
ಎಷ್ಟೇ ಕೀಟಲೆ ಮಾಡಬಾರದೆಂದಿಟ್ಟುಕೊಂಡರೂ ಹಾಗೆ ಮಾಡಲಾಗದಿರುವುದೇ ಇಲ್ಲ ಎಲ್ಲ ಕೀಟಲೆ ಮುಗಿಸಿ ಇನ್ನು ಗಂಭೀರವಾಗಿರಬೇಕೆಂದುಕೊಂಡರೆ ಆತ ಫೋನ್ ಮಾಡಿ ‘ಎಲ್ಲಿದ್ದೀಯಾ?’ ಎಂದು ಕೇಳುತ್ತಾನೆ.
’ಇಲ್ಲೇ ಕಣೋ ಮುಂಬೈನಲ್ಲಿ’ ಎಂದು ಸುಳ್ಳು ಹೇಳಿ ಆತನಿಗೆ ಫೋನ್ ನಲ್ಲಿ ಮೈಸೂರು ನಗರದ ನಾನಾ ಸದ್ದುಗಳನ್ನು ಕೇಳಿಸುತ್ತೇನೆ.ಆತ ಇದು ಮುಂಬೈ ಎಂದೇ ತಿಳಿದು ಸಖ ತ್ ಸಂಕಟ ಪಟ್ಟುಕೊಳ್ಳುತ್ತಾನೆ. ‘ನೀನು ಬಿಡು ಮಾರಾಯ ಸಖತ್ ಸುತ್ತುತ್ತೀಯಾ .ನಾನಾದರೋ ನೋಡು ಪಾಠ ಮುಗಿಸಿ ಪರೀಕ್ಷೆ ಮುಗಿಸಿ ಈಗ ಮೌಲ್ಯಮಾಪನ ಮುಗಿಸಿ ಟ್ಯಾಬುಲೇಷನ್ ನಡೆಸುತ್ತಾ ಇರುವೆ . ಇನ್ನು ಬರುವ ವಾರ ಗೃಹ ಪ್ರವೇಶ. ಮನೆಗೆ ಬಾಗಿಲೇ ಆಗಿಲ್ಲ . ಮರ ತರಲಿಕ್ಕೆ ತೀರ್ಥಹಳ್ಳಿಗೆ ಹೋಗಬೇಕು.ತುಂಬಾ ಹಳ್ಳಿ ಮಾದರಿಯಲ್ಲಿ ಕಟ್ಟಿಸ್ತಾ ಇದೀನಿ ಕಣೋ.ನೀನು ಬರಬೇಕು’ ಅನ್ನುತ್ತಾನೆ.
’ಇಲ್ಲ ಮಾರಾಯ ಇಲ್ಲಿ ಮುಂಬೈನಲ್ಲಿ ಇನ್ನು ಏಳು ದಿನ ಸುತ್ತಲಿಕ್ಕಿದೆ.ಆಮೇಲೆ ಹಡಗಿನಲ್ಲಿ ಕುಳಿತು ಗೋವಾಕ್ಕೆ ಬಂದು ನಂತರ ಕೊಂಕಣ ರೈಲಿನಲ್ಲಿ ಮಂಗಳೂರು. ಅಲ್ಲಿ ಫ್ರೆಂಡ್ ಮನೆಯಲ್ಲಿದ್ದು ಆನಂತರ ಮೈಸೂರು’ಎಂದು ಆತನನ್ನು ಇನ್ನಷ್ಟು ಮೈ ಉರಿಸಿ ಮೈಸೂರಿನ ಬೀದಿಗಳನ್ನು ಹೊಕ್ಕು ಬಿಡುತ್ತೇನೆ. ನಿಜಕ್ಕೂ ನಾನೆಲ್ಲಿದ್ದೇನೆ ಎಂದು ನನಗೇ ಗೊತ್ತಾಗುವುದಿಲ್ಲ.
ಮೊನ್ನೆ ಒಂದು ಇರುಳು ಹೆಂಡತಿ ಮಕ್ಕಳನ್ನು ಮದುವೆ ಮನೆಗೆ ಬಿಟ್ಟು ಮದುವೆ ಮುಗಿಯುವವರೆಗೆ ಏನು ಮಾಡುವುದು ಎಂದು ಗೊತ್ತಾಗದೆ ಮೈಸೂರಿನ ಗಾಂಧಿ ಚೌಕದ ನನ್ನ ನೆಚ್ಚಿನ ಮೂಲೆಯಲ್ಲಿ ನಿಂತಿದ್ದೆ. (more…)
[೧೯೯೫ ರಲ್ಲಿ ಬರೆದದ್ದು]
ನಾನು ಸಣ್ಣಗೆ ಬೆವರಿಕೊಂಡು ಒಂದು ಸಣ್ಣ ಹೋಟೇಲೊಳಕ್ಕೆ ಹೊಕ್ಕು ಕುಳಿತೆ. ಈ ಊರಲ್ಲಿ ಈ ತರಹದ ಸಣ್ಣ ಹೋಟೆಲುಗಳೆಂದರೆ ಪುಟ್ಟಪುಟ್ಟ ತರುಣಿಯರು ನಡೆಸುವ ಹೋಟೆಲ್ಲು. ಹಾಲಿಲ್ಲದ ಕಪ್ಪು ಚಹಾಕ್ಕೆ ‘ಸಾಸೋ’ ಎನ್ನುತ್ತಾರೆ ಮತ್ತೆ ‘ಪತಾರೋ’ ಎಂಬ ಅಕ್ಕಿಯಿಂದ ಅರೆದು ಮಾಡಿದ ಓಡು ದೋಸೆಯಂತಹ ತಿಂಡಿ. ಅದರ ಜೊತೆ ಆಡಿನ ಕರುಳಿನ ಪಲ್ಯ. ಯಾವುದಕ್ಕೂ ಉಪ್ಪು, ಹುಳಿ, ಖಾರ, ಏನೂ ಇಲ್ಲ. ಬೇಕಾದರೆ ಉಪ್ಪನ್ನು ನೆಕ್ಕಿ ಹಸಿ ಮೆಣಸನ್ನು ಅದರ ಜೊತೆ ಕಚ್ಚಿ ತಿನ್ನಬಹುದು. ನಾನು ಒಂದೊಂದೇ ತಿನಿಸಿನ ಹೆಸರು ಕೇಳಿಕೊಂಡು ತಿನ್ನುತ್ತ ಹೋಟೆಲ್ಲಿಗೆ ಹೋಗಿ ಬರುವವರನ್ನು ನೋಡುತ್ತಾ ಕುಳಿತಿದ್ದೆ. ಈ ತರಹ ನನ್ನಂತಹ ಹೊರಗಿನವನು ಇಂತಹ ಹೋಟೆಲ್ಲುಗಳಲ್ಲಿ ಒಬ್ಬನೇ ಕುಳಿತುಕೊಳ್ಳುವುದು ಕೊಂಚ ಅಪಾಯದ ಕೆಲಸ. ಆದರೂ ಕುಳಿತಿದ್ದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ನಾನು ಎಲ್ಲರನ್ನೂ ನೋಡುತ್ತಿದ್ದೆ. ಹೋಟೆಲ್ಲಿನ ಒಬ್ಬಳು ತರುಣಿ ಆಗ್ಗಿಂದಾಗ್ಗೆ ಸಿಕ್ಕಾಪಟ್ಟೆ ಮೈಯನ್ನೆಲ್ಲಾ ಸಿಕ್ಕಿದಲ್ಲೆಲ್ಲಾ ಕೆರೆದು ಕೊಳ್ಳುತ್ತಿದ್ದಳು. ನಾನು ತುಂಬಾ ಹೊತ್ತು ನೋಡುತ್ತಿದ್ದವನು ಆಮೇಲೆ ತಡೆಯಲಾರದೆ ಏನಾಯಿತು ಅಂತ ಕೇಳಿದೆ. ಆಕೆ ಪಕ್ಕನೆ ನಾಚಿಕೊಂಡವಳು. ಆಮೇಲೆ ಹಾ ಹೋ ಹೀ ಹೀ ಅಂತೆಲ್ಲಾ ಹೇಳತೊಡಗಿದವಳು. ಕೊನೆಗೂ ಕಾರಣ ಹೇಳಲಾಗದೆ ತನ್ನ ಗೆಳತಿಯರ ಕಿವಿಗೆ ನನ್ನ ಪ್ರಶ್ನೆಯನ್ನು ದಾಟಿಸಿಬಿಟ್ಟಳೂ. ಕೊನೆಗೆ ಎಲ್ಲರೂ ಗೊಳ್ಳೆಂದು ನಗಲು ಶುರುಮಾಡಿದರು.
ಈ ವಾರದಲ್ಲಿ ಪುಟ್ಟ ಹುಡಗರಿಬ್ಬರ ಭಾವಚಿತ್ರಗಳಿರುವ ಜಾಹೀರಾತುಗಳೆರಡು ಪತ್ರಿಕೆಯೊಂದರ ಮೂಲೆಯಲ್ಲಿ ಬಂತು. ಹುಟ್ಟುಹಬ್ಬ, ವಿವಾಹ, ವಿವಾಹ ವಾರ್ಷಿಕ, ವಿಧೇಶ ಪ್ರವಾಸ ಇತ್ಯಾದಿಗಳಿಗೆ ಸಂತೋಷ ಸೂಚಿಸಿ ಬರುವ ಜಾಹೀರಾತುಗಳನ್ನೂ, ಮರಣ ವಾರ್ಷಿಕ ಇತ್ಯಾದಿಗಳಿಗೆ ಕಂಬನಿಯಿಡುವ ಶ್ರದ್ಧಾಂಜಲಿಗಳನ್ನೂ ನೋಡಿ ಈ ಚಿತ್ರಗಳ ಜೊತೆ ಸಂತೋಷವನ್ನೋ, ಬೇಸರವನ್ನೋ ಹಂಚಿಕೊಳ್ಳುವ ನನಗೆ ಈ ಹುಡುಗರ ಚಿತ್ರವನ್ನೂ, ಅದರ ಕೆಳಗೆ ಬರೆದಿರುವ ಅಕ್ಷರಗಳನ್ನೂ ಓದಿ ಸಂತೋಷ ಪಡಬೇಕೋ, ಬೇಜಾರುಮಾಡಿಕೊಳ್ಳಬೇಕೋ ಗೊತ್ತಾಗಲಿಲ್ಲ. ಈ ಹುಡುಗರಿಬ್ಬರೂ ಎರಡು ಪುಟ್ಟ ಶಾಲೆಗಳ, ಪುಟ್ಟ ಚುನಾವಣೆಯಲ್ಲಿ ಗೆದ್ದು ಬಂದ ಶಾಲಾ ನಾಯಕರುಗಳಾಗಿದ್ದರು. ಹುಟ್ಟಿ ಹತ್ತೋ ಹದಿನಾರೋ ವರ್ಷಗಳಾಗಿರುವ ಈ ಹುಡುಗರು ಶಾಲಾ ನಾಯಕರುಗಳಾಗಿರುವುದು ಖುಷಿಯ ವಿಷಯವಾದರೂ ಇವರ ಚಿತ್ರಗಳು ಸಾಧಾರಣವಾಗಿ ನಾಯಕ ಮಣಿಗಳೂ. ತೀರಿ ಹೋದವರೂ ಆಗಿರುವವರ ಚಿತ್ರಗಳ ಜೊತೆ ಕಂಗೊಳಿಸುತ್ತಿರುವುದು ಕೊಂಚ ಹೆದರಿಕೆಯ ಅದಕ್ಕಿಂತಲೂ ತೀರಾ ಮುಜುಗರದ ಸಂಗತಿಯಾಗಿ ಕಂಡಿತು.
ಮಕ್ಕಳು ಬೆಳಗ್ಗಿನಿಂದ ಸೂರ್ಯಕಂತುವವರೆಗೆ ಬಯಲಲ್ಲಿ ಯಾವ ಆಯಾಸವೂ ಇಲ್ಲದೆ ಇಲ್ಲಿ ಆಡುತ್ತಿರುತ್ತಾರೆ. ಬೀಸುವಗಾಳಿಗೆ ಮೈ ಒಡ್ಡಿ ನಡೆಯುವ ಮುಗುದೆಯರು. ನಾವು ಎಂತಹ ಚಂದದ ಭೂಮಿಯಲ್ಲಿ ಬದುಕಿದ್ದೇವೆ ಎಂದು ಗೊತ್ತಾಗಿ ಮನಸ್ಸು ತುಂಬಿಕೊಳ್ಳುತ್ತಿದ್ದೆ. ಸುಮ್ಮನೇ ಒಬ್ಬನೇ ಇಲ್ಲಿಯ ವಾರ್ಡ್ ಲೇಕ್ ನಲ್ಲಿ ನಡು ಮಧ್ಯಾಹ್ನ ನಡೆಯುತ್ತಿದ್ದೆ. ಸೂರ್ಯನ ಬೆಳಕು ಎಲೆಗಳ ಮೇಲೆ ಕೆರೆಯ ನೀರಿನ ಮೇಲೆ ತನ್ನ ಎಲ್ಲಾ ಪ್ರೀತಿಯನ್ನು ಸುರಿಯುತ್ತಿತ್ತು. ಯಾವ ಕೇಡೂ ಇಲ್ಲದ ಸ್ವಚ್ಛಗಾಳಿ ಪುಪ್ಪುಸದೊಳಕ್ಕೆ ತುಂಬಿಕೊಳ್ಳುತ್ತಿತ್ತು. ಆಮೇಲೆ ಮನೆಗೆ ಬಂದು ಏನೋ ಓದುತ್ತಾ ಕುಳಿತ್ತಿದ್ದೆ. ಸರೀ ಮೂರೂವರೆಯ ಹೊತ್ತಿಗೆ ಭೂಮಿ ಒಮ್ಮೆಗೆ ಸಣ್ಣಗೆ ಅಲುಗಿತು. ಯಾರೋ ಹಿಂದಿನಿಂದ ಮೆಲ್ಲಗೆ ಮೊಣಕೈಯಿಂದ ಅಲುಗಿಸಿದಂತೆ ಸಣ್ಣಗೆ ಭೂಕಂಪವಾಯಿತು. ಗಾಳಿ ಹಾಗೇ ಬೀಸುತ್ತಿತ್ತು. ಮಕ್ಕಳು ಆಡುತ್ತಿದ್ದರು. ಯಾಕೋ ದುಗುಡ ತುಂಬಿಕೊಂಡು ಬಿಟ್ಟಿತು.




ಆತನ ಅಕ್ಕ ಹಸಿಹಸಿ ರೊಮಾಂಟಿಕ್ ಕವಿತೆ ಗಳನ್ನೂ ಕಡುಬಡವರ ಕುರಿತು ಲೇಖನಗಳನ್ನೂ ಬರೆಯುತ್ತಿದ್ದವಳು ಹೆಸರು ಮೀನಾಕ್ಷಿ ಅಂತ ಇಟ್ಟುಕೊಳ್ಳಿ ಆಂದ್ರದ ಪೋಲೀಸರ ಗುಂಡಿಗೆ ಈಗಾಗಲೇ ಆಹುತಿಯಾಗಿ ವರ್ಷಗಳೇ ಕಳೆದಿವೆ. ಮೀನಾಕ್ಷಿಯನ್ನು ಮದುವೆಯಾಗಿದ್ದ ಕಾಮ್ರೇಡ್ ಕೂಡಾ ಇತ್ತೀಚೆಗಷ್ಟೇ ಪೋಲೀಸರ ಗುಂಡಿಗೆ ಬಲಿಯಾದ.










