ಮೈಸೂರಿನ ಮುದುಕನ ಬೆರಳ ಪರಿಮಳ

 ಎಷ್ಟೇ ಕೀಟಲೆ ಮಾಡಬಾರದೆಂದಿಟ್ಟುಕೊಂಡರೂ ಹಾಗೆ ಮಾಡಲಾಗದಿರುವುದೇ ಇಲ್ಲ  ಎಲ್ಲ ಕೀಟಲೆ ಮುಗಿಸಿ ಇನ್ನು ಗಂಭೀರವಾಗಿರಬೇಕೆಂದುಕೊಂಡರೆ ಆತ ಫೋನ್ ಮಾಡಿ ‘ಎಲ್ಲಿದ್ದೀಯಾ?’ ಎಂದು ಕೇಳುತ್ತಾನೆ.
 ’ಇಲ್ಲೇ ಕಣೋ ಮುಂಬೈನಲ್ಲಿ’ ಎಂದು   ಸುಳ್ಳು ಹೇಳಿ ಆತನಿಗೆ ಫೋನ್ ನಲ್ಲಿ ಮೈಸೂರು ನಗರದ ನಾನಾ ಸದ್ದುಗಳನ್ನು ಕೇಳಿಸುತ್ತೇನೆ.ಆತ ಇದು ಮುಂಬೈ ಎಂದೇ ತಿಳಿದು ಸಖ ತ್ ಸಂಕಟ ಪಟ್ಟುಕೊಳ್ಳುತ್ತಾನೆ. ‘ನೀನು ಬಿಡು ಮಾರಾಯ ಸಖತ್ ಸುತ್ತುತ್ತೀಯಾ .ನಾನಾದರೋ ನೋಡು ಪಾಠ ಮುಗಿಸಿ ಪರೀಕ್ಷೆ ಮುಗಿಸಿ ಈಗ ಮೌಲ್ಯಮಾಪನ ಮುಗಿಸಿ ಟ್ಯಾಬುಲೇಷನ್ ನಡೆಸುತ್ತಾ ಇರುವೆ [...]

ಲಂಕೇಶ್ ಪತ್ರಿಕೆಗೆ ಹದಿನೈದು ತುಂಬಿದಾಗ

 [೧೯೯೫ ರಲ್ಲಿ ಬರೆದದ್ದು]
ಆಗ ನಾವು ಹುಡುಗರು.
ಹೈಸ್ಕೂಲಿನ ನಡುವಿನ ಕಾಲ.
ಸಿಕ್ಕ ಸಿಕ್ಕ ಚಂದಮಾಮ. ಬಾಲಮಿತ್ರಗಳನ್ನೂ ಕಾಡಿ,ಬೇಡಿ. ಕಡತಂದು,ಓದಿ ಮುಗಿಸಿ, ಫ್ಯಾಂಟಮ್, ಶೂಜಾ, ಮಜನೂ, ಶೂರಿಗಳು ಇನ್ನೊಂದು ಕಂತಿನಲ್ಲಿ ಏನು ಸಾಹಸ ಮಾಡುವರು ಎಂದು ಊಹಿಸಿ ಕಾದು ಕುಳಿತು ಮೊಣಕಾಲುಗಳ ನಡುವೆ ಅವರ ಚಿತ್ರಗಳನ್ನಿಟ್ಟುಕೊಂಡು ಕುಕ್ಕರಗಾಲ್ಲಲ್ಲೇ ನೋಡಿ ಮುಗಿಸಿ ಇನ್ನೇನು ಇನ್ನೇನು ಎಂದು ತಲ್ಲಣಗೊಳ್ಳುತ್ತಿದ್ದ ದಿನಗಳು.
 ಎಲ್ಲವೂ ಬೇಕಾಗಿತ್ತು. ಏನೂ ಬೇಡವಾಗುತ್ತಿತ್ತು. ಜೊತೆಯಲ್ಲಿ ಓದುತ್ತಿದ್ದ ಹುಡುಗಿಯರೂ ಬೆಳೆದು ಅವರ ಆಕಾರಗಳು ಬದಲುಗೊಂಡು ನಾವು ಬೆಳೆಯುತ್ತ ಉಟ್ಟ ಅಂಗಿಚಡ್ಡಿ ಬಿಗಿಯುತ್ತ ಇನ್ನೂ ಚಡ್ಡಿ [...]

ಒಂದು ರೇಡಿಯೋ ಕವಿತೆ

ಆಗ ರೇಡಿಯೋ ಇರಲಿಲ್ಲ . ಅದರ ದೊಡ್ಡ ಬೀಟೆಯ ಮರದ ಪೆಟ್ಟಿಗೆ ಮಾತ್ರ ಉಳಿದಿತ್ತು.
ಒಳಗೆ ಅಪ್ಪನ ಬೀಡಿ ಪೊಟ್ಟಣ, ಅರಬಿ ಪುಸ್ತಕ, ಕೆಮ್ಮಿನ ಔಷದಿ,
ಮೊಲದ ಬೇಟೆಗೆ ತಂದು ಇಟ್ಟಿದ್ದ ನಾಡಕೋವಿಯ ತೋಟೆ,
ಅವರ ಕನ್ನಡಕ,ಅಂಗಡಿಯ ಸಾಲದ ಪುಸ್ತಕ, ನಮಗೆ ಕದ್ದು ಮುಚ್ಚಿ
ಮುದ್ದು ಮಾಡಲು ತಂದಿಟ್ಟಿದ್ದ ಮಿಠಾಯಿ  ಮತ್ತು ಅವರ ಮೂಗು ಒರೆಸಿಟ್ಟ ಕರ್ಚೀಪು.
ನಮ್ಮಷ್ಟಕ್ಕೆ ನಮಗೆ ಯಾವುದೂ ಎಟುಕುತ್ತಿರಲಿಲ್ಲ. . . . .
ಮತ್ತು ರೇಡಿಯೋ ಅಂದರೆ ಏನು ಅಂತ ಗೊತ್ತಿರಲಿಲ್ಲ.
ಈಗ ರೇಡಿಯೋ ಕೈಗೆಟುಕುತ್ತಿದೆ. ಅಪ್ಪ ನೋಡಲು ಸಿಗುತ್ತಿಲ್ಲ

ಷಿಲ್ಲಾಂಗ್ ನಿಂದ ಒಂದು pleasing ಪತ್ರ

ಒಂದು ಸುಂದರವಾದ ಉದ್ದವಾದ  ಹಗಲನ್ನು ಸುತ್ತಿ ಮುಗಿಸಿ ಬಂದು ನಿಮಗೆ ಬರೆಯಲು ಕುಳಿತಿದ್ದೇನೆ. ಯಾವ ಹಂಗೂ ಇಲ್ಲದ ಯಾವ ಗ್ರಂಥ, ವಿಚಾರ, ವಿಮರ್ಶೆ, ಚಿಂತನೆ ಏನೂ ಇಲ್ಲದ ಹಗಲು. ಸುಮ್ಮನೆ ಆಕಾಶವನ್ನೇ ನೋಡುತ್ತಿದ್ದೆ. ನಾನು ಎಂದೂ ನೋಡಿರದ ಕಡುನೀಲಿ ಆಕಾಶ. ದೂರದಿಂದ ದಾರಿ ಕೇಳಿಕೊಂಡು ತುಂಬಾ ದೂರದ ನೆಂಟರಂತೆ ಸಂಬಂಧ ಹುಡುಕಿಕೊಂಡು ಬರುತ್ತಿರುವ ಮೋಡಗಳು ಅಲ್ಲೇ ಸಂಕೋಚದಿಂದ ನಿಂತಿವೆ. ಅದರ ಹಿಂದಿರುವ ಮೋಡಗಳ ಗುಂಪು ತಡೆಹಿಡಿಯಲಾಗದೆ ಅಲ್ಲೇ ನಿಂತುಕೊಂಡಲ್ಲೇ ಮಳೆ ಸುರಿಸುತ್ತಿವೆ. ದೂರದಲ್ಲೆಲ್ಲೋ ಸುರಿಯುತ್ತಿರುವ ಮಳೆಯ ಗಾಳಿ [...]

ಶಾಲೆಯೆಂಬ ಲೋಕದ ಎಳೆಯರಾದ ನಾಯಕರು

 
ಈ ವಾರದಲ್ಲಿ ಪುಟ್ಟ ಹುಡಗರಿಬ್ಬರ ಭಾವಚಿತ್ರಗಳಿರುವ ಜಾಹೀರಾತುಗಳೆರಡು ಪತ್ರಿಕೆಯೊಂದರ ಮೂಲೆಯಲ್ಲಿ ಬಂತು. ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕ, ವಿಧೇಶ ಪ್ರವಾಸ ಇತ್ಯಾದಿಗಳಿಗೆ ಸಂತೋಷ ಸೂಚಿಸಿ ಬರುವ ಜಾಹೀರಾತುಗಳನ್ನೂ, ಮರಣ ವಾರ್ಷಿಕ ಇತ್ಯಾದಿಗಳಿಗೆ ಕಂಬನಿಯಿಡುವ ಶ್ರದ್ಧಾಂಜಲಿಗಳನ್ನೂ ನೋಡಿ ಈ ಚಿತ್ರಗಳ ಜೊತೆ ಸಂತೋಷವನ್ನೋ, ಬೇಸರವನ್ನೋ ಹಂಚಿಕೊಳ್ಳುವ ನನಗೆ ಈ ಹುಡುಗರ ಚಿತ್ರವನ್ನೂ, ಅದರ ಕೆಳಗೆ ಬರೆದಿರುವ ಅಕ್ಷರಗಳನ್ನೂ ಓದಿ ಸಂತೋಷ ಪಡಬೇಕೋ, ಬೇಜಾರುಮಾಡಿಕೊಳ್ಳಬೇಕೋ ಗೊತ್ತಾಗಲಿಲ್ಲ. ಈ ಹುಡುಗರಿಬ್ಬರೂ ಎರಡು ಪುಟ್ಟ ಶಾಲೆಗಳ, ಪುಟ್ಟ ಚುನಾವಣೆಯಲ್ಲಿ ಗೆದ್ದು ಬಂದ ಶಾಲಾ [...]

ಹೂವಿನ ಹೆಸರಿನ ಹುಡುಗಿ [ಷಿಲ್ಲಾಂಗ್ ಪತ್ರ ೪]

ಮನಸಲ್ಲಿ ಆಗುತ್ತಿರುವುದನ್ನೆಲ್ಲಾ ನಿಮಗೆ ಹೇಗೆ ಬರೆದು ತಿಳಿಸಲಿ? ನನ್ನ ಬಾಲ್ಯಕಾಲದ ಬೆಳದಿಂಗಳಿನಂತಹ ಬಿಸಿಲು ಇಲ್ಲಿ ಈಗ ಮರುಕಳಿಸುತ್ತಿದ್ದೆ. ಬಿಸಲಿಗೆ ಮತ್ತು ಬೀಸುವ ಗಾಳಿಗೆ ಇಷ್ಟು ಸುಖವಿದೆ ಎಂದು ಈಗ ಮತ್ತೆ ಗೊತ್ತಾಗುತ್ತಿದೆಮಕ್ಕಳು ಬೆಳಗ್ಗಿನಿಂದ ಸೂರ್ಯಕಂತುವವರೆಗೆ ಬಯಲಲ್ಲಿ ಯಾವ ಆಯಾಸವೂ ಇಲ್ಲದೆ ಇಲ್ಲಿ ಆಡುತ್ತಿರುತ್ತಾರೆ. ಬೀಸುವಗಾಳಿಗೆ ಮೈ ಒಡ್ಡಿ ನಡೆಯುವ ಮುಗುದೆಯರು. ನಾವು ಎಂತಹ ಚಂದದ ಭೂಮಿಯಲ್ಲಿ ಬದುಕಿದ್ದೇವೆ ಎಂದು ಗೊತ್ತಾಗಿ ಮನಸ್ಸು ತುಂಬಿಕೊಳ್ಳುತ್ತಿದ್ದೆ. ಸುಮ್ಮನೇ ಒಬ್ಬನೇ ಇಲ್ಲಿಯ ವಾರ್ಡ್ ಲೇಕ್ ನಲ್ಲಿ ನಡು ಮಧ್ಯಾಹ್ನ ನಡೆಯುತ್ತಿದ್ದೆ. ಸೂರ್ಯನ [...]

[ಒಂದು ಹಳೆಯ ಕವಿತೆ]

ಹುದುಗಿಸಿಡು ಇದನು ಇಲ್ಲೆ ಎಲ್ಲಾದರೂ….
 

ಹುದುಗಿಸಿಡು ಇದನು ಇಲ್ಲೆ ಎಲ್ಲಾದರೂ ಎಲೆಯ ಮರೆಯಲ್ಲಿಡು
ಅದನು ನನಗೇ ತಿರುಗಿಸಿಕೊಡು.
 
 ನಿದ್ದೆಯಿಂದೆದ್ದು ಆಕಳಿಸುತ ನಿಂತ ಕಾಮದೇವತೆ
 ಮಗು ನೀನು. ಎಚ್ಚರಿಸಿ ಮೆಲ್ಲಗೇ ಕಾಲು ಕೆದರಿ
 ಕಾಮಿಸಲು ಕರೆದೊಯ್ಯಬಂದೆ ನಾನು
 ಯಾಕಳುವುದು ಸಂಜೆ ನೀನು?

ಮಳೆಗೆ ತೀರಿದ ಎರಡು ಜೀವಗಳು

 
ಈ ಮಳೆ ಚಳಿಗಾಳಿಯ ನಡುವೆ ತೀರಿಹೋದ ಒಂದು ಗಂಡಸು-ಒಂದು ಹೆಂಗಸು, ಅಥವಾ  ಒಬ್ಬಳು ಮುದುಕಿ-ಒಬ್ಬ ಮುದುಕ ಅಥವಾ ಇಬ್ಬರನ್ನೂ ಸೇರಿಸಿದರೆ- ತೀರಿ ಹೋದ ಎರಡು ಜೀವಗಳು.
ನಾವು ಹೇಗೆ ಕರೆದರೂ ಸಿಟ್ಟುಮಾಡಿಕೊಳ್ಳದೆ, ಗೊಣಗದೆ ಇವರಿಬ್ಬರೂ ತಮ್ಮ ಪ್ರತ್ಯೇಕ ಗೋರಿಗಳಲ್ಲಿ ಮಣ್ಣಲ್ಲಿ ಮಣ್ಣಾಗಿ ಮಲಗಿದ್ದಾರೆ. ಹಾಗೆ ನೋಡಿದರೆ ಈ ಇಬ್ಬರು ಒಬ್ಬರನೊಬ್ಬರು ನೋಡಿಯೇ ಇಲ್ಲ. ಒಬ್ಬರು ಬದುಕಿದ್ದದು ಇನ್ನೊಬ್ಬರಿಗೆ ತಿಳಿದೂ ಇಲ್ಲ. ಇವರ ಧರ್ಮಗಳು, ಇವರ ಧರ್ಮಗ್ರಂಥಗಳು, ಇವರಿಬ್ಬರ ದೇವರುಗಳು, ಇವರು ನಂಬಿಕೊಂಡ ಸ್ವರ್ಗ ನರಕಗಳು ಬೇರೆ ಬೇರೆಯೇ ಆಗಿವೆ. [...]

ಷಿಲ್ಲಾಂಗ್ ಪತ್ರ-೩

ಮಗುವೊಂದರ ಜೊತೆ
ಪ್ರೀತಿಯ ಲಂಕೇಶ್‌ರಿಗ,
ಮರಳಿ ಶಿಲ್ಲಾಂಗ್ ತಲುಪುವ ತನಕ ನಿಮಗೆ ಬರೆಯಲೇಬಾರದು ಅಂದುಕೊಂಡಿದ್ದೆ. ಆದರೆ ಯಾಕೋ ಈಗ ಈ ರಾತ್ರಿಯಲ್ಲಿ ಆಗುಂಬೆ ಘಾಟಿಯ ಕೆಳಗಿನ ಸೀತಾನದಿಯ ತಟದ ಈ ಜಾಗದಲ್ಲಿ ಕುಳಿತು ನಿಮಗೆ ಬರೆಯಬೇಕು ಅನ್ನಿಸುತ್ತದೆ. ಕೊಡಗು, ಬೆಂಗಳೂರು, ಮೈಸೂರು ಕೇರಳದ ವಯನಾಡು ಮಂಗಳೂರು ಎಲ್ಲ ಕಡೆ ಬಿಸಿಲಲ್ಲಿ ನಾಯಿ ಅಲೆದಂತೆ ಅಲೆದು ಈಗ ಮೂರು ನಾಲ್ಕುದಿನದಿಂದ ಎಲ್ಲೂ ಹೋಗದೆ ಏನೂ ಮಾಡದೆ ಇಲ್ಲಿ ಸುಮ್ಮನೆ ಕುಳಿತಿದ್ದೇನೆ. ಈ ಸೀತಾನದಿ ತಣ್ಣಗೆ, ಕಾಡೊಳಗೆ ಸದ್ದಿಲ್ಲದೆ ಮಡುಗಟ್ಟಿಕೊಂಡು ಕಪ್ಪಗೆ ಹರಿಯುತ್ತಿದೆ. [...]

ಒಂದು ಹಳೆಯ ಪತ್ರ

 
ಪ್ರಿಯ ಸಖ,
ಈ ಕಾಲಂ-ಗೀಲಂ ಎಲ್ಲ ಬಿಟ್ಟು ಸುಮ್ಮನೆ ಒಂದು ಪತ್ರ ಬರೆಯುತ್ತಾ ನಡುನಡುವೆ ನಿಂಬೂ ಟೀ ಹೀರುತ್ತಾ ಆಷಾಡದ ಈ ಜಡಿಮಳೆಯಲ್ಲೂ ಬೆವರುತ್ತಾ ಈ ನಡುವೆ ನಡೆದ ಸುಖ-ಸಂತೋಷಗಳನ್ನು ನೆನೆಸಿಕೊಳ್ಳುವುದು ಎಷ್ಟೊಂದು ಆಹ್ಲಾದದ ಕೆಲಸ ಗೊತ್ತಾ!ಯಾಕೋ  ಈಗ ಯಾರಾದರು ಏನಾದರು ಬರೆಯಲು ಹೇಳಿದರೆ ಕೊಲ್ಲಲು ಕರೆದುಕೊಂಡುಹೋಗುವ ಹಾಗೆ ಅನಿಸುತ್ತದೆ.
ಸಣ್ಣದಿರುವಾಗ ಕೊಡಗಿನ ಆ ಚಳಿಯಲ್ಲಿ ಬೆಳಗ್ಗೆ ಎದ್ದು ಅರಬೀ ಮದರ್ರಸಕ್ಕೆ ಕುರಾನ್ ಕಲಿಯಲು ಹೋಗಬೇಕಿತ್ತು.ಆಗಲೂ ಹೀಗೇ ಅನಿಸುತ್ತಿತ್ತು.ಆಗಲಾದರೆ ಕೈ ಹಿಡಿದು ಕರೆದೊಯ್ಯುತ್ತಿದ್ದ ಅಕ್ಕನಿಗೆ ಏನೋ ಸುಳ್ಳು ಹೇಳಿ ತಪ್ಪಿಸಿಕೊಳ್ಳಬಹುದಿತ್ತು.ಈಗ [...]

ರಿಲ್ಕ್ ಕವಿಯ ಇನ್ನೊಂದು ಸುನೀತ

ಬೆಳೆಯುವವಳು
 
ಎಲ್ಲವೂ ನಿಂತವು ಅವಳ ಎದುರಲ್ಲಿ ಲೋಕದಂತೆ.
ನಿಂತವು ಎಲ್ಲವೂ ಅವಳ ಎದುರಲ್ಲಿ ಎಲ್ಲ ಕರುಣೆ ಭಯಗಳ ಜೊತೆ
ಮರಗಳು ನಿಂತುಕೊಳುವಂತೆ. ನೇರ ಬೆಳೆದೂ ರೂಪವಿಲ್ಲದೆಯೂ
ಪೂರಾ ರೂಪದಂತೆ,ಧೈವದಂತೆ,ಲೋಕಕ್ಕೇ ಆಣತಿಯಂತೆ.
ಅವಳು ತಾಳಿಕೊಂಡಳು ಎಲ್ಲವ ಒಳಗೊಳಗೆ.
ಹಕ್ಕಿಯಂತೆ, ಹಾರುವಂತೆ ದೂರ
ಅರಿಯಲಾರದ ಎಲ್ಲವ ,ಇನ್ನೂ ಅರಿಯಬೇಕಾದವ,
ತಣ್ಣಗೆ ತುಂಬು ನೀರಕೊಡವ ಹೊತ್ತ ಹೆಂಗಸಂತೆ.
ಆಟದ ನಡುವೆ ಬದಲುಗೊಳ್ಳುತ್ತ, ಮುಂದಿನದಕೆಲ್ಲ
ಅಣಿಯಾಗುತ್ತಾ.
ಬೆಳ್ಳಗಿನ ಮೊದಲ ತೆರೆ ಬಿತ್ತು ಮೆಲ್ಲಗೆ ತೇಲುತ್ತ
ಅವಳ ತೆರೆದ ಮುಖಕ್ಕೆ,ಏನೂ ಕಾಣಿಸದಂತೆ
ಮತ್ತೆಂದೂ ಎತ್ತಿಕೊಳದಂತೆ , ಅವಳು ಕೇಳಿದ್ದಕ್ಕೆಲ್ಲಾ
ಒಂದೇ ಉತ್ತರದಂತೆ
‘ಮಗುವಾಗಿದ್ದವಳೇ ಎಲ್ಲ ನಿನ್ನಲ್ಲೇ …ನಿನ್ನಲ್ಲೇ’

ಷಿಲ್ಲಾಂಗ್ ಪತ್ರ-೨: ತುರಾ ಎಂಬ ಊರು

 
ಪ್ರೀತಿಯ ಲಂಕೇಶರಿಗೆ,
ಇಲ್ಲಿ ಈಗ ಹೊರಗೆ ಪೂರ್ತಿ ಚಂದಿರನ ಬೆಳಕು. ಮನಸಲ್ಲಿ ಏನೂ ಇಟ್ಟುಕೊಳ್ಳದೆ ನಿಮಗೆ ಬರೆಯುತ್ತಿರುವೆ. ಈ ಚಂದಿರನ ಬೆಳಕಲ್ಲಿ ಮಂಗಳೂರಿನ ಕಡಲು ಹೇಗೆ ಇರಬಹುದು, ಕೊಡಗಿನ ಕೋಟೆ ಬೆಟ್ಟ ಹೇಗೆ ಹೊಳೆಯುತ್ತಿರಬಹುದು, ಹಗಲೆಲ್ಲಾ ರಾಜಕಾರಣದ ಕುರಿತು ಬರೆದು ಇರುಳಲ್ಲಿ ನೀವು ಏನು ಯೋಚಿಸುತ್ತಿರಬಹುದು ಎಂದೆಲ್ಲಾ ಯೋಚಿಸುತ್ತಾ ಕುಳಿತಿರುವೆ.
 ಮೊನ್ನೆ ಇಲ್ಲಿಯ ಚುನಾವಣೆಯ ಕುರಿತು ಸಮೀಕ್ಷೆ ಬರೆಯಲು ತುರಾ ಎಂಬ ಊರಿಗೆ ಹೋಗಿ ಬಂದೆ.

ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ

 ಇಪ್ಪತ್ತು ವರ್ಷಗಳಹಿಂದೆ ಒಂದುದಿನ ವಿಶ್ವನಾಥನ ಚಪ್ಪಲಿಯನ್ನು ಬಡವರು ಕದಿಯದೇ ಇದ್ದಿದ್ದರೆ ಬಹುಶಃ ಆತ ಈ ದಿನಗಳಲ್ಲಿ ಒಂದು ದಿನ ಪೋಲೀಸರ ಗುಂಡಿಗೆ ಬಲಿಯಾಗುತ್ತಿದ್ದ ಅನಿಸುತ್ತಿದೆ. ಆತನ ಅಕ್ಕ ಹಸಿಹಸಿ ರೊಮಾಂಟಿಕ್ ಕವಿತೆ ಗಳನ್ನೂ ಕಡುಬಡವರ ಕುರಿತು ಲೇಖನಗಳನ್ನೂ ಬರೆಯುತ್ತಿದ್ದವಳು ಹೆಸರು ಮೀನಾಕ್ಷಿ ಅಂತ ಇಟ್ಟುಕೊಳ್ಳಿ ಆಂದ್ರದ ಪೋಲೀಸರ ಗುಂಡಿಗೆ ಈಗಾಗಲೇ ಆಹುತಿಯಾಗಿ ವರ್ಷಗಳೇ ಕಳೆದಿವೆ. ಮೀನಾಕ್ಷಿಯನ್ನು ಮದುವೆಯಾಗಿದ್ದ  ಕಾಮ್ರೇಡ್ ಕೂಡಾ ಇತ್ತೀಚೆಗಷ್ಟೇ ಪೋಲೀಸರ ಗುಂಡಿಗೆ ಬಲಿಯಾದ.
ಆದರೆ ಅದೃಷ್ಟವಶಾತ್ ಇಪ್ಪತ್ತು ವರ್ಷಗಳ ಹಿಂದೆ ಒಂದು ದಿನ ಒಂದು ಹಾಡಿಯಲ್ಲಿ [...]

ಮೂಸಾ ಮೊಯಿಲಿಯಾರರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟ ಜಂತುವೂ

[೨೪ ವರ್ಷಗಳ ಹಿಂದಿನ ನನ್ನ ಮೊದಲ ಕಥೆ-ಬರೆದದ್ದು ಯೋಚಿಸಿದರೆ ಜುಂ ಎನ್ನುತ್ತೆ]
 

                                                                         [ಚಿತ್ರಗಳು-ಚರಿತಾ]
ಕರುಣಾನಿಧಿಯೂ, ಕಾರುಣ್ಯಮಯನೂ ಆದ ಅಲ್ಲಾಹುವು ಮೊತ್ತ ಮೊದಲು ಆದಂಪಾಪಾ ಮತ್ತು ಅವ್ವಾಬೀಬಿ ಎಂಬ ಗಂಡು ಹೆಣ್ಣುಗಳನ್ನು ಸೃಷ್ಟಿಸಿದನು. ಆಮೇಲೆ ಅವರಿಗಾಗಿ ಭೂಮಿಯ ಮೇಲಿನ ಸಕಲ ಚರಾಚರ, ಜೀವಜಂತುಗಳನ್ನೂ, ಪಶುಪಕ್ಷಿಗಳನ್ನೂ, ಗಿಡಮರಗಳನ್ನೂ ಉಂಟು ಮಾಡಿದನು. ಆದರೆ ಹಾರುವ ಈ ಕೆಂಪು ಹೆಲಿಪೆಟ್ಟರನ್ನು ಆತನೇ ಉಂಟು ಮಾಡಿದನೇ…. ಆತ ಎಲ್ಲವನ್ನು ಕಾಣುವವನೂ, ಕೇಳುವವನೂ ಆಗಿದ್ದಾನೆ…. ಹಾಗಾದರೆ ಆ ಸರ್ವಶಕ್ತಿನಿಗೆ ಮೈನಾಡಿನ ರಬ್ಬರ್ ತೋಟದ ಮೇಲೆ ಭರ್ರ್ ಎಂದು ಹಾರಾಡುತ್ತಾ, [...]

ಷಿಲ್ಲಾಂಗ್ ಪತ್ರ-೧

[೧೯೯೮-೯೯ ರಲ್ಲಿ ಮೇಘಾಲಯದ ರಾಜಧಾನಿ ಷಿಲ್ಲಾಂಗಿನಿಂದ ನಾನು ಪಿ.ಲಂಕೇಶರಿಗೆ ಬರೆದ ಪತ್ರಗಳನ್ನು ಈಗ ಒಂದೊಂದಾಗಿ ಪೋಸ್ಟ್ ಮಾಡುತ್ತಿರುವೆ . ಓದಿ ಖುಷಿ ಪಡಿ ಎನ್ನದೆ ಇನ್ನೇನು ಹೇಳಲಿ.]

ಪ್ರೀತಿಯ ಲಂಕೇಶರಿಗೆ,
ಇಲ್ಲಿ ಈಗ ಫೆಬ್ರವರಿಯ ಗಾಳಿ ಬೀಸಲು ಶುರುವಾಗಿದೆ. ರಾತ್ರಿಯೆಲ್ಲಾ ಪೈನ್ ಮರಗಳ ಎಡೆಯಿಂದ ಬೀಸುವಗಾಳಿ. ಬೆಳಗ್ಗೆ ಏಳುವ ಮೊದಲೇ ಅಷ್ಟು ಎತ್ತರಕ್ಕೆ ಬಂದಿರುವ ಸೂರ್ಯ. ಮುಂಜಾನೆ ಆರು ಆರೂವರೆಯ ಹೊತ್ತಿಗೆ ಇಡೀ ಊರು ಮಂದಹಾಸದಂತಹ ಬಿಸಿಲಿನಲ್ಲಿ ಲಕಲಕ ಹೊಳೆಯುತ್ತಿರುತ್ತದೆ. ಮಧ್ಯಾಹ್ನದ ಹೊತ್ತು ಮಾರುಕಟ್ಟೆಯಲ್ಲಿ ಬಿದಿರುಬುಟ್ಟಿಯ ತುಂಬಾ ಕಿತ್ತಳೆ ಹಣ್ಣುಗಳನ್ನು ಇಟ್ಟುಕೊಂಡು ಮಾರಲು ಕುಳುತಿರುವ [...]

ಪಕ್ಷಿರಾಜಪುರದ ಪಿ.ಎಸ್.ವಸಂತನ ಕಥೆ

 
ಹುಣಸೂರಿನ ಬಳಿಯ  ಪಕ್ಷಿರಾಜಪುರದ ೨೦ ಹಕ್ಕಿಪಿಕ್ಕಿ ಮಂದಿಯನ್ನು ನೇಪಾಳದ ಪೋಲೀಸರು ವನ್ಯಜೀವಿ ರಕ್ಷಣಾ ಕಾಯಿದೆಯಡಿ ಬಂದಿಸಿದ್ದಾರೆ. ಇವರಲ್ಲಿ ಒಬ್ಬರು ಈಗ ನಿಮ್ಮ ಜೊತೆ ಯು ಟ್ಯೂಬ್ ನಲ್ಲಿ ಮಾತನಾಡಲಿರುವ ಪಿ.ಎಸ್. ವಸಂತ ಎಂಬ ಅದ್ಭುತ ಮಾತುಗಾರನ ನಾಲ್ಕನೆಯ ಹೆಂಡತಿ ಸೋನಾ.
ಹಾಗೆ ನೋಡಿದರೆ ಮರೆತ ಎಲೆಅಡಿಕೆ ತರಲು ಈ ವಸಂತ ರೈಲು ಇಳಿದು  ಹೋಗಿರದಿದ್ದರೆ ಈತನೂ ನೇಪಾಳದ ಪೋಲೀಸರ ಪಾಲಾಗುತ್ತಿದ್ದ.
ಈಗ ಈ ವಸಂತನಿಗೆ ಒಂದು ಕಡೆ ಖುಷಿ. ಇನ್ನೊಂದು ಕಡೆ ವಿರಹ.
 ಈ ಮಿಶ್ರ ಭಾವನೆಯನ್ನು ಈತನ ಮಾತುಗಳಲ್ಲೇ ಕೇಳಿ:

ಮಡಿಕೇರಿ , ದೇವರಕೊಲ್ಲಿ ,ಆಗುಂಬೆ ಇತ್ಯಾದಿ….

ತಲೆಯೊಳಗೆ ಏನೋ ಒಂದು ದುಂಬಿ ಹೊಕ್ಕವನ ಹಾಗೆ, ಒಬ್ಬನೇ , ಅನ್ಯಮನಸ್ಕನಾಗಿ ಕಳೆದ ಎರಡುದಿನಗಳಲ್ಲಿ ಮೈಸೂರಿನಿಂದ ಹೊರಟು ಪುನಃ ಇಲ್ಲಿಗೇ ಹೊರಟು ಬಂದೆ. ಬರಿಯ ಸುರಿವ ಮಳೆ ಮತ್ತು ಕಾರಿರುಳು.ಮಡಿಕೇರಿ-ಸಂಪಾಜೆ-ಹೆಬ್ರಿ-ಆಗುಂಬೆ-ತೀರ್ಥಹಳ್ಳಿ-ಶಿವಮೊಗ್ಗೆ-ಅರಸೀಕೆರೆ-ಮೈಸೂರು.ಇಲ್ಲಿ ಬಂದು ಇಷ್ಟು ಹೊತ್ತಾದರೂ ಹೋಗದ ಈ ಅನ್ಯಮನಸ್ಕತೆ! ಹೋಗಲಿ ಬಿಡಿ-ಈ ಚಿತ್ರಗಳನ್ನು ನೋಡಿ!

 [ಬೆಳ್ಳಂಬೆಳಗೆ ರಾಜಾಸೀಟು]                                                   [ಕಾಟಕೇರಿಯಲ್ಲಿ...]

[ಮದೆನಾಡಿನ ಬಳಿ]

 [ದೇವರ ಕೊಲ್ಲಿ]                                                           
[ಸೋಮೇಶ್ವರ]
ಉಳಿದಂತೆ ಬರಿಯ ಮಳೆ ಮತ್ತು ಕಾರಿರುಳು.
—————————————-
                           

ರಾಬಿಯಾಳಿಗೆ ಮದುವೆಯಾದ ಪ್ರಸಂಗ

`ಈ ಹಿಂದೆ ಕುಂಞಮ್ಮದನ ಮದುವೆಯ ಅಲ್ಲೋಲ ಕಲ್ಲೋಲದ ಕುರಿತು ಏನನ್ನೂ ಹೇಳದೆ  ನೀನು ಬಚಾವಾದೆ.ಈ ವಾರವೂ ನೀನು ಅದನ್ನು ಬರೆಯದೆ ಬೇರೆ ಏನಾದರೂ ಲಡಾಸು ಬರೆಯಲು ಹೋದರೆ ನಿನ್ನ ತಲೆಯ ಜೊತೆ ನನ್ನ ತಲೆಯೂ ಸಹಸ್ರ ಹೋಳಾಗುವುದು.ಆ ಕತೆ ಹೇಳಿ ಮುಗಿಸು ಮಾರಾಯ. ನಿನ್ನ ಜೊತೆ ನಾನೂ ಬದುಕಿಕೊಳ್ಳುತ್ತೇನೆ’ ಎಂದು ಆತ ಅಕ್ಕರೆಯಿಂದ ಕೇಳಿಕೊಳ್ಳುತ್ತಿದ್ದ.ನಾನು ಮನಸಿನ ಒಳಗೊಳಗೆ ಮುಸಿಮುಸಿ ನಗು ಬಂದರೂ ತೋರಿಸಿಕೊಳ್ಳದೆ ಸುಮ್ಮಗೆ ಕೇಳಿಸಿಕೊಳ್ಳುತ್ತಿದ್ದೆ.
 ’ಆ ಕೋಲಾಹಲದ ಮದುವೆಯ ಕುರಿತು ಈಗ ಏನು ಬರೆಯುವುದು?ಅದು ಸಂಭವಿಸಿ ಹತ್ತುಮೂವತ್ತು [...]

ಬಂದೇನವಾಜರ ಧರ್ಗಾದಿಂದ ಎರಡನೇ ಕವಿತೆ

 ಹೆಂಗಸರ ಹುಚ್ಚು , ಭಗವಂತ ಮತ್ತು ನಾನು

 
ಈ ಹೆಂಗಸರ ಮಧ ಇಂದು ಅತಿರೇಕಕ್ಕೆ ಹೋಗಿದೆ,
ಇವರ ಆರ್ತ ಕೂಗು ಭಕ್ತಿಯಂತೆ ಕೇಳಿಸುತ್ತಿದೆ.
ಮಲಗಿರುವ ಮಕ್ಕಳು ಕನಸಿಂದ ದಿಗ್ಗನೆ ಎದ್ದು ,ಬೆಳಕಲ್ಲಿ ಕಣ್ಣು ಕಾಣಿಸದೆ
ಕಕ್ಕಾವಿಕ್ಕಿಯಾಗಿ, ಹಾಗೇ ನೆಲದ ತಂಪಿಗೆ ಕೆನ್ನೆ ಒತ್ತಿ, ಭೂಮಿಯೊಳಗಣ ಸದ್ದ ಆಲಿಸುವ
ಆಟ ಆಡುತ್ತಿದ್ದಾರೆ. ಈ ಹೆಂಗಸರ  ಸಂಕಟ ಆಧ್ಯಾತ್ಮವಾಗಿಹೋಗಿದೆ.
ಈ ಹಾಸ್ಯಾಸ್ಪದ ಭಗವಂತ ಏನೂ ಕಾಣಿಸದ ಕುರುಡ.ಸಂಗೀತವೂ ಗೊತ್ತಿಲ್ಲದ
 ಚಪ್ಪಟೆಕಿವಿಯ ಸರ್ವಾ ಂತರ್ಯಾಮಿ.ಪೆದ್ದುಪೆದ್ದಾಗಿ ಆಕಾಶದ ಅಗಲಕ್ಕೆ ಕುಂಡೆಯಾನಿಸಿ ಕೂತ
ಭಗವಂತ.ಮುಳ್ಳು ಕಂಟಿಯ ತುದಿಗೆ ಬೆಳಕ ತುರಿಸುತ್ತ ಕುಳಿತ ಮಿಂಚುಹುಳ ಈ ಭಗವಂತ.
ಎಲ್ಲವನು [...]

ಕವಿತೆ,ಸಮಾಜ ಮತ್ತು ಕ್ರಾಂತಿ ಇತ್ಯಾದಿ

  ’ಸಾರ್,ಕವಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕೂ ಅಂತೀರಾ?’
ಆಗ ತಾನೇ ಮೀಸೆ ಮೂಡಲು ತೊಡಗಿದ್ದ ಆ ಹುಡುಗ ಮುಖವನ್ನು ಚೂಪು ಮಾಡಿಕೊಂಡು ನನ್ನನ್ನು ಗುರಿಯಾಗಿಟ್ಟುಕೊಂಡು ಪ್ರಶ್ನೆಯೊಂದನ್ನು ಒಗೆದ.
ನಾನಾಗಿದ್ದಿದ್ದರೆ, ‘ಸಾರ್ ಕವಿತೆಯನ್ನು ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಬರೆಯಬೇಕಾ?ಅಥವಾ ಎರಡೂ ಕಡೆ ಬರೆದರೆ ಆಗುತ್ತದಾ?’ ಎಂದು ಕೇಳುವಂತಹ ವಯಸ್ಸು. ‘ಇದೆಲ್ಲಾ ಹೋಗಲಿ ಮಾರಾಯಾ..ನಿನ್ನ ಊರು ಯಾವುದು ? ಏನು ಮಾಡುತ್ತಿದ್ದೀಯಾ? ಹಾಸ್ಟೆಲಲ್ಲಿ ಊಟ ಸರಿಯಾಗುತ್ತದಾ? ಎಂದು ಕೇಳಿದೆ.
‘ಅಲ್ಲ  ಸಾರ್ ಸಮಾಜದಲ್ಲಿ ಕವಿಗಳ ಪಾತ್ರ ಏನು ಸಾರ್?’ಆತ ಪುನಃ ಶುರು ಮಾಡಿದ.
  ‘ಅಲ್ಲ [...]