ಮಂಗಗಳಾದ ಮೂವರು ಹುಡುಗರು [ಒಂದು ಹಳೆಯ ಕಥೆ]

 
‘ಆತನನ್ನು ಇವರೆಲ್ಲಾದರೂ ಕೊಂದುಬಿಟ್ಟರೆ ಮಾರನೇ ದಿನವೇ ನಾನು ನಮ್ಮ ಧರ್ಮ ಬಿಟ್ಟುಬಿಡುವೆ’.
ನಾನು ನನ್ನ ಉಮ್ಮನ ಮುಂದೆ ಜಗಳಕ್ಕೆ ಹೋಗುವವನಂತೆ ಹಠ ಹಿಡಿಯುತ್ತಾ ಕೂತುಬಿಟ್ಟೆ. ಆಕೆ ಒಲೆಯ ಮುಂದೆ ಅನ್ನಕ್ಕೆ ನೀರಿಟ್ಟು ಸುಮ್ಮನೇ ನಿಂತಿದ್ದಳು. ಬೆಳಗ್ಗೆಯೇ ಪೇಪರ್ ಓದಿದ್ದ ನನ್ನ ಬಾಪಾ ಸಲ್ಮನ್ ರಷ್ದಿ ಎಂಬುವನು ಸೈತಾನನ ಅಡಿಯಾಳಿನಂತೆ ದೇವರನ್ನು ಮಹಮದ್ ನೆಬಿ ಪ್ರವಾದಿಯನ್ನೂ ಹಾಗೂ ಇಷ್ಟೂ ಸಾಲದೆಂಬಂತೆ ಇಡೀ ಇಸ್ಲಾಂ ಧರ್ಮವನ್ನೂ ತಮಾಷೆ ಮಾಡಿ ಕಥೆಯೋ ಮಣ್ಣಾಂಗಟ್ಟಿ ಏನನ್ನೋ ಬರೆದಿರುವುದು ಹಾಗೂ ಇರಾನ್ ಎಂಬ ದೇಶದ ಆಯತುಲ್ಲಾ ಖೋಮೇನಿ [...]

ಕಾಲಪ್ರವಾಹ ಮತ್ತು ಕಡಲಹಂದಿ

 

ಏನು ಬರೆಯಲಿ? ಈ ವಾರವೆಲ್ಲಾ ಬೇರೆ ಏನೂ ಮಾಡಲು ಹೋಗದೆ ಬರೆಯ ಆಫೀಸಿನ ಕೆಲಸಗಳನ್ನು ಮಾಡಿಕೊಂಡು ಸುಮ್ಮನೆ ಕುಳಿತಿದ್ದೆ. ಈಶಾನ್ಯ-ಭಾರತ ಪ್ರವಾಹದಲ್ಲಿ ಮುಳುಗಿ ಹೋಗಿ ರೈಲುಗಳೂ ಓಡಾಡದೆ ಊರಿಂದ ಪತ್ರಗಳೂ ಬರಲಿಲ್ಲ. ನಾಲ್ಕೈದಾರು ವಾರಗಳಿಂದ ‘ಪತ್ರಿಕೆ’ಯೂ ಬಂದಿಲ್ಲ. ಊರಿನಿಂದ ಉಮ್ಮ ಫೋನ್ ಮಾಡಿ ಅವಳ ತಲೆನೋವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ ಅಂತ ಹೇಳಿದಳು. ತಂಗಿಫೋನ್ ಮಾಡಿ ಅಷ್ಟುದೂರ ಊರಿನಲ್ಲಿ ಹಾಗೆಲ್ಲಾ ನಿರ್ಗತಿಕನಂತೆ ಅಲೆದಾಡಬೇಡ. ನಮಗೆ ಇಲ್ಲಿ ಹೆದರಿಕೆ ಆಗುತ್ತಿದೆ ಅನ್ನುತ್ತಿದ್ದಳು.
 ನನಗೆ ಯಾಕೋ ನಾನು ಮಂಗಳೂರಿನ ಬೀದಿಗಳಲ್ಲಿ [...]

ನಕ್ಸಲ್ ಬಾರಿ ಮತ್ತು ದೂಲಾಬಾರಿ

 
ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವೆ. ಹಗಲೆಲ್ಲ ನಿದ್ದೆ ಹೊಡೆದೆ. ಈ ಬರೆಯವುದು ಮತ್ತು ಎಲ್ಲವನ್ನು ವಿವರಿಸುತ್ತಾ ಇರುವುದು ಎಂತಹ ಬೇಜಾರಿನ ಸಂಗತಿ ಅಂತ ಅನ್ನಿಸಿ ಸುಮ್ಮನೇ ಮತ್ತೆ ನಿದ್ದೆ ಹೋಗುತ್ತಿದ್ದೆ. ಹೋಗಲಿ ಬಿಡಿ. ಸುಮ್ಮನೆ ಬರೆ ನನ್ನ ಕುರಿತೇ ಕೊರೆಯದೆ ಬೇರೆ ಏನಾದರೂ ಹೇಳುವೆ.
 ಈ Rainer Maria Rilke ಎಂಬ ಜರ್ಮನಿಯ ಮಹಾಕವಿ Rodin ಎಂಬ ಫ್ರೆಂಚ್ ಮಹಾಶಿಲ್ಪಿಯ ಕಾರ್ಯದರ್ಶಿಯಾಗಿದ್ದ. ಒಂದು ದಿನ ಏನೋ ಸಂಕಟದಲ್ಲಿ ಏನೋ ಯೋಚಿಸುತ್ತಾ ನದಿಯೊಂದರ ದಂಡೆಯ ಮೇಲೆ ಶತಪಥ ಹಾಕುತ್ತಿದ್ದ. ಇದ್ದಕ್ಕಿದ್ದಂತೆ ಅದೇನು [...]

ಫ್ರೆಡರಿಕೋ ಗಾರ್ಸಿಯಾ ಲೋರ್ಕಾನ ಒಂದು ಕವಿತೆ

 ಒಂದು ಅಳಲು
 

ಬಿಡದಿರು ನನ್ನ ಕಳೆದು ಕೊಳ್ಳಲು ಯಾವತ್ತೂ ನಿನ್ನ
ಕಡೆದ ಕಲ್ಲಿನಂತಹ ನಿನ್ನ ಕಣ್ಣ ಅಚ್ಚರಿಯನ್ನ
ಇರುಳು ಕೆನ್ನೆಗೆ ಒತ್ತುವ ಒಂದು ಹೂವಂತಹ
ನಿನ್ನ ಉಸಿರ ಸುಯಿಲನ್ನ.
ಹೆದರಿಕೆ ಇರಲುಇಲ್ಲಿ ಈ ತೀರದಲ್ಲಿ.
ಕವಲೇ ಇರದ ಕಾಂಡದಂತೆ.ಅದಕ್ಕಿಂತಲೂ ಬೇಸರ
ಹೂವೇ ಇರದಿರುವುದು,ತಿರುಳು,ಆವೆಭೂಮಿ
ನನ್ನ ನರಳುವಿಕೆಯ ಎರೆ ಹರಿದಾಡಲು
ನೀ ನನ್ನ ಅವಿತಿರುವ ನಿಧಿ, ನನ್ನ ಶಿಲುಬೆ
ಹೆಪ್ಪುಗಟ್ಟಿದ ತಳಮಳ
ನಾನು ಸಾಕುನಾಯಿ .ನೀನು ಮಾತ್ರ ಧಣಿ
ಬಿಡದಿರು ಪಡೆದ ಈ ಎಲ್ಲವ ಕಳಕೊಳ್ಳಲು
ನದಿಯ ನಿನ್ನ ಕವಲುಗಳನ್ನು ಕಳೆದ ನನ್ನ
ಶರತ್ತಿನ ಎಲೆಗಳಿಂದ ಪೋಣಿಸಿಕೋ.
 

ಸುಂದರಿಯೂ ಕುರೂಪಿಯೂ

 ಕನ್ನಡದ ಒಂದೊಂದೇ ಅಕ್ಷರಗಳನ್ನು ಪ್ರೀತಿಯಿಂದ ಮೈಸವರುತ್ತಾ, ಜೋಡಿಸುತ್ತಾ, ಚಂದ ನೋಡುತ್ತಾ ಬಹಳ ದಿನಗಳ ಬಳಿಕ ನಿಮಗೆ ಬರೆಯುತ್ತಿರುವೆ. ಯಾಕೋ ಅಹ್ಲಾದವೆನಿಸುತ್ತದೆ. ಹದುಳದಲ್ಲಿ ಹುಣ್ಣಿಮೆ ಮೂಡಿದಂತೆ. ಬೇಂದ್ರೆಯವರಿಗೆ ಮಲ್ಲಿಕಾರ್ಜುನ ಮನ್ಸೂರರ ಹಾಡು ಕೇಳಿ `ಬಿಸಿಲ ಹಣ್ಣನುಂಡು ಚಂದ್ರನ ಜೇನು ಮದ್ದಂತೆ ‘ಅನಿಸಿತ್ತಂತೆ. ನಾನು ಈ ದಿನ ಸಂಜೆ ನಾಲ್ಕು ಗಂಟೆಗೇ ಚಂದ್ರನ ಬೆಳಿನಲ್ಲಿ ನನ್ನ ನೆರಳನ್ನು ಕಂಡು ಚಕಿತಗೊಂಡೆ.ಇಲ್ಲಿ ಈಗಲೇ ಚಳಿಗಾಲ ಮೊದಲಾಗಿ ಮಧ್ಯಾಹ್ನದ ಚಂದ್ರನಂತಹ ಬಿಸಿಲಲ್ಲಿ ಬೆಚ್ಚಗೆ sweater ಹಾಕಿಕೊಂಡು ಓಡಾಡುತ್ತಿರುವೆ. ಈಗಂತೂ ಈ ಚಳಿ ಬಿಸಿಲಲ್ಲಿ ಈ ಊರು [...]

ಹಾಲು ಕುಡಿದ ಹುಡುಗಾ- ಒಂದು ಕತೆ

 [ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬರೆದ ಈ ನಾಚುಗೆಯ ಕತೆಯನ್ನು ಈಗಲೂ ಅಷ್ಟೇ ನಾಚುಗೆಯಿಂದ ಈ ಬ್ಲಾಗಿನಲ್ಲಿ ಅಡಗಿಸಿಡುತ್ತಿರುವೆ. ಈ ಕತೆಗೆ ಹೊಸತಾಗಿ ಚಿತ್ರಗಳನ್ನು ಬರೆದ ಚರಿತಾ ರಿಗೆ ಈ ಕಥೆಗಾರ ಚಿರಋಣಿ ]
 
 

     ಆ ಮೂರು ಜನ ಹೆಂಗಸರು ನದಿಬಟ್ಟೆಯ ಗಂಟು ಹೊತ್ತು ಒಂದು ಮೆಟ್ಟಲು, ಎರಡು ಮೆಟ್ಟಲು, ಮೂರು ಮೆಟ್ಟಲು ಜರಿದ ಬರೆ ಇಳಿದು ಸೊಂಟಕ್ಕೆ ಸೊಂಟಕುಕ್ಕಿ ನನ್ನ ಕರೆದರು.
‘ಹಾ ಹುಡುಗ, ಏ ಹುಡುಗ, ಏ ಹಾಳು ಗಂಡಾದವನೇ, ಬಾ ಬಾಲ್ಯಕಾರ ಹುಡುಗನೇ [...]

ಇಂದೆನಗೆ ಆಹಾರ ಸಿಕ್ಕಿತು!

ಎಷ್ಟು ಬರೆಯಬೇಕೆಂದು ಕುಳಿತರೂ ಏನೂ ಬರೆಯಲಾಗುತ್ತಲೇ ಇಲ್ಲ. ಇಷ್ಟು ಹೊತ್ತಾದರೂ ಬೆಳಗು ಇನ್ನೂ ದಿಕ್ಕೆಟ್ಟು ಮಲಗಿರುವಂತೆ ಕಾಣಿಸುತ್ತಿದೆ. ಯಾವಾಗಲೂ ಎದ್ದೊಡನೆ ಕಾಣಿಸುತ್ತಿದ್ದ ಅರಬೀ ಕಡಲಿನ ಒಂದು ಚೂರು ನೀಲಿ ಇನ್ನೂ ಮಂಜಿನಲ್ಲೇ ಮಲಗಿಕೊಂಡಿದೆ. ನದಿ ದಾಟುತ್ತಿರುವ ಕಾಡಾನೆಯಂತೆ ಉದ್ದದ ಹಡಗೊಂದು ನದೀ ಮುಖವಾಗಿ ಬಂದರಿನ ಕಡೆಗೆ ನಿಧಾನಕ್ಕೆ ನಿಂತುಕೊಂಡೇ ಇರುವಂತೆ ಚಲಿಸುತ್ತಿದೆ. ನಿಂತೇ ಹೋಗಿದ್ದ ಮುಂಗಾರು ಮಳೆ  ಇದೀಗ ನೋಡಿದರೆ ಬೆಳಿಗ್ಗೆಯೇ ಬೆಳಕನ್ನು ನುಂಗಿಕೊಂಡು ಮೋಡವಾಗಿ, ಕಾವಳವಾಗಿ ಆಕಾಶದಲ್ಲಿ ಹಾಗೇ ನಿಂತುಕೊಂಡಿದೆ. ನಿಂತ ಗಾಳಿ, ನಿಂತ ಆಕಾಶ [...]

ರೂಮಿಯ ಸಹವಾಸ

  ಒಬ್ಬ ಸಾಧಾರಣ ಮತ ಪಂಡಿತ. ಇನ್ನೊಬ್ಬ ಅಲೆಮಾರೀ ದರ್ವೇಶಿ. ಒಬ್ಬ ದರ್ಮಗ್ರಂಥಗಳನ್ನು ಅರೆದು ಕುಡಿದವನು.ಇನ್ನೊಬ್ಬ ಕಾಡು ಮೇಡು ಗುಹೆ ಹೆಂಡದ ಪಡಶಾಲೆ ಇಲ್ಲೆಲ್ಲ ಅಲೆದಾಡಿ ಪಡೆದವನನ್ನು ಹುಡುಕುವ ದಾರಿಯಲ್ಲಿ ನನಗೆ ಸಾಂಗತ್ಯ ನೀಡುವವನೊಬ್ಬ ಬೇಕೆಂದು ಕಂಡಕಂಡಲ್ಲಿ ಅರಲುವವನು.
 `ಸಂಗಾತಿ ದೊರಕಿದರೆ ಏನು ನೀಡುತ್ತೀ?’
 `ನನ್ನ ಶಿರವನ್ನು’
 `ಹಾಗಾದರೆ ನಿನಗೆ ಸಾಂಗತ್ಯ ಬೇಕಾಗಿರುವುದು ಜಲಾಲುದ್ದೀನ್ ರೂಮಿಯದ್ದು’ 
ಹೀಗೆ ಅಫಘಾನಿಸ್ತಾನದ ತಬ್ರೀಜ ಎಂಬಲ್ಲಿನ ಶಂಷ್ ಎಂಬ ಸಂತ ಜಲಾಲುದ್ದೀನ್ ರೂಮಿ ಎಂಬವನನ್ನು ಆತ್ಮಸಾಂಗತ್ಯಕ್ಕಾಗಿ ಸುಮಾರು ಏಳುನೂರ ಐವತ್ತು ವರ್ಷಗಳ ಹಿಂದೆ ಒಂದು ಸಂಜೆ ಭೇಟಿಯಾದ ಅಂತ [...]

ಷಿಲ್ಲಾಂಗಿನ ನಡೆಯುವ ಸುಖ

 
ಈವಾರ ನಿಮಗೆ ಏನು ಕತೆ ಹೇಳಲಿ? ಯಾವತ್ತೂ ಇಲ್ಲದ ಹಾಗೆ ಈ ಸಂಜೆ ಮನೆಗೆ ಬಂದವನೇ ಸಂಕಟದಲ್ಲಿ ನಿದ್ದೆ ಹೋದೆ. ನಡುನಡುವೆ  ಕಣ್ಣು ಬಿಟ್ಟರೆ ಕಿಟಕಿಯ ಹೊರಗೆ ಸಂಜೆ ಕೆಂಪು ಬೆಳಕಲ್ಲಿ ಮಕ್ಕಳು ಆಟ ಆಡುತ್ತಿದ್ದರು. ಹೆಂಗಸರು ಎಲೆ ಅಡಿಕೆ ಜಗಿಯುತ್ತಾ ಬಯಲಲ್ಲಿ ಕಾಲು ನೀಡಿಕೊಂಡು ಮಾತನಾಡುತ್ತಿದ್ದರು. ನಾನು ಹಠ ಹಿಡಿದು ನಿದ್ದೆ ಹೋಗಲು ನೋಡುತ್ತಿದ್ದೆ. ಯಾಕೋ ಕೈಕಾಲುಗಳಲ್ಲೆಲ್ಲಾ ಸಂಕಟ. ಬೆಂಗಳೂರಿನ, ಗಾಂಧಿ ಬಜಾರಿನ ಸಂಜೆ, ಮಾವಿನ ಹಣ್ಣು, ಕೊತ್ತಂಬರಿ ಸೊಪ್ಪು, ಮಲ್ಲಿಗೆ ಹೂವಿನ ಪರಿಮಳ ಏನೇನೆಲ್ಲಾ [...]

ಹತ್ತು ವರುಷದ ಹಿಂದೆ ಮನೆಯೊಳಗೆ ಬಂದ ಪ್ರೀತಿಯ ಬಸ್ಸು

ಮಂಗಳೂರಿನ ಮಳೆಗೆ ಬೇಜಾರು ಬಂದು ಹೋಗಿ, ರಜೆ ಹಾಕಿ ಬಸ್ಸಿನಲ್ಲಿ ಕುಳಿತು, ಮಳೆಯ ಮಂಗಳೂರನ್ನು ದಾಟಿ, ಮಳೆ ಬೀಳುತ್ತಲೇ ಇರುವ ಕೊಡಗನ್ನು ದಾಟಿ, ಮಳೆಯ ಮೋಡ ಗುಮ್ಮನ ಹಾಗೆ ಸುಮ್ಮನೇ ನಿಂತಿರುವ ಮೈಸೂರಿನಲ್ಲಿ ಬೆಚ್ಚಗೆ ಹೊದ್ದುಕೊಂಡು ಕೈಗೆ ಸಿಕ್ಕಿದ ಪೇಪರುಗಳನ್ನೆಲ್ಲ ನಿರುಕಿಸುತ್ತ ಕೂತಿದ್ದೆ.
ಹುಬ್ಬು ಗಂಟು ಮಾಡಿಕೊಂಡು ಕಣ್ಣುಗಳನ್ನು ಕಿರಿದುಗೊಳಿಸಿ ನೆತ್ತಿಯನ್ನೆಲ್ಲ ನೆರಿಗೆ ಮಾಡಿಕೊಂಡು ಪೇಪರುಗಳನ್ನು ತಿನ್ನುವ ಹಾಗೆ ಓದುವುದು ನನಗೆ ಸಣ್ಣದಿರುವಾಗಿನಿಂದಲೇ ಬೆಳೆದು ಬಂದಿರುವ ಕೆಟ್ಟಚಾಳಿ. ಈ ಕೆಟ್ಟಚಾಳಿಯಿಂದಲೇ ನಾನು ಹಾಳಾಗಿರುವುನೆಂದೂ, ತಲೆ ಬೇನೆ ಬಂದು ನರಳುವುದೆಂದೂ, [...]

ಉಮಿಯಾಮ್ ಎಂಬ ನಿಂತ ನದಿ

ನಿಮ್ಮ ಪತ್ರವಂತೂ ಬರಲೇ ಇಲ್ಲ. ಆದರೂ ನಿಮಗೆ ಬರೆಯುತ್ತಿರುವೆ ಯಾಕೆ ಗೊತ್ತಿಲ್ಲ. ಹೇಗಿತ್ತು ನಿಮ್ಮ ಹುಟ್ಟು ಹಬ್ಬ? ಇಲ್ಲಿ ಈಗ ಹೂ ಅರಳುವ ಕಾಲ ಶುರವಾಗಿದೆ. ಬೋಳುಮರಗಳ ತುಂಬ ಹೂ. ಬೇಲಿಯಲ್ಲಿ ಹೂ, ಹುಲ್ಲಿನ ದಳಗಳಲ್ಲಿ ಹೂ. ಇನ್ನು ಮುಂದೆ ಸೆಪ್ಟೆಂಬರ್‌ವರೆಗೆ ಒಂದಿಲ್ಲೊಂದು ಹೂಗಳು ಅರಳುತ್ತಲೇ ಇರುತ್ತದೆ. ಈವತ್ತು ಸಂಜೆ ಇಡೀ ದಿನ ಮೋಡಕವಿದು ಕೊಂಚ ಹೊತ್ತು ಸೂರ್ಯನ ಬೆಳಕಿತ್ತು. ನಸು ಬೆಳಕಲ್ಲಿ ಬೀಸುವ ಗಾಳಿಗೆ ಪ್ಲಂ ಮರಗಳ ತುದಿಯಲ್ಲಿ ಚೆರ್ರಿಗಿಡಗಳ ತುದಿಯಲ್ಲಿ ಬೆಳ್ಳಗೆ ಕೆಂಪಗೆ ಚಿಟ್ಟೆಗಳಂತೆ [...]