು ಸರಿ ಅನ್ನಿಸುತ್ತಿತ್ತು.
 ಅವಳು ಕೊಟ್ಟ ದುಡ್ಡಲ್ಲಿ ಒಂದು ಗಾಳ ಮತ್ತು ಒಂದು ಕಟ್ಟು ಬೀಡಿ ಕೊಂಡುಕೊಂಡು ಒಂದು ಎರೆಹುಳ ಹಿಡಿದು ಗಾಳಕ್ಕೆ ಸಿಕ್ಕಿಸಿ ಉಟ್ಟ [...]

ಮತ ಧರ್ಮಗಳೂ ಮತ್ತು ನರ ಮನುಷ್ಯರೂ

ಉರಿಯುತ್ತಿರುವ ಗುಲ್ಬರ್ಗಾ ಶಹರಿನಲ್ಲಿ ತಣ್ಣಗಿರುವ ಕೆಲವು ನಿಗೂಢ ತಾಣಗಳಿವೆ. ಎಷ್ಟೇ ಉರಿಯಿದ್ದರೂ ಒಳಹೊಕ್ಕೊಡನೆ ಅವ್ಯಕ್ತ ಗಾಳಿಯಾಡಿ, ಎಷ್ಟೋ ಶತಮಾನಗಳಷ್ಟು ಹಳೆಯ ಗುಂಗು ಮೂಡಿಸಿ, ಹಳೆಯ ಪಾರಿವಾಳಗಳು ರೆಕ್ಕೆ ಬಡಿದು ಹಾರಾಡಿ , ಧೂಪ- ಸಾಂಬ್ರಾಣಿ- ಹೊಗೆ- ಸಮಾದಿ- ನಾವು ಇರುವ ಜಾಗ ಯಾವುದು ನಾವು ಎಲ್ಲಿಂದ ಬಂದವರು ಎಂಬುದನ್ನೆಲ್ಲ ಮರೆಯಿಸಿಬಿಡುತ್ತವೆ.
 ನೀವು ಯಾರಾದರೂ  ಶುಕ್ರವಾರದ ಹಿಂದಿನ ರಾತ್ರಿ ಅಥವಾ ಅಮವಾಸ್ಯೆಯ ಹಿಂದಿನ ಸಂಜೆ ಕತ್ತಲಾಗುತ್ತಿದ್ದಂತೆ ಗುಲ್ಬರ್ಗಾ ಶಹರಿನ  ಮದ್ಯದಲ್ಲಿರುವ ಹಝರತ್ ಖ್ವಾಜ ಬಂದೇ ನವಾಜರ ದರ್ಗಾದ ಒಳ ಹೊಕ್ಕು [...]

ಜಾಗತೀಕರಣ, ಗೊರ್ಬಚೇವ್, ಪೆರಿಸ್ಟ್ರೋಯಿಕಾ ಮತ್ತು ಗ್ಲಾಸ್ನಾಸ್ಟ್

 
ಕಾವಿಗೆ ಕುಂತ ಆಲಸಿ ಹೇಂಟೆಯಂತೆ, ಎಲ್ಲರನ್ನು ಎದುರು ಹಾಕಿಕೊಂಡಿರುವ ಪ್ರೇಮಿಯಂತೆ ಏನೂ ಬರೆಯಲಾಗದೆ ಕಂಪ್ಯೂಟರ್ ಪರದೆಯನ್ನೇ ಆಕಾಶವನ್ನಾಗಿ ಮಾಡಿಕೊಂಡು ದಿಟ್ಟಿಸುತ್ತಿರುವೆ.ಈ ನಡು ಮದ್ಯಾಹ್ನದ ಆಕಾಶಕ್ಕಿಂತ ಬಿಲ್ ಗೇಟ್ಸ್ ಕರುಣಿಸಿರುವ ಈ ನೀಲ ವಿಂಡೋಸ್ ಪರದೆ ಎಷ್ಟೋ ಹಿತವಾಗಿ ಕಾಣಿಸುತ್ತಿದೆ. ಜಾಗತೀಕರಣ ಮತ್ತು ಸಂಸ್ಕೃತಿ, ಜಾಗತೀಕರಣ ಮತ್ತು ಧರ್ಮ,ಜಾಗತೀಕರಣ ಮತ್ತುಕನ್ನಡ ಸಾಹಿತ್ಯ- ವಿತ್ತ ವರ್ಷ ಮುಗಿಯುವ ಮೊದಲೇ ಮುಗಿಸಬೇಕಾಗಿರುವ ವಿಚಾರ ಸಂಕಿರಣಗಳು ಅಚ್ಚರಿಯಾಗುವಂತೆ        ಪ್ರತಿನಿಧಿಗಳಿಂದ ತುಂಬಿಕೊಂಡಿದೆ.ಬಹಳಷ್ಟು ಮಂದಿ ಭಯಬೀತರಾಗಿ ಯಾವ ರೂಪದಲ್ಲಾದರೂ ಎರಗಬಹುದಾದ ಜಾಗತಿಕ ಭೂತದಿಂದ ತಮ್ಮ ಪಿಳ್ಳೆಮರಿಗಳನ್ನು ಹೇಗ [...]

ಮುಸಂಬಿ ಸುಲಿಯುವ ಸದ್ದು ಅಥವಾ ಆಹಾರ ಮತ್ತು ದೇವರು

 
 ಸಂಜೆ ಉರಿ ಬಿಸಿಲ ಲ್ಲಿ ನಿದ್ದೆ ಅರ್ದಕ್ಕೆ ಬಿಟ್ಟು ಮಕ್ಕಳಿಗೆ ಮುಸಂಬಿ ಸುಲಿಯತ್ತ ಕೂತಿದ್ದೆ 
 ಬೆವರು,ಸಂಕಟ,ಕನಸು,ಎಚ್ಚರ,ನಿದ್ದೆ.  ಉಸ್ತಾದ್  ಅಮೀರ್ ಖಾನ್ ಎಂದಿನಂತೆ ‘ಪಿಯಾ ಪರದೇಶಿ ಪರಮಸುಖ ಚತುರ’ಎಂದು ಮತ್ತೆ ಮತ್ತೆ ಹಾಡುವಂತೆ ಹಾಡನ್ನ ಲೂಪ್ ಮಾಡಿಕೊಂಡಿದ್ದೆ. ನಾವು ಪರದೇಶಿಗಳಾದ ಗೆಳೆಯರು ಸುಖ ಸಂಕಟದ ಹೊತ್ತಲ್ಲಿಮತ್ತೆ ಮತ್ತೆ ಕೇಳುವ ಹಾಡು ಅದು. ಶಾಶ್ತ್ರೀಯವಾಗಿ ಕೇಳುವುದಾದರೆ ಬೆಳಗಿನ ಕೊನೆಯ ಜಾವದಲ್ಲಿ ಕೇಳಬೇಕಾದ ಹಾಡದು. ಪರದೇಶಿಗಳಾದ ಪರಮಸುಖಚತುರರು ಯಾವ ಜಾವದಲ್ಲಾದರೂ ಕೇಳಬಹುದು ಅನ್ನುವಂತೆ ಉಸ್ತಾದ್ ಅಮೀರ್ ಖಾನ್ ಹಾಡುತ್ತಿದ್ದರು. ಮಕ್ಕಳು ಆಸೆಯಿಂದ ಸುಲಿಯುತ್ತಿರುವ ಮುಸಂಬಿಯನ್ನು ನೋಡುತ್ತಿದ್ದರು. [...]

ಕಬಾಡ್ ಮಂಗೇಶರಾಯರಿಗೆ ನಮಸ್ಕಾರ

ಹಿಂದೆ ಎಂದೂ ಕಾಣದಂತಹ ಸುಖದ ನೋವಿನ ತಳಮಳದ ಈ ಕನಸನ್ನು ಹೇಗೆ ಹೇಳಲಿ? ಸುರಿಯುವ ಜಿಟಿಜಿಟಿ ಮಳೆ ನಿಂತು ಈ ಮೈಸೂರು ಮಂದಹಾಸದಂತಹ ಎಳೆ ಬಿಸಿಲನ್ನು ತೋರಿಸಿಕೊಂಡು ಮೈಕಾಯಿಸುತ್ತಾ ಕೂತಿರುವಾಗ ಮಂಗಳೂರಿನ ರಥ ಬೀದಿಯ ಕೊನೆಯ ಆ ದೇವಸ್ಥಾನದ ಹಿಂಬದಿಯ ಆ ಎರಡು ಪುಟ್ಟ ಕೋಣೆಗಳ ಕತ್ತಲು ಕತ್ತಲು ಹಾಲ್ನಲ್ಲಿ ವಿಶಾಲವಾಗಿ ನಗುತ್ತ ಕೂತಿರುವ ಕಬಾಡ್ ಮಂಗೇಶ ರಾಯರ ನೆನಪಾಗುತ್ತಿದೆ.
 ಸುಮಾರು ಹನ್ನೆರಡು ವರ್ಷಗಳ ಹಿಂದೆ ಇಂತಹದೇ ಮಳೆ ನಿಂತ ಮೇಲಿನ ಬಿಸಿಲಲ್ಲಿ ಅವರನ್ನು ನೋಡಿ ಬಂದು ಸಂಕಟವಾಗಿ [...]

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!

 
 ‘ಎನ್ನ ಕರದೊಳಗಿದ್ದು ಎನ್ನೊಳೇತಕೆ ಮುನಿವೆ?’ 
 ಮಲ್ಲಿಕಾರ್ಜುನ ಮನ್ಸೂರ್ ಹಾಡುತ್ತಿದ್ದಾರೆ.
‘ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವಾ..ಕೇಳುತ್ತ ಕೇಳುತ್ತ ಮೈಮರೆತೊರಗಿದೆ ನೋಡವ್ವಾ.. ಹಾಸಿದ್ದ ಹಾಸಿಗೆಯಾ ಹಂಗಿಲ್ಲದೇ ಹೋಯಿತ್ತೂ..’ ಇನ್ನೊಂದು ಹಾಡು.
 ಸುಮ್ಮನೆ ಮುಚ್ಚಿಕೊಂಡು ಐದು ನೂರು ಪದಗಳನ್ನು ಬರೆಯಲು ಯಾಕಿಷ್ಟು ಸರ್ಕಸ್ಸು ಅನ್ನಿಸುತ್ತದೆ.ಬರೆಯುವುದು ಒಂದು ತರಹದ ದಿನನಿತ್ಯದ ವ್ಯಾಯಾಮದಂತಿರಬೇಕು.ದಿನಾ ಬೆಳಗಿನ ವಾಕಿಂಗಿನ ಹಾಗೆ.ಮಾಡುತ್ತಾ ಹೋಗಬೇಕು ಎಂದೆಲ್ಲಾ ಹೇಳಿದ್ದು ಎಲ್ಲ ಬರಹಗಾರರ ಗುರು ಸಮಾನನಾದ ಹೆಮಿಂಗ್ವೇ ಇರಬೇಕು.ಅಥವಾ ಇನ್ನೊಬ್ಬ ತೀರ್ಥರೂಪ ಸಮಾನರಾದ ಲಂಕೇಶ್!
 ’ಎನಗೆ ನಿಮ್ಮ ನೆನಹಾದಗಲೇ ಉದಯ, ಎನಗೆ  ಮರೆವಾದಾಗಲೇ ಅಸ್ತಮಾನ’ ಮನ್ಸೂರ್ ಈಗ [...]

ಲಂಕೇಶರ ಕೊನೆಯ ದಿನಗಳು

[ಕಿ.ರಂ,ಲಂಕೇಶ್ ಜೊತೆಯಲ್ಲಿ]
ಬಹುಶಃ ಬದುಕಿದ್ದರೆ ಲಂಕೇಶರಿಗೆ  ೭೧ ವರ್ಷ ತುಂಬಿ ಎರಡು ತಿಂಗಳಾಗುತ್ತಿತ್ತು. ಈ ತುಂಬುತ್ತಿತ್ತು ಅನ್ನುವುದನ್ನು ಲಂಕೇಶ್ ಶೈಲಿಯಲ್ಲಿಯೇ ಯೋಚನೆ ಮಾಡುವುದಾದರೆ  ಅವರಿಗೆ ಈಗ ಮಕ್ಕಳಿಂದ ಒದ್ದು ಹೊರಗೆ ಹಾಕಿಸಿಕೊಳ್ಳುವ ವಯಸ್ಸು.
ಒಂದು ಸಲ ನಾನು ಸ್ವಲ್ಪ ಕೃತಕ ಭಾವುಕತೆ ತುಂಬಿಸಿಕೊಂಡು `ಸರ್,ನಿಮ್ಮ`ಅವ್ವ’ಕವಿತೆ… ಬಹುಶಃ ನಿಮ್ಮ ಅವ್ವ ಬದುಕಿದ್ದಿದ್ದರೆ..’ಅಂತೆಲ್ಲ ಹೇಳಿ ಅವರನ್ನು ಪೂಸಿ ಹೊಡೆಯಲು ನೋಡಿದ್ದೆ.
`ಅಯ್ಯೋ ಮಾರಾಯ ಅವಳೇನಾದರೂ ಈಗಲೂ ಬದುಕಿದ್ದರೆ ದೊಡ್ಡ ರಗಳೆಯಾಗಿರೋದು.ಯಾರುಯಾರು ಯಾವಯಾವ ಕಾಲದಲ್ಲಿ ಸಾಯಬೇಕೋ ಆಗ ಸಾಯಬೇಕು.ಇಲ್ಲದಿದ್ರೆ ಫಜೀತಿ ಯಾಗೋದು’ ಅಂತ ಅವರ ನಾಚುಕೆಯ [...]

ಅಚಲ್ ರಹೋ ರಾಜಾ : ದೇವತೆಯರಲ್ಲಿ ಒಂದು ಮೊರೆ

  
ಈ ನಡುರಾತ್ರಿಯಲ್ಲಿ ಆ ಕೂಗು ಹಾಗೆಯೇ ಇನ್ನೂ ಕೇಳಿಸುತ್ತಿದೆ.ಕಾಲ ಇಷ್ಟು ಕಳೆದಿದ್ದರೂ ಆ ಕೂಗು ಇನ್ನೂ ಹಾಗೆಯೇ.ಕಾಫಿ ತೋಟದ ನಮ್ಮ ಬಿಡಾರದ ಮುಂದೆ ಸದಾ ಎರಡು ಮುತ್ತೈದೆಯರ ಹಾಗೆ ನಿಂತುಕೊಂಡಿದ್ದ ಜೋಡಿ ಪೇರಳೆ ಮರಗಳು.ಒಂದು ಬಟರ್ ಫ್ರೂಟಿನ ಅಸಹಾಯಕ ಮರ.ಪೇರಳೆ ಮರಗಳಿಗೆ ಜೋತು ಬಿದ್ದು ಪವಡಿಸಿದ್ದ ಮಲ್ಲಿಗೆಯ ಬಳ್ಳಿ.ಅದರಲ್ಲಿ ಆಗಾಗ ಕಂಡು ಬರುತ್ತಿದ್ದ ಪುಡಿ ಮಕ್ಕಳಂತಹ ಮಲ್ಲಿಗೆ ಮೊಗ್ಗುಗಳು.ಒಂದು ಕಂಬಳಿ ಹಣ್ಣಿನ ಗಿಡ.ಕೆಳಗೆ ಏಲಕ್ಕಿ ಕಾಡು.ಬತ್ತದ ಗದ್ದೆ.ಅಲ್ಲೇ ಎಲ್ಲೋ ಇದ್ದ ಒಂದು ಕೊಳ.ಅದರ ಸುತ್ತಲೂ ಏಡಿ ಮಣ್ಣಲ್ಲಿ [...]

ಒಂದು ಬಟ್ಟಲು ಗೇರು ಹಣ್ಣಿನ ಸಾರವನ್ನು ಎದುರಿಟ್ಟುಕೊಂಡು

 ಒಂದು ಬಟ್ಟಲು ಗೇರು ಹಣ್ಣಿನ ಸಾರವನ್ನು ಎದುರಿಟ್ಟುಕೊಂಡು ಕುಳಿತಿರುವೆ.ಇಳಿಸಲಾಗುತ್ತಿಲ್ಲ.ಅಷ್ಟು ಘಾಟು.
ಇಳಿಸದಿರಲಾಗುವುದೂ ಇಲ್ಲ. ಹಳೆಯದನೆಲ್ಲ ಮರೆತಿರುವೆಯೇನು ಎನ್ನುವಂತೆ ಬಟ್ಟಲು ಎದುರು ಕೂತಿದೆ.ಒಮ್ಮೆ ಒಂದು ಸ್ವಪ್ನದಂತೆ,ಒಮ್ಮೆ ಒಂದು ಪ್ರಪಾತದಂತೆ,ಒಮ್ಮೆ ಹೆಂಗಸೊಬ್ಬಳ ದೀರ್ಘ ನಿಟ್ಟುಸಿರಂತೆ,ಒಮ್ಮೆ ತರಳೆಯೊಬ್ಬಳ ಬೆರಳು ಕಚ್ಚಿದ ನಾಚಿಕೆಯಂತೆ ಮೈಯೆಲ್ಲ ಹರಿದಾಡುವ ಮದ್ಯಸಾರ. ನಿನ್ನನ್ನುಹೇಗೆ ಸೇವಿಸದಿರಲಿ ಎಂದು ದಿಟ್ಟಿಸುತ್ತೇನೆ.
 ನಾನು ಪ್ರೀತಿಸಿದ ಹುಡುಗಿಯನ್ನು ಒಂದು ದೇವತೆಯ ಚಿತ್ರದ ಎದುರು ನಿಂತು ಮದುವೆ ಮಾಡಿಕೊಂಡು ಅವಳ ಹೆತ್ತವರು ಒಡಹುಟ್ಟಿದವರಿಂದ ತಲೆಮರೆಸಿಕೊಂಡು ಅದರ ನಡುವೆ ರೇಷನ್ ಕಾರ್ಡ್ ಬೇರೆ ಮಾಡಿಸ ಬೇಕಾಗಿ ಬಂದು ಸಣ್ಣ ವಯಸ್ಸಿನವನಾದ [...]

ಎಸ್. ಮನೋರಮಾ ಅವರು ಕಳ್ಳನನ್ನು ಹಿಡಿದ ಕಥೆ

ಚತುರ ಗೆರಿಲ್ಲಾ ಹೋರಾಟಗಾರನ ಹಾಗೆ ಮೈಸೂರಿನ ಒಂದೊಂದು ರಸ್ತೆಯ ಮೇಲೆ ಒಂದೊಂದು ಸಂಜೆ ದಾಳಿ ನಡೆಸಿ ಸಾಲುಮರಗಳ ಸೊಂಟ ಮುರಿಯುತ್ತಿರುವ ಹಠಾತ್ ಮಳೆ. ರೆಂಬೆ ಕೊಂಬೆಗಳನ್ನು ಹೂವಿನ ಸಮೇತ ಕಳೆದುಕೊಂಡು ಆಕ್ರಂದಿಸುತ್ತಿರುವ ಗುಲ್ಮೊಹರ್ ಮರಗಳು. ಈ ಆಕ್ರಮಣದ ನಡುವೆ ಹೊಂಚು ಹಾಕಿಕೊಂಡು ಹೋಗಿ ಹಳೆಯ ಕಾಲದ ಮನೆಯೊಂದರಳಗೆ ಕುಳಿತು ನಾನು ಎಸ್. ಸಾವಿತ್ರಮ್ಮನವರು ಹಾಡುತ್ತಿರುವ ಹಳೆಯ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಮೈಸೂರಿನ ಪುರಾತನ ಎಲ್.ಎಂ.ಪಿ. ಡಾಕ್ಟರ್ ಶ್ರೀಕಂಠಯ್ಯನವರ ಮುದ್ದಿನ ಮಗಳು ಎಸ್. ಸಾವಿತ್ರಮ್ಮ  `come on come on [...]

ಷಿಲ್ಲಾಂಗಿನಲ್ಲಿ ಕನ್ನಡದ ಇಬ್ಬರು ಹೆಣ್ಣುಮಕ್ಕಳನ್ನು ನೆನೆಯುತ್ತ

      
 ಮೇ ಮಾಸದ ಈ ಇರುಳಿನಲ್ಲಿ ಒಬ್ಬನೇ ಕುಳಿತು ಮೇಘಾಲಯದ ಕನಸು ಕಾಣುತ್ತಿರುವೆ. ಶಾಂತಾ ಅವರ ನೆನಪಾಗುತ್ತಿದೆ. ಶಾಂತಾ ಕನ್ನಡದ ಸಂಪಿಗೆ ಘಾಟಿನಂತಹ ಕವಿ ಪು.ತಿ.ನ. ಅವರ ಮಗಳು.ಕೇಂದ್ರ ಜಲ ಮಂಡಲಿಯಲ್ಲಿ ಬಲು ದೊಡ್ಡ ಇಂಜಿನಿಯರ್ ಆಗಿದ್ದ ಶಾಂತಾ ಅವರ  ಗಂಡ ಶ್ರೀ ರಂಗಾಚಾರ್ ಷಿಲ್ಲಾಂಗ್ ನಲ್ಲಿರುವಾಗ ತೀರಿ ಹೋಗಿದ್ದರು. ತನ್ನ ಗಂಡನ ಆತ್ಮ ಅಲ್ಲೇ ಇದೆ ಎಂದು ನಂಬಿರುವ ಶಾಂತಾ ಇನ್ನು ನೂರಾರು ವರ್ಷವಾದರೂ ಅಲ್ಲೇ ಇರುತ್ತಾರೆ ಅನಿಸುತ್ತದೆ.
 ಷಿಲ್ಲಾಂಗ್ ನ ನೋಂಗ್ರಿಮ್ ಹಿಲ್ಸ್ ನಲ್ಲಿ ಶಾಂತಾ ಬಾಡಿಗೆಗಿರುವ [...]