ಕುಂವೀಯವರಿಗೆ ಪ್ರಶಸ್ತಿಯ ಗರಿ ಮೊಗಳ್ಳಿಯವರಿಗೆ ತಕರಾರೇ ಗುರಿ
Posted on Thursday December 27, 2007 by Rasheed
ನಾವೆಲ್ಲ ಇಷ್ಟ ಪಡುವ ಕುಂವೀಯವರ ‘ಅರಮನೆ’ಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಬಂದಿದೆ.ಅಷ್ಟು ಹೊತ್ತಿಗೆ ಸರಿಯಾಗಿ ಮೊಗಳ್ಳಿಯವರ ತಕರಾರೂ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ.ಕುಂವೀಯವರಿಗೆ ಅಭಿನಂದನೆ ಹೇಳುವ ಅಂದರೆ ಅವರ ಮೊಬೈಲ್ ಆಫ್ ಆಗಿದೆ.ಗಣೇಶ್ ಗೆ ಬೈಯ್ಯುವಾ ಅಂದರೆ ಅವರು ಇನ್ನೂ ತಕರಾರಿನ ಹ್ಯಾಂಗ್ ಓವರ್ ನಲ್ಲೇ ಇರುವ ಹಾಗಿದೆ. ಈವತ್ತು ಅಪರಾಹ್ನ ಗಣೇಶ್ ಜೊತೆ ನಡೆದ ಮೊಬೈಲ್ ಮಾತುಕತೆ ಇಲ್ಲಿದೆ.
ನಿಮಗೇನನ್ನಿಸುತ್ತದೆ? ನನ್ನದೂ ಒಂದು ವ್ಯರ್ಥ ಕಾಲಹರಣವೇ!!!!
Filed under: Uncategorized
ಮೊಗಳ್ಳಿ ಗಣೇಶ್ ಅವರಿಗೆ “ನಿಮ್ಮ ಸರದಿ ಬರುವವರೆಗೆ ಕಾಯಬಾರದೆ” ಎನ್ನಬೇಕೆನಿಸುತ್ತದೆ.
ನನಗೆ ಇಷ್ಟು ದಿನ ಏನನ್ನಿಸುತ್ತಿತ್ತೋ ಅದಕ್ಕಿಂತ ಬೇರೆಯೇ ಥರ ಅನ್ನಿಸತೊಡಗಿದೆ:
ಮೊಗಳ್ಳಿಯವರ ಬಗ್ಗೆ!
ಐಯಾಮ್ಸಾರೀ!
ಮೊಗಳ್ಳಿಯವರ ‘ಬುಗುರಿ’ ಓದಿ ಮೆಚ್ಚಿಕೊಂಡಾಗ ನನಗನ್ನಿಸಿದ್ದಕ್ಕೂ, ನಂತರ ಅವರ ಪರಿಚಯವಾದಮೇಲೆ ಅವರ ಬಗ್ಗೆ ನನಗನ್ನಿಸಿದ್ದಕ್ಕೂ ಅಜಗಜಾಂತರ ವ್ಯತಾಸವಿತ್ತು. ಈಗ ಈ ತಕರಾರು ನೋಡಿ ಹೊಸದಾಗಿ ಏನೂ ಅನ್ನಿಸಲಿಲ್ಲ.
ಸರ್,
ವೀಡಿಯೋ ಕಾಣಿಸುತ್ತಿಲ್ಲ!! ತೆಗೆದು ಹಾಕಿದ್ರಾ!?
ಇಲ್ಲಿ ಏನೂ ಕಾಣಿಸುತ್ತಿಲ್ವಲ್ಲ?