ಮಲೆನಾಡಿನ ತರಳೆಯೊಬ್ಬಳ ಕವಿತೆಗಳು
ನಾನು ಸಾಗರದ ಶಿಲಾಬಾಲಿಕೆ ಅಂತ ಹೇಳಿ ಒಬ್ಬರು ಕವಿತೆಗಳನ್ನು ಮೇಲ್ ಮಾಡಿದ್ದಾರೆ. ಓದಲು ಚೆನ್ನಾಗಿಯೇ ಇರುವ ಈ ಕವಿತೆಗಳು ನಿಮ್ಮ ಸಂತೋಷಕ್ಕಾಗಿ:

1
ಇದು ತೀರಾ ಖಾಸಗಿ ಸಂಗತಿ ಎಂಬಂತೆ
ಉರಿಯ ನಡುವೆ ಮಳೆ ಎರಡು ಹನಿ
ಬೀಳಿಸಿ ಹೋಯಿತು.ಮಣ್ಣೆಲ್ಲ ‘ಘಂ‘ ಅಂತ ಪುಲಕಗೊಂಡು
ನೀ ಬಂದಾಗ ನನಗೆ ಆಗುವ ಹಾಗೆ
ಬನದಲ್ಲಿ ನವಿಲುಗಳು ಕೇಕೆ ಹಾಕಲು ತೊಡಗಿತು.

2
ನನಗೆ ನೀಲ ವರ್ಣ ಬಲು ಹಿತವೆನಿಸುತ್ತೆ
ಅವನ ಹಿಮ್ಮಡಿಯ ಒಡೆದ ಬಿರುಕೂ ಅಷ್ಟೆ
ಮೈಯುಜ್ಜುವ ಹೊಳೆಯ ಕಲ್ಲಿನ ಹಾಗೆ
ವರದಾ ನದಿಯ ನೀರು ನೀಲಿ
ಅವನ ಬಣ್ಣಗಾರಿಕೆಯ ಮಾತುಗಳ ಹಾಗೆ!

3
ನೀನು ಸಣ್ಣಗಿದ್ದೀಯಆದರೂ ಚನ್ನಾಗಿದ್ದೀಯ
ಯಾಕೆ ಸಣ್ಣಗೆ ಕಂಪಿಸುತ್ತೀಯ?
ನೀನು ಏನೋ ಹೇಳುತ್ತೀ ಎಂದು ಕಾಯುತ್ತಿದ್ದೆ
ನೀನು ‘ಸಹೋದರೀ‘ಅಂದೆ
ಆದರೂ ನನಗೆ ಖುಷಿಯಾಯಿತು
ನೀ ಇನ್ನೆಂದು ಬರುವೆ?

4
ಯಾಕೋ ಕಣ್ಣು ತುಂಬಿಕೊಳ್ಳುತ್ತಿತ್ತು
ಅಪ್ಪ ಸುಮ್ಮನೆ ಹಠ ಮಾಡಿ ಕ್ರಾಪ್
ಸರಿಮಾಡಿಕೊಂಡು ಹೊರಟ
ಅಮ್ಮ ತುರಿಮಣೆ ಎಳಕೊಂಡು ಕುಳಿತಳು
ನಾನು ಅಡಿಕೆಯ ಮರದ ತುದಿ ನೋಡತೊಡಗಿದೆ
ಕೃಷ್ಣ ಬಂಗಾರ ವರ್ಣ
ಜೋಕಾಲಿಯಾಡುತ್ತಿದ್ದ!

[ಬಹುಶಃ ನಿಮ್ಮ ಪ್ರತಿಕ್ರಿಯೆ ಈ ಕವಯತ್ರಿಯನ್ನು ಇನ್ನಷ್ಟು activate-motivate ಮಾಡಬಹುದು]
Filed under: Friends
ಕವನಗಳು ಚೆನ್ನಾಗಿವೆ. ಈ ಕವಯಿತ್ರಿ ಇನ್ನೂ ಇನ್ನೂ ಬರೆಯಲಿ. ಅವನ್ನು ಓದುವ ಅವಕಾಶ ನಮ್ಮದಿರಲಿ.
ಕಮಲಾಕರ
Sagarada hudugige,
Alla kane hudugi, neenu hogi hogi EEE Rasheed unclege yeke kavana kaliside? Aakashavaniyalli recite maaduva program haakidare enu maadutteeya? Aaga ninna anonymity-ya kathe mugide hoguttade!! Heege bareyutta iddare sari. channnagive. Fresh annisuttave.