Posted on Saturday June 30, 2007 by Rasheed
’ನೀನು ಬರೆಯುವುದರಲ್ಲಿ ನನಗೆ ಯಾವ ಪ್ರಯೋಜನವೂ ಕಾಣಿಸುವುದಿಲ್ಲ.ನೀನು ಬರೆಯುವುದು,ಅಲೆಯುವುದು,ಅದರಿಂದ ಸಿಗುವ ಸುಳ್ಳು ಖ್ಯಾತಿ,ಅದರಿಂದ ಉಂಟಾಗುವ ಕಳ್ಳ ಪ್ರಣಯ, ನಿನ್ನ ಈ ಹುಚ್ಚಿನಿಂದಾಗಿ ಆರ್ಥಿಕವಾಗಿಯಾಗಲೀ ಸಾಮಾಜಿಕವಾಗಿಯಾಗಲೀ ನಯಾಪೈಸೆ ಲಾಭವಿಲ್ಲ.ನೀನು ಮುಚ್ಚಿಕೊಂಡು ಸುಮ್ಮನೆ ಕೂತುಕೋ. ಬೀಡಿಸಿಗರೇಟಿಗೆ ಟೀಗೆ ನಾನು ಕೊಡುತ್ತೇನೆ. ಮನೆಗೂ ಸಮಾಜಕ್ಕೂ ಎಲ್ಲರಿಗೂ ಒಳಿತಾಗುತ್ತದೆ’ಎಂದೆಲ್ಲ ಅವಳು ಸಂಕಟದಲ್ಲಿ ಉಲಿಯುತ್ತಿದ್ದಳು.
ನನಗೂ ಅವಳು ಅನ್ನುತ್ತಿರುವುದು ನೂರಕ್ಕೆ ನೂರರಷ್ಟು ಸರಿ ಅನ್ನಿಸುತ್ತಿತ್ತು.
ಅವಳು ಕೊಟ್ಟ ದುಡ್ಡಲ್ಲಿ ಒಂದು ಗಾಳ ಮತ್ತು ಒಂದು ಕಟ್ಟು ಬೀಡಿ ಕೊಂಡುಕೊಂಡು ಒಂದು ಎರೆಹುಳ ಹಿಡಿದು ಗಾಳಕ್ಕೆ ಸಿಕ್ಕಿಸಿ ಉಟ್ಟ [...]
Filed under: ಅಲೆಮಾರಿಯ ದಿನಚರಿ | 10 Comments »
Posted on Friday June 29, 2007 by Rasheed
ಉರಿಯುತ್ತಿರುವ ಗುಲ್ಬರ್ಗಾ ಶಹರಿನಲ್ಲಿ ತಣ್ಣಗಿರುವ ಕೆಲವು ನಿಗೂಢ ತಾಣಗಳಿವೆ. ಎಷ್ಟೇ ಉರಿಯಿದ್ದರೂ ಒಳಹೊಕ್ಕೊಡನೆ ಅವ್ಯಕ್ತ ಗಾಳಿಯಾಡಿ, ಎಷ್ಟೋ ಶತಮಾನಗಳಷ್ಟು ಹಳೆಯ ಗುಂಗು ಮೂಡಿಸಿ, ಹಳೆಯ ಪಾರಿವಾಳಗಳು ರೆಕ್ಕೆ ಬಡಿದು ಹಾರಾಡಿ , ಧೂಪ- ಸಾಂಬ್ರಾಣಿ- ಹೊಗೆ- ಸಮಾದಿ- ನಾವು ಇರುವ ಜಾಗ ಯಾವುದು ನಾವು ಎಲ್ಲಿಂದ ಬಂದವರು ಎಂಬುದನ್ನೆಲ್ಲ ಮರೆಯಿಸಿಬಿಡುತ್ತವೆ.
ನೀವು ಯಾರಾದರೂ ಶುಕ್ರವಾರದ ಹಿಂದಿನ ರಾತ್ರಿ ಅಥವಾ ಅಮವಾಸ್ಯೆಯ ಹಿಂದಿನ ಸಂಜೆ ಕತ್ತಲಾಗುತ್ತಿದ್ದಂತೆ ಗುಲ್ಬರ್ಗಾ ಶಹರಿನ ಮದ್ಯದಲ್ಲಿರುವ ಹಝರತ್ ಖ್ವಾಜ ಬಂದೇ ನವಾಜರ ದರ್ಗಾದ ಒಳ ಹೊಕ್ಕು [...]
Filed under: ಅಲೆಮಾರಿಯ ದಿನಚರಿ | 1 Comment »
Posted on Thursday June 28, 2007 by Rasheed
ಹೇ ಬಂದೇ ನವಾಜ್
ಈ ವಿಷವನ್ನು ಪೇಯದಂತೆ ಕುಡಿಯಲು ಬಿಡು,
ಒಂದು ತೊಟ್ಟೂ ನೆಲದಲ್ಲಿ ಹಿಂಗದಂತೆ.
ಈಗಿಂದೀಗಲೇ ಬಿಕ್ಷೆಯ ಬಟ್ಟಲನ್ನು ಹಿಡಿದು ನಡೆವ ಧೈರ್ಯ ಕೊಡು.ಈ ಗಿಡುಗನ ಉಡುಪನ್ನು ಕಳಚಿ ಬಿಡುವೆನು
ಪಾರಿವಾಳದ ದಿರಿಸನ್ನು ತೊಡಿಸು ನನಗೆ ಹೇ ಬಂದೇನವಾಜ್.
ನಿನ್ನ ಪಹಾಡಿನ ಹರಳು, ನಿನ್ನ ವನದ ಸಂಪಿಗೆಯ ಕರಿಯ ಬೀಜ,
ನಿನ್ನ ಫಕೀರರ ಹಾಡು,ಚಿಲುಮೆಯ ಹೊಗೆ,ಕೈಯ ಕೋಳ, ಕಾಲ ಕಡಗ,
ನಿನ್ನ ಹತ್ತೂ ಬೆರಳಿನ ಮಾಯದುಂಗುರ -
ನನ್ನ ಇಲ್ಲದಂತಾಗಿಸು ಹೇ ಬಂದೇ ನವಾಜ್.
ನಿನ್ನ ಗೋರಿಗಳ ನಡುವೆ ಹಾಲು ಊಡುತ್ತ,ಕಾಲು ಆಡಿಸುತ್ತ ಮಲಗಿರುವ ಮಗುವಿನ ನಗು.
ಹಾಲ [...]
Filed under: ಹಾಡು-ಪಾಡು | 5 Comments »
Posted on Wednesday June 27, 2007 by Rasheed
ಕ್ಷಮಿಸು,
ಕ್ಷಮಿಸು, ನಿನ್ನನ್ನು ಹಾಗೆ ಬಗ್ಗಿಸಬೇಕಾಗಿರಲಿಲ್ಲ
ಮತ್ತು ಹಾಗೆ ಮಖಾಡೆ ಮಲಗಿಸಿದ್ದೂ ತಪ್ಪಾಯ್ತು.
ನಿನ್ನ ಎದೆ,ಹೊಕ್ಕಳು,ನಿನ್ನ ಕಿಬ್ಬೊಟ್ಟೆ, ತೊಡೆ…
ನಿನ್ನ ಎಲ್ಲವನ್ನೂ ತಿಂದು ತೇಗಿದ್ದಾಯ್ತು. ಪರಮಾತ್ಮ!
ಇನ್ನು ಏನಂತಲೂ ಪರದಾಡಿ ಮುಗಿಯಿತು.
ಈಗಲಾದರೂ ಕಣ್ಣು ತೆರೆ, ಹೇಳು,
ಉಡುಪು ತೊಟ್ಟುಕೋ.
ಮಡಿಲಲ್ಲಿ ಕೂರು.ತುಟಿ ಒರೆಸಿ ಮಾತನಾಡು.
ಮುಗಿಯಿತೇ ಅಂತಾದರೂ ಕೇಳು.
ಸುಮ್ಮಗೆ ನಗದಿರು.
Filed under: ಹಾಡು-ಪಾಡು | 4 Comments »
Posted on Wednesday June 27, 2007 by Rasheed
ಒಮ್ಮೆ ನಿನ್ನ ಮೋಹಿಸಿದ್ದೆ..
ಒಮ್ಮೆ ನಿನ್ನ ಮೋಹಿಸಿದ್ದೆ,ಇನ್ನು ಸುಮ್ಮನಿರದು ನನ್ನೆದೆ
ಅನಿಸುವುದು ಈ ಮೋಹ, ಇನ್ನೂ ಸುಳಿಯುತ್ತಿರುವುದು,
ಆದರೆ ಕಾಡದಿರಲಿ ಇದು ಇನ್ನು ನಿನ್ನ ಸುಮ್ಮನೆ.
ಗೆಳತಿ, ಒಂದಿನಿತೂ ನೋಯಿಸದಿರಲು ನೋಡುವೆ.
ಮೋಹಿಸಿದ್ದೆ ಆಸೆ ಪಡದೆ, ಎಷ್ಟೊಂದು ಕದ್ದು ಮುಚ್ಚಿ
ಎಂತ ಹೊಟ್ಟೆಯುರಿ,ಎಂತ ನಿರ್ಲಜ್ಜ!, ಏನೆಲ್ಲ ಉಂಡೆ.
ಇಷ್ಟು ಆಳದ ,ನಿಜದ ,ಇಷ್ಟು ಕೋಮಲ ಮೋಹ
ಸಿಗಲಿ ಇನ್ನೊಮ್ಮೆ ನಿನಗೆ.
ಆ ಪಡೆದವನು ಕೊಡುವುದಾದರೆ…..
Filed under: ಅನುವಾದಗಳು | 5 Comments »
Posted on Monday June 25, 2007 by Rasheed
ಕಾವಿಗೆ ಕುಂತ ಆಲಸಿ ಹೇಂಟೆಯಂತೆ, ಎಲ್ಲರನ್ನು ಎದುರು ಹಾಕಿಕೊಂಡಿರುವ ಪ್ರೇಮಿಯಂತೆ ಏನೂ ಬರೆಯಲಾಗದೆ ಕಂಪ್ಯೂಟರ್ ಪರದೆಯನ್ನೇ ಆಕಾಶವನ್ನಾಗಿ ಮಾಡಿಕೊಂಡು ದಿಟ್ಟಿಸುತ್ತಿರುವೆ.ಈ ನಡು ಮದ್ಯಾಹ್ನದ ಆಕಾಶಕ್ಕಿಂತ ಬಿಲ್ ಗೇಟ್ಸ್ ಕರುಣಿಸಿರುವ ಈ ನೀಲ ವಿಂಡೋಸ್ ಪರದೆ ಎಷ್ಟೋ ಹಿತವಾಗಿ ಕಾಣಿಸುತ್ತಿದೆ. ಜಾಗತೀಕರಣ ಮತ್ತು ಸಂಸ್ಕೃತಿ, ಜಾಗತೀಕರಣ ಮತ್ತು ಧರ್ಮ,ಜಾಗತೀಕರಣ ಮತ್ತುಕನ್ನಡ ಸಾಹಿತ್ಯ- ವಿತ್ತ ವರ್ಷ ಮುಗಿಯುವ ಮೊದಲೇ ಮುಗಿಸಬೇಕಾಗಿರುವ ವಿಚಾರ ಸಂಕಿರಣಗಳು ಅಚ್ಚರಿಯಾಗುವಂತೆ ಪ್ರತಿನಿಧಿಗಳಿಂದ ತುಂಬಿಕೊಂಡಿದೆ.ಬಹಳಷ್ಟು ಮಂದಿ ಭಯಬೀತರಾಗಿ ಯಾವ ರೂಪದಲ್ಲಾದರೂ ಎರಗಬಹುದಾದ ಜಾಗತಿಕ ಭೂತದಿಂದ ತಮ್ಮ ಪಿಳ್ಳೆಮರಿಗಳನ್ನು ಹೇಗ [...]
Filed under: ಅಲೆಮಾರಿಯ ದಿನಚರಿ | 1 Comment »
Posted on Monday June 25, 2007 by Rasheed
ಮಧ್ಯಾಹ್ನ ಹಠಹಿಡಿದು ಊಟ ಮಾಡದೆ ನಿದ್ದೆ ಹೋಗಿ ಎದ್ದರೆ ಕತ್ತಲಾಗುತ್ತಿತ್ತು. ಮನೆಯೊಳಗೆ ಸಂಜೆಯ ಕೊಂಚ ಬೆಳಕು ಇನ್ನೂ ಉಳಿದು ಅದೂ ಹೊರಟು ಹೋಗಲು ಹವಣಿಸುತ್ತಿತ್ತು. ಈ ಸಂಜೆಯ ಬೆಳಕು ಪ್ರೀತಿಯಂತೆ. ಆದರೆ ಅದೂ ನನ್ನನ್ನು ಬಿಟ್ಟು ಹೋಗಲು ರೆಡಿಯಾಗಿರುವುದನ್ನು ಕಂಡು ಸಂಕಟವಾಗುತ್ತಿತ್ತು. ಎಲ್ಲರ ಮೇಲೆ ಇಡೀ ಪ್ರಪಂಚದ ಕುರಿತೇ ರೇಜಿಗೆಯಾಗುವಷ್ಟು ಹಸಿವು. ಇಡೀ ಮನಸ್ಸನ್ನೇ ಇಡಿ ಇಡಿಯಾಗಿ ತಿಂದು ಬಿಡುವ ಈ ಹಸಿವು! ಮನುಷ್ಯರ ಕೆಟ್ಟ ಹಠ! ಕದ್ದು ಹೋಗಲು ನೋಡುತ್ತಿರುವ ಈ ಚಂದದ ಬೆಳಕು! ಯಾರೂ [...]
Filed under: ಮಾತಿಗೂ ಆಚೆ | 2 Comments »
Posted on Saturday June 23, 2007 by Rasheed
ಈವತ್ತು ಬೆಂಗಳೂರಲ್ಲಿ ಶಶಿಕಿರಣ್ ಅವರ ಜೊತೆಗಿದ್ದೆ . ಅನಂತ ಮೂರ್ತಿಯವರಲ್ಲಿ ‘ಬರಲಾ?’ ಎಂದು ಕೇಳಿದೆ
`ಬಾ ಮಗುವೇ’ ಅನ್ನುವಂತೆ ಕರೆದು ನಮ್ಮ ಜೊತೆಬಹಳ ಹೊತ್ತು ಮಾತನಾಡಿದರು
`ಟೀ ಮಾಡಿಕೊಡಲೇ’ ಎಂದು ಕೇಳಿದರು.
ಅಷ್ಟು ಪ್ರೀತಿ, ಅಷ್ಟು ಮಮತೆಯ ಈ ಹಿರಿಯ ಜೀವವನ್ನು ನಾವು ಇನ್ನೂ ತುಂಬಾ ಪ್ರೀತಿಸಬೇಕಿತ್ತು ಅಂದು ಕೊಂಡು ಕಣ್ಣು ತುಂಬಿ ಬಂತು.
Filed under: Friends | No Comments »
Posted on Thursday June 21, 2007 by Rasheed
ಸಂಪಾಜೆಯ ಬಳಿಯ ಕೊಯನಾಡಿನ ಅಂದುಕಾಕನ ಮಸಿ ಹಿಡಿದ ಹೋಟೆಲಿನ ಅಡ್ಡಾದಿಡ್ಡಿ ಬೆಂಚುಗಳಲ್ಲಿ ಕೂತ ನಾವು ತಿಂಡಿ ಕಪಾಟಿನ ಮೇಲಿಟ್ಟಿದ್ದ ಹೊಗೆ ಬಣ್ಣದ ರೇಡಿಯೋ ಒಂದರಿಂದ ವಿಚಿತ್ರ ಸ್ವರದ ರಷ್ಯನ್ ಹೆಂಗಸಿನ ಗಂಟಲಿನಿಂದ ನಮ್ಮ ಹೆಸರುಗಳನ್ನು ಕೇಳಿಸಿಕೊಳ್ಳುತ್ತಿದ್ದೆವು. ಅವಳ ವಿಚಿತ್ರ ಕನ್ನಡದಲ್ಲಿ ನಮ್ಮ ಹೆಸರುಗಳು ಗಂಟಲು ಅದುಮಿಸಿಕೊಂಡು, ಮೂಗು ಮುಚ್ಚಿಸಿಕೊಂಡು, ರೊಟ್ಟಿಗೆ ಅಕ್ಕಿಯ ಹಿಟ್ಟು ನಾದುವಂತೆ ನಾದಿಸಿಕೊಂಡು ಅಂದು ಕಾಕನ ತಿಂಡಿಯ ಪರಿಮಳ ತುಂಬಿದ ಹೋಟೇಲಿನೊಳಗೆ ಸಂಜೆಯ ಬಿಸಿಲು ಕೋಲಿನ ಹಾಗೆ ಬಂದು ಕೇಳುತ್ತಿತ್ತು. ಅಂದುಕಾಕ ಗಲ್ಲದ ಮೇಲೆ [...]
Filed under: ಮಾತಿಗೂ ಆಚೆ | 5 Comments »
Posted on Wednesday June 20, 2007 by Rasheed
Posted on Wednesday June 20, 2007 by Rasheed
ಪ್ರಿಯೆ ಹಾಗಿರು ನನಗೆ
ಪ್ರೀತಿಯ ಒಡನೆ ಆಡುವ ಉರಿ
ಪ್ರಿಯೆ ಹಾಗಿರು ನನಗೆ
ಬೆಂಕಿಯ ಒಳಗೂ ಉರಿಯುವ ಬಿಸಿ
ಪ್ರಿಯೆ ಹಾಗಿರು ನನಗೆ
ಉರಿದು ತೀರುವ ಬಯಕೆಯ ಬತ್ತಿ
ಕಣ್ಣ ಮೇಣದ ಹನಿಯ ಅಳು
ಕರಗಿ ಹರಿವ ಕುಡಿ
ಪ್ರಿಯೆ ಹಾಗಿರು ನನಗೆ
ಈಗ ಪ್ರೀತಿಯ ಹಾದಿ ನಾವು ಸೇರಿ
ಇನ್ನು ಕತ್ತಲು ಬರದು ನಿದ್ದೆ ನಮಗೆ
ಈ ಹೆಂಡ ಪಡ ಶಾಲೆ ದುಡಿಯ ದೋಲು
ಪ್ರಿಯೆ ಹಾಗಿರು ನನಗೆ
ಇರುಳು ಕತ್ತಲು ಪ್ರೇಮಿಗಳು ಕಣ್ಣು ಮುಚ್ಚರು
ಈ ನಿದ್ದೆ ಯೋಚನೆ ಕಂಗೆಡಿಸದಿರಲಿ ಅವರನ್ನು
ಅವರು ಬಯಸುವುದು ಬರೆಯ ನಮ್ಮಜೊತೆ
ಪ್ರಿಯೆ ನೀನೂ ಹಾಗಿರು ನನಗೆ
ಕೂಡುವುದು ಕುದಿವ ನದಿ ಕಡಲತ್ತ [...]
Filed under: ರೂಮಿ | 3 Comments »
Posted on Tuesday June 19, 2007 by Rasheed
ನಮ್ಮ ಪ್ರೀತಿಯ ಮೇಷ್ಟ್ರು, ಚಿಂತಕ, ಹೋರಾಟಗಾರ, ತುಂಟ ಮನಸಿನ ಓಡಾಟಗಾರ ಕೆ.ರಾಮದಾಸ್ ಇದೀಗ ಕೊಂಚ ಹೊತ್ತಿನ ಮೊದಲು ಮೈಸೂರಿನ ಕುವೆಂಪು ನಗರದ ತಮ್ಮ `ಚಾರ್ವಾಕ’ ಎಂಬ ಮನೆಯಲ್ಲಿ ತೀರಿ ಹೋದರು.ಅವರಿಗೆ ೬೬ ವರ್ಷವಾಗಿತ್ತು. ಮಹಾರಾಜಾ ಕಾಲೇಜಿನಲ್ಲಿ ನನಗೆ ಅರಿವನ್ನು ಕಲಿಸಿದ ಗುರು, ಲಂಕೇಶ್, ತೇಜಸ್ವಿಯವರ ಪ್ರಾಣಮಿತ್ರ, ಕೆ. ರಾಮದಾಸ್ -ಇದೀಗ ಅವರನ್ನು ಸೇರಿಕೊಂಡಿದ್ದಾರೆ .ಯಾಕೋ ಏನೂ ಬರೆಯಲಾಗದ ಹಾಗೆ ಕಣ್ಣು ತುಂಬಿಕೊಳ್ಳುತ್ತಿದೆ.
ರಾಮದಾಸ್ ಅವರ ಆಲ್ಬಂನಿಂದ ಕೆಲವು ಚಿತ್ರಗಳು:
[ಪ್ರೀತಿಯ ತಾಯಿ ಮಂಜಮ್ಮ]
[ಮದುವೆಯ ದಿನ ಮಡದಿ ನಿರ್ಮಲಾ]
[ಮದುವೆಯಾದ ಮೇಲೆ ಕರೆಯೋಲೆ]
[ಲಂಕೇಶ್ [...]
Filed under: Friends | 9 Comments »
Posted on Monday June 18, 2007 by Rasheed
೧.
ನಿನ್ನ ತೆರೆದ ತೋಳನ್ನ ಕಂಡು
ಈವರೆಗೆ ಒಂದು ನೀಳ ನಿದ್ದೆ.
ಇದೀಗ ಎದ್ದಾಗ ಒಂದು ಕಂದು ಮಲೆ,
ಹಸಿವು -ಮತ್ತು ಅಸಹನೀಯ ಈ ಮಳೆ.
೨.
ಯಾರು ನೀನು?
ನಿನ್ನೆ ತಾನೆ ಕಂಡವಳು.
ಕಾಗುಣಿತ ಸರಿಮಾಡೆಂದರೆ
ನಾನು ಸರಿಯಿದ್ದೇನೆಯೇ
ಪರಿಶೀಲಿಸು ಅಂದವಳು!
೩
ನೀನು ಹೋಗುತ್ತೀಯ
ಮತ್ತೆ ಅವನಲ್ಲಿಗೆ.
ನಾನೂ ಅವಳ ಬಳಿಗೆ.
ಇಲ್ಲೇ ಉಳಿಯಿತು ಈ ನೆತ್ತರು-
ನಿನ್ನ ಬಳೆಯ ಚೂರು.
೪.
ಹೀಗಲ್ಲ ,ಹೀಗಲ್ಲವೆಂದು
ಮತ್ತೆ ಅಪ್ಪಿಕೊಂಡೆ.
ಕತ್ತಲಾಯಿತು ಹೋಗು ಅಂದೆ.
ಒಂದು ತುಣುಕು ಮೋಡ
ಉಳಿಯಿತು ಹಾಗೇ-
ಆಕಾಶದಲ್ಲಿ ಏನೂ ಆಗದಂತೆ.
೫.
ಹಾಗೆ ನೋಡಿದರೆ
ಏನೂ ಅಲ್ಲ ನಾವು ನಡೆಸಿದ್ದು.
ಆ ಭಯಂಕರ ಬಿಸಿಲು,
ಮತ್ತೆ ಹೊಡೆದ ಸಿಡಿಲು,
ಮತ್ತು ಆ ಬಿಳಿಯ ಬೆಕ್ಕು ರಸ್ತೆಯಲ್ಲಿ
ಅವಾಕ್ಕಾಗಿ ಆಗ ತಾನೇ ಮರಣ ಹೊಂದಿ
ನೋಡುತ್ತಿದ್ದುದು.
೬
ನೀರು [...]
Filed under: ಮೋಹಿತನ ಕವಿತೆಗಳು | 6 Comments »
Posted on Saturday June 16, 2007 by Rasheed
ಗೆಳೆಯರೊಬ್ಬರ ಕೋರಿಕೆಯ ಮೇರೆಗೆ ಹಿರೇನಂದಿಯ ಚಾಮಮ್ಮ ಮತ್ತು ಲಕ್ಷ್ಮಮ್ಮ ಪಾಡಿದ ಇನ್ನೊಂದು ಹಾಡು:-
click for you tube video
Filed under: ಮುಖಚಿತ್ರ | 1 Comment »
Posted on Saturday June 16, 2007 by Rasheed
ಶುಕ್ರವಾರದ ಬೆಳಗು ಹೂವಂತೆ ಹಗುರಾಗಿದೆ.ರಾತ್ರಿ ಹಾಜರಾಗಿ ಅತ್ತು ಹಂಗಿಸಿ ಕಿರಿಕಿರಿ ಮಾಡಿ ನಾನು ಬದುಕಿರುವುದೇ ತಪ್ಪು ಎನ್ನುವಂತೆ ಶಪಿಸಿ ನಟಿಕೆ ಮುರಿದು ಕೊನೆಗೆ ಹೋಗುವಾಗ ಕರುಣೆಯಿಂದ ಒಮ್ಮೆ ನೋಡಿ
ನಕ್ಕು ಹೋದ ಪ್ರತಿಮೆಗಳಂತಹ ಕಥಾ ಪಾತ್ರಗಳು ಈ ಬೆಳ್ಳನೆಯ ಬೆಳಗಿನಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲು ನಾಚಿಕೊಂಡು ಸುಮ್ಮಗಿವೆ.ನಾನಾದರೋ ಹಿಂದೆ ಎಂದೂ ಇಲ್ಲದ ಹಾಗೆ ಇಂದು ಆಹ್ಲಾದಕರವಾಗಿರಬೇಕು ಎಂದುಕೊಂಡು ಕನಸು ಕಾಣುತ್ತಿದ್ದೇನೆ.ನಖಗಳನ್ನು ಕಡಿಯುತ್ತಿದ್ದೇನೆ. ಅವಳು ಹಾಸಿಗೆಯಲ್ಲಿ ಮಲಗಿಕೊಂಡು ಅಲ್ಲೇ ಹೊರಳಾಡುತ್ತಾ,ಚಲಿಸುವ ಕಣ್ಣುಗಳಿಂದಲೇ ಸಮಸ್ತ ಮನೆಯನ್ನೂ, ಮಕ್ಕಳನ್ನೂ, ಆಗಾಗ ಕೊಕ್ಕರಿಸುತ್ತ ಒಳಬಂದು ಹಿಕ್ಕೆ ಹಾಕಿ [...]
Filed under: ಪ್ರಬಂಧ | 5 Comments »
Posted on Friday June 15, 2007 by Rasheed
ಚಾಮಮ್ಮ ಮತ್ತು ಲಕ್ಷ್ಮಮ್ಮ ವಾರಗಿತ್ತಿಯರು. ಸಖತ್ ಹಾಡುಗಾತಿಯರು.ಈವತ್ತು ಮನೆಗ ಬಂದಿದ್ದರು.
ಹೆಗ್ಗಡದೇವನಕೋಟೆ ದಿಕ್ಕಿನಲ್ಲಿರುವ ಹಿರೇನಂದಿಎಂಬ ಹಳ್ಳಿಯವರು.
ಕಷ್ಟ-ಸುಖ ಎಲ್ಲವನ್ನು ಕಲ್ಲು ನೀರು ಕರಗುವಂತೆ ಹಾಡು ಮಾಡಿ ಹಾಡುತ್ತಾರೆ.
ಮೊದಲಿಗೆ ಚಾಮಮ್ಮನ ಪಾಡು-[you tube video]
Filed under: ಮುಖಚಿತ್ರ | 6 Comments »
Posted on Thursday June 14, 2007 by Rasheed
[ಚಿತ್ರಗಳು:ಚರಿತಾ]
ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ ಹಸನ್ಮುಖರಾಗಿ ಎಂದಿನಂತೆ ಒಬ್ಬರೊಬ್ಬರ ಮುಖನೋಡಿಕೊಂಡು ನೀರ ಸದ್ದು ಮಾಡಿಕೊಂಡು ಮೌನವಾಗಿ ಕುಳಿತಿರುವುದನ್ನು ಕಂಡು ಕರಳು ಕಿವಿಚುತ್ತಿತ್ತು.
ನೆಬೀಸಾಳ ಅಣ್ಣ ಇಸುಬು ತನ್ನ ಸುಟ್ಟ ತಟ್ಟಿ ಹೋಟೆಲ್ಲಿನ ಮುಂದೆ ಕರಕಲಾದ ಬೆಂಚು ಮೇಜು ಅಲುಮಿನಿಯಂ ಪಾತ್ರೆಗಳನ್ನು ಹರಡಿಕೊಂಡು ಅವುಗಳ ನಡುವೆ ತನ್ನ ಎಂದಿನ ಭಂಗಿಯಲ್ಲಿ [...]
Filed under: ಕತೆ-ಗಿತೆ | 1 Comment »
Posted on Wednesday June 13, 2007 by Rasheed
ಕುಪ್ಪೆ ಗ್ರಾಮದ ನಿಂಗೇಗೌಡರು ಜಮೀನು ಮಾರಿದ್ದಾರೆ. ಆಮೇಲೆ ಏನು ಮಾಡುತ್ತಾರೆ?ಅವರನ್ನೇ ಕೇಳಿ
Filed under: ಮುಖಚಿತ್ರ | 3 Comments »
Posted on Tuesday June 12, 2007 by Rasheed
ಬಹುಜನರ ಕೋರಿಕೆಯ ಮೇರೆಗೆ ಶ್ರೀ ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಕೈಬರಹದ ಕವಿತೆಗಳ ಪುಸ್ತಕದಿಂದ ಕೆಲವು ಕವಿತೆಗಳನ್ನು ಇಲ್ಲಿ ನೀಡುತ್ತಿರುವೆ. ನಿಮಗೆ ಇಷ್ಟವಾದರೆ ಅವರ ಸುಂದರ ಕೈಬರಹದಲ್ಲಿರುವ ಇನ್ನೂ ಕೆಲವು ಕವಿತೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬಲ್ಲೆ[ಪಾಂಡೆಯವರು ಇದಕ್ಕೆ ಅನುಮತಿ ನೀಡಿದ್ದಾರೆ]
೧.
ನನ್ನನ್ನು ಪೂರ್ತಿಯಾಗಿ ಎಚ್ಚರಿಸಲಾಗದ
ಬೆಳಕಿನ ಚಂಚಲ ಕ್ಷಣಗಳಂತೂು
ಕಳೆದು ಹೋದವು.
ಈಗ ನನ್ನ ಪಾಲಿಗೆ ಬಂದಿರುವ
ಕತ್ತಲೆಯೂ ಸಹ ನ್ಯಾಯವಾಗಿಲ್ಲ.
ಇಲ್ಲಿಯೂ ಕೆಲವು
ಉಪಯೋಗಕ್ಕೆ ಬಾರದ
ನಕ್ಷತ್ರಗಳು
ನನ್ನ ನಿದ್ರೆಗೆಡಿಸುತ್ತಿದೆ.
೨.
ಹದಿ ಹರೆಯದವರು
ಬೆದೆಗೆ ಪ್ರೇಮವೆಂದು
ಪರಿಗಣಿಸುವ
ಆತಂಕವಿರುವುದರಿಂದ
ಮುದುಕರು; ಹಾದರವನ್ನು
ಕರಾರುವಕ್ಕಾಗಿ
ಮಾಡಿ ತೋರಿಸುತ್ತಾರೆ.
೩.
Filed under: Uncategorized | 4 Comments »
Posted on Monday June 11, 2007 by Rasheed
ಸಂಜೆ ಉರಿ ಬಿಸಿಲ ಲ್ಲಿ ನಿದ್ದೆ ಅರ್ದಕ್ಕೆ ಬಿಟ್ಟು ಮಕ್ಕಳಿಗೆ ಮುಸಂಬಿ ಸುಲಿಯತ್ತ ಕೂತಿದ್ದೆ
ಬೆವರು,ಸಂಕಟ,ಕನಸು,ಎಚ್ಚರ,ನಿದ್ದೆ. ಉಸ್ತಾದ್ ಅಮೀರ್ ಖಾನ್ ಎಂದಿನಂತೆ ‘ಪಿಯಾ ಪರದೇಶಿ ಪರಮಸುಖ ಚತುರ’ಎಂದು ಮತ್ತೆ ಮತ್ತೆ ಹಾಡುವಂತೆ ಹಾಡನ್ನ ಲೂಪ್ ಮಾಡಿಕೊಂಡಿದ್ದೆ. ನಾವು ಪರದೇಶಿಗಳಾದ ಗೆಳೆಯರು ಸುಖ ಸಂಕಟದ ಹೊತ್ತಲ್ಲಿಮತ್ತೆ ಮತ್ತೆ ಕೇಳುವ ಹಾಡು ಅದು. ಶಾಶ್ತ್ರೀಯವಾಗಿ ಕೇಳುವುದಾದರೆ ಬೆಳಗಿನ ಕೊನೆಯ ಜಾವದಲ್ಲಿ ಕೇಳಬೇಕಾದ ಹಾಡದು. ಪರದೇಶಿಗಳಾದ ಪರಮಸುಖಚತುರರು ಯಾವ ಜಾವದಲ್ಲಾದರೂ ಕೇಳಬಹುದು ಅನ್ನುವಂತೆ ಉಸ್ತಾದ್ ಅಮೀರ್ ಖಾನ್ ಹಾಡುತ್ತಿದ್ದರು. ಮಕ್ಕಳು ಆಸೆಯಿಂದ ಸುಲಿಯುತ್ತಿರುವ ಮುಸಂಬಿಯನ್ನು ನೋಡುತ್ತಿದ್ದರು. [...]
Filed under: ಅಲೆಮಾರಿಯ ದಿನಚರಿ | 8 Comments »