ಮೋಹಿತನ ಒಂದು ಸಂಕೋಚದ ಕವಿತೆ
Posted on Wednesday June 27, 2007 by Rasheed
ಕ್ಷಮಿಸು,
ಕ್ಷಮಿಸು, ನಿನ್ನನ್ನು ಹಾಗೆ ಬಗ್ಗಿಸಬೇಕಾಗಿರಲಿಲ್ಲ
ಮತ್ತು ಹಾಗೆ ಮಖಾಡೆ ಮಲಗಿಸಿದ್ದೂ ತಪ್ಪಾಯ್ತು.
ನಿನ್ನ ಎದೆ,ಹೊಕ್ಕಳು,ನಿನ್ನ ಕಿಬ್ಬೊಟ್ಟೆ, ತೊಡೆ…
ನಿನ್ನ ಎಲ್ಲವನ್ನೂ ತಿಂದು ತೇಗಿದ್ದಾಯ್ತು. ಪರಮಾತ್ಮ!
ಇನ್ನು ಏನಂತಲೂ ಪರದಾಡಿ ಮುಗಿಯಿತು.
ಈಗಲಾದರೂ ಕಣ್ಣು ತೆರೆ, ಹೇಳು,
ಉಡುಪು ತೊಟ್ಟುಕೋ.
ಮಡಿಲಲ್ಲಿ ಕೂರು.ತುಟಿ ಒರೆಸಿ ಮಾತನಾಡು.
ಮುಗಿಯಿತೇ ಅಂತಾದರೂ ಕೇಳು.
ಸುಮ್ಮಗೆ ನಗದಿರು.
Filed under: ಹಾಡು-ಪಾಡು
ಪ್ರಿಯ ರಶೀದ್,
ಮೋಹಿತ ಕ್ಷಮಾ ವಿನಂತಿಯನ್ನ ಸಂಕೋಚದಿಂದ ಓದಿದೆ,
ಅಕ್ಷರಗಳು ನಾಚಿಕೊಂಡವಾಗಲೀ ಭಾವ ಯಾವ ಬಿಮ್ಮಾನವಿಲ್ಲದೆ ತುಂಬಿ ಹರಿಯುತ್ತಿದೆ.
ಮುಗಿಯಿತೇ ಅಂತ ಕೇಳಿದರೆ ಮುಗಿಯಿತೆ?
ಕ್ಷಮೆ ದಕ್ಕೀತೆ?
ಸುಮ್ಮನೆ ನಗುವುದು ಮಾತಿಗಿಂತ ಹೆಚ್ಚಿನ ಪರಿಣಾಮ ಅನ್ನಿಸಿತೆ?
both the image and words are so nicely going with each other..!!
………..aa naguvinalli aenellaa irabahudu… allva..?!
“ಸುಮ್ಮನೆ ನಗುವುದು ಮಾತಿಗಿಂತ ಹೆಚ್ಚಿನ ಪರಿಣಾಮ ಅನ್ನಿಸಿತೆ?”
- ಸುಮ್ಮನೆ ನಗುವುದು ಮಾತಿಗಿಂತ ಹೆಚ್ಚು ಪರಿಣಾಮಕರ - ಅಲ್ಲವೆ?
Rasheed Ungle,
MMMM.. Idu baredaada mele Bandenawaazanannu yelethandu koorisibittiddeeri, ella tolakolluva haage..
Swalpa galaate maadona annisidaroonu, kavana nodi karagihogi summanaguva haagaagide. Shree, couldn’t agree with you more!!