ಜಮೀನು ಮಾರಿದ ನಿಂಗೇಗೌಡರ ಕಥೆ
Posted on Wednesday June 13, 2007 by Rasheed
ಕುಪ್ಪೆ ಗ್ರಾಮದ ನಿಂಗೇಗೌಡರು ಜಮೀನು ಮಾರಿದ್ದಾರೆ. ಆಮೇಲೆ ಏನು ಮಾಡುತ್ತಾರೆ?ಅವರನ್ನೇ ಕೇಳಿ
Filed under: ಮುಖಚಿತ್ರ
ಕುಪ್ಪೆ ಗ್ರಾಮದ ನಿಂಗೇಗೌಡರು ಜಮೀನು ಮಾರಿದ್ದಾರೆ. ಆಮೇಲೆ ಏನು ಮಾಡುತ್ತಾರೆ?ಅವರನ್ನೇ ಕೇಳಿ
Filed under: ಮುಖಚಿತ್ರ
ಜಮೀನು ಮಾರಿದ ನಿಂಗೇಗೌಡರ ಕಥೆ ..ಕೇಳಿ ಯಾಕೋ ಬೇಜಾರು ಆಗ್ತಿದೆ. ಈ ರೀತಿ ರೈತರೆಲ್ಲ ಜಮೀನು ಮಾರುತ್ತಾ ಹೋದರೆ ದೇಶ ಆಹಾರಕ್ಕೆ ಎನು ಮಾಡುವುದು ಅಂತ ಹೆದರಿಕೆ ಶುರು ವಾಗುತ್ತಿದೆ.
ದೇವರು ಅಧಿಕಾರದಲ್ಲಿರುವವರಿಗೆ ಒಳ್ಳೆ ಬುದ್ಧಿ ಕೊಟ್ಟು ..ರೈತರನ್ನು ಕಾಪಾಡೋ ಯೊಜನೆ ಹಾಕ್ಲಿ ಅಂತ ದೇವರಿಗೆ ಪ್ರಾರ್ಥನೆ..
ಇವತ್ತಿನ The hinduನಲ್ಲಿ ವಿಧರ್ಭದ ರೈತರ ಸಮಸ್ಯೆ ಬಗ್ಗೆ ಓದ್ತಾ ಇದ್ದೆ.ಯಾಕೋ ಗೊತ್ತಿಲ್ಲ ತುಂಬಾ ಬೇಸರ ಆಯಿತು ಓದಿ.
ಯರೋ ರೈತ ಮುಖಂಡ ಬ್ಯಾಂಕಿಗೆ ,”ಸ್ವರ್ಗದಲ್ಲಿರೋ ರಾಮದಾಸ ಹಣ ಇದೆ ಅಂತಾ ಕನಸಲ್ಲಿ ಬಂದು ಹೇಳ್ತಿದಾನೆ. ದಯವಿಟ್ಟು ನಿಮ್ಮ recovery team ಅನ್ನು ಸ್ವರ್ಗಕ್ಕೆ ಕಳಿಸಿ “ಅಂತ ಪತ್ರ ಬರೆದು ತಮ್ಮ ರೋಷ ತೋಡಿಕೊಂದರಂತೆ.
ಕರ್ನಾಟಕ ಇನ್ನೊಂದು ವಿಧರ್ಭ ಆಗದಿರಲಿ..
ವಿಧರ್ಭದ ರೈತರಿಗೆ ಒಳ್ಳೆಯದಾಗಲಿ ಅಂತ ಹಾರೈಕೆ.
ರಶೀದ್
ಏನು ಮಾಡಲಿ?
ಏನು ಮಾಡೋಣ?
ಏನು ಮಾಡಬಹುದು?
ಜಮೀನು ಮಾರಿಸಿ ರಸ್ತೆ ಬದಿಯಲ್ಲಿ ಔಷಧಿ ಕುಡಿಸುವ ಕಾನ್ಸಂಟ್ರೇಷನ್ ಕ್ಯಾಂಪನ್ನ ಹೇಗೆ ಮಟ್ಟ ಹಾಕುವುದು? ಯಾವ ಮೈತ್ರಿಕೂಟದ ಹಾಡು ಹೇಳಿ ಈ ಅಪ್ಪ ಅಮ್ಮಂದಿರನ್ನ ನೇವರಿಸುವುದು?
ಇಲ್ಲಿ ಬೆಂಗಳೂರಲ್ಲಿ ಸಚಿವ ಸಂಪುಟ ಮತ್ತು ಶಾಸನ ಸಭೆಗಳೆರಡೂ ವಿಮಾನ ಹತ್ತಿದ್ದಾರಂತೆ - ವಿದೇಶೀ ಅಭಿವೃದ್ಧಿ ಕಾರ್ಯ ಗಮನಿಸಲು..
ನನಗೆ ನಾಚಿಕೆಯಾಗಿದೆ ಇಲ್ಲಿ ಸುಖವಾಗಿರಲು.
ಬದುಕಿನಲಿ ತುಂಬ ನೊವು ಅನುಭವಿಸಿದವರಿಗೆ at one point of time ಕಣ್ಣೀರು ಹೋಗಿ ತುಟಿ ಅಂಚಿನಲ್ಲಿ ನಗು ಇರುತ್ತಂತೆ. ಪಾಪ ಆ ಪರಿಸ್ಥಿತಿಲಿ ಇದ್ದಾರೆ ಅವರು, ಅದು ನೋವಿನ satuaration point. ರಶೀದ್ ಅವರೆ, blog ಅಲ್ಲಿ ಇದು ವಿಬಿನ್ನ ಪ್ರಯತ್ನ(ವಿಡೀಯೋಸ್),ಮುಂದುವರೆಸಿ…
ಪ್ರೀತಿಯಿಂದ
ಸಂಜಯ್