ರಾಮಚಂದ್ರ ಭಟ್ಟರೂ,ಕುಂಞಪ್ಪ ಬ್ಯಾರಿಗಳೂ

ಇದು ಹುಡುಗ ಹುಡುಗಿಯರ ಹದಿಹರೆಯದ ಹುಚ್ಚಿನ ಮೋಹಕ ಪ್ರೇಮವಲ್ಲ, ಹೆಣ್ಣು- ಗಂಡಿನ ಉರಿಯುವ ಪ್ರೇಮದ, ಕಾಮದ ನಾಲಗೆಯ ಚಾಚುವಿಕೆಯಲ್ಲ, ಗಂಡಸು ಮತ್ತು ಗಂಡಸಿನ ನಡುವಿನ ಅಥವಾ ಹೆಂಗಸು ಮತ್ತು ಹೆಂಗಸಿನ ನಡುವಿನ ಹೇಳಲೂ ಆಗದ ನುಂಗಲೂ ಆಗದ ಆಕರ್ಷಣೆಯಲ್ಲ.
ಇದು ಇಬ್ಬರು ಮುದುಕರ ಪ್ರೇಮದ ಕಥೆ. ಇಲ್ಲಿ ನಾಯಕರಿಲ್ಲ, ನಾಯಕಿಯರಿಲ್ಲ, ಖಳರಿಲ್ಲ, ವಿರಹವಿಲ್ಲ, ಅಸೂಯೆಯಿಲ್ಲ. ಎಲ್ಲವನ್ನೂ ವಿವರಿಸಿ ಹೇಳುವ ಕಾರ್ಯ ಮತ್ತು ಕಾರಣಗಳೆಂಬ ಸಂಬಂಧಗಳ ಹಂಗೂ ಈ ಮುದುಕರಿಗೆ ಇಲ್ಲ. ಯಾಕೆ ಈ ಪ್ರೇಮ ಎಂದು ಕೇಳಿದರೆ ಇದಕ್ಕೇ [...]

ದಾರಿ ಯಾವುದಯ್ಯಾ ವೈಕುಂಠಕೆ……….

 

‘ದಾರಿ ಯಾವುದಯ್ಯ ವೈಕುಂಠಕೆ’ಎಂದು ಗೊಣಗುತ್ತಿದ್ದೇನೆ.ಗೆಳೆಯ ದೂರದಿಂದ ದೂರವಾಣಿಯಲ್ಲಿ `ಕುರಾನ್ ಓದುತ್ತಿದ್ದೇನೆ..ಕೆಲವು ಕಡೆ ಎಷ್ಟು ಚೆನ್ನಾಗಿದೆ.ಇನ್ನು ಕೆಲವು ಕಡೆ ಗೊತ್ತಾಗುತ್ತಿಲ್ಲ. ನಿನಗೇನಾದರೂ ಅರಿವಾಗಿದೆಯೇ?’ಎಂದು ಕೇಳುತ್ತಿದ್ದಾನೆ. ನಾನು ಸುಮ್ಮನೇ ತಲೆಯಾಡಿಸುತ್ತೇನೆ.’ದೇವರುಗಳ ವಾಣಿ ಮಾರಾಯ.ನರಮನುಷ್ಯರ ಅರಿವಿಗೆ ಅಷ್ಟು ಸುಲಭದಲ್ಲಿ ಒದಗುವುದಿಲ್ ಲ.ಹಾಗೆ ಒದಗಿದ್ದಿದ್ದರೆ ಯಾಕೆ ನಾನು ಮತ್ತು ನೀನು ಯಾಕೆ ಈ ನಿತ್ಯ ನರಕದ ಬೆಂಕಿಯಲ್ಲಿ ಹೀಗೆ ಹಿತವಾಗಿ ಚಳಿ ಕಾಯಿಸಿಕೊಳ್ಳುತ್ತಿದ್ದೆವು’ ಎಂದು ಕಿಚಾಯಿಸಬೇಕೆನ್ನಿಸುತ್ತದೆ.ಆದರೆ ಆತ ಹೀಗೆ ಗಂಭೀರವಾಗಿ ಧರ್ಮಪಾರಾಯಣದಲ್ಲಿ ತೊಡಗಿರುವಾಗ ಹೇಗೆ ಲಂಪಟತನ ಮೆರೆಯಲಿ ಎಂದು ಸುಮ್ಮನಾಗುತ್ತೇನೆ.

ಟಿ.ಎಸ್.ಎಲಿಯಟ್ಟನ ಪ್ರೂಫ್ರಾಕ್ ಕವಿತೆಯ ಕೆಲವು ಸಾಲುಗಳು

 
ಬಾ ಮತ್ತೆ ಹೋಗೋಣು ,ನಾ ಮತ್ತೆ ನೀನು,
ಸಂಜೆ ಆಕಾಶಕ್ಕೆದುರು ರಾಚಿ
ಆಸ್ಪತ್ರೆ ಮೇಜಿಗಾನಿಸಿ ಮಲಗಿಸಿದ ರೋಗಿ;
ಬಾ ಹೋಗೋಣು, ಅರೆಬರೆಖಾಲಿ ಹಾದಿಗಳಲ್ಲಿ,
ಗೊಣಗುವ ತಾಣಗಳಲ್ಲಿ,
ನೆಮ್ಮದಿಗೆಟ್ಟ ಒಂದುರಾತ್ರಿಯ ಅಗ್ಗ ಹೋಟೆಲ್ಲುಗಳಲ್ಲಿ
ಮೀನಬಡಿಸುವ ದೂಳು ತುಂಬಿದ  ರೆಸ್ಟಾರೆಂಟುಗಳಲ್ಲಿ:
ಬೀದಿಗಳಲ್ಲಿ ,ನೆಮ್ಮದಿಗೊಡದ ವಾದಗಳಲ್ಲಿ,ಹಿಂದೇ ಬರುವ
ಕುಹಕ ಹಾದಿಗಳಲ್ಲಿ.
ನಿಲ್ಲಿಸಲು ನಿನ್ನನ್ನೊಂದು ಗಹನ ಪ್ರಶ್ನೆಯ ಎದುರು..
ಓ,ಕೇಳದಿರು`ಅದೇನು?ಎಂದು.
ಹೋಗೋಣ, ಹೋಗುವುದ ಮಾಡೋಣ.
ರೂಮಿನಲಿ ಹೆಂಗಸರು ಬಂದು ಹೋಗುವರು
ಉಲಿಯುತ್ತ ಮೈಕೆಲೇಂಜೆಲೋ ಎಂದು
ಹಳದಿ ಕಾವಳ ಕಿಟಕಿಗಾಜಿಗೆ ತನ್ನ ಬೆನ್ನ ಉಜ್ಜಿ
ಹಳದಿ ಹೊಗೆ ಕಿಟಕಿಗಾಜಿಗೆ ತನ್ನ ಮೂತಿಯ ಒರಸಿ
ಸಂಜೆಗಾಲದ ಮೂಲೆಮೂಲೆಗೆ ನಾಲಗೆ ನಕ್ಕಿ,
ನಿಂತರಾಡಿಯನೀರಿಗೆತಾನೂ ತುಸು ತಡೆದು ನಿಂತು
ಚಿಮಣಿಮಸಿಇಜ್ಜಲು ತನ್ನ ಬೆನ್ನಿಗೆಬೀಳಲು ಬಿಟ್ಟು
ಓಡಿಂದಜಾರಿ,ತಟ್ಟನೇಜಿಗಿದು,
 ಮತ್ತೆ ಇದು [...]

‘ಬೀಜ’-ಒಂದು ಹಳೆಯ ಸಣ್ಣ ಕಥೆ

ಬೀಜ
ಬಂಗಲೆಯೋ ಗೂಡಂಗಡಿಯೋ  ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ.ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು ಬುಟ್ಟಿ ಇಟ್ಟುಕೊಂಡು ಆ ವ್ಯಾಪಾರಕ್ಕೂ ಹೊರಡಬೇಕಾಗುತ್ತದೆ ಎಂದು ತನ್ನ ಉದ್ದ ಕಾಗದದ ಕೊನೆಯಲ್ಲಿ ಶರಾ ಬರೆದಿದ್ದ.ಜಾಗತೀಕರಣಕ್ಕೂ ಮುಕ್ತ ಮಾರುಕಟ್ಟೆಗೂ  ಕೊಡಗಿನಲ್ಲಿ ಕಾಫಿ ಬೆಲೆ ಕುಸಿದು ಬೆಳೆಗಾರ ಕಂಗಾಲಾಗಿರುವುದಕ್ಕೂ ಹತ್ತಿರದ ಕೇರಳದಿಂದ ಮಲಯಾಳಿಗಳು ಕೊಡಗಿನ ಭತ್ತದ ಗದ್ದೆಗೆ ನುಗ್ಗಿ ಶುಂಠಿ ಬೆಳೆದು ಕೊಬ್ಬಿಹೋಗಿರುವುದಕ್ಕೂ ಹೇಗೆ [...]

ಮೊದಲು ಮಲ್ಲಮ್ಮ, ನಡುವಲ್ಲಿ ಸರಸ್ವತಿ ಮತ್ತು ಇದೀಗ ಜುಲೈಕಾ

ನೋಡಲು ಚೂಟಿಯಾಗಿದ್ದ ಆದರೆ ಓದಲು ಅಷ್ಟೇನೂ ಚುರುಕಾಗಿರದ ನಮ್ಮ ಸಂಬಂಧಿಕರ ಹುಡುಗಿಯೊಬ್ಬಳನ್ನು ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದೆ. ಎರಡು ವರ್ಷಗಳ ಹಿಂದೆ ಒಂದು ದಿನ ಸಂಜೆ ಎಲ್ಲಿಯೋ ತಿರುಗಾಡಲು ಹೋಗಿದ್ದ ನಾನು ತಿರುಗಿ ಬಂದಾಗ ಕತ್ತಲಾಗುತ್ತಿತ್ತು. ಆ ಹುಡುಗಿಗೆ ಗಂಡು ಹುಡುಕಿಕೊಂಡು ಬಂದ ಮಹಿಳೆಯರೊಬ್ಬರು ನನಗಾಗಿ ಕಾಯುತ್ತಾ ಕುಳಿತಿದ್ದರು. ಗಂಡು ಹುಡುಕುವುದು, ಮದುವೆ ಮಾಡಿಸುವುದು ಇತ್ಯಾದಿಗಳಲ್ಲಿ ಅಷ್ಟೇನೂ ಆಸಕ್ತಿ ಇರದ ನಾನು ಒಂದು ತರಹದ ನಿರಾಸಕ್ತಿಯಿಂದಲೇ ಆಕೆಯನ್ನು ಏನು ಮಾತಾಡಿಸುವುದು ಎಂದು ಯೋಚಿಸುತ್ತಿದ್ದೆ. ಮದುವೆಯ ವಯಸ್ಸೇನೂ ಆಗಿರದಿದ್ದ ಸಂಬಂಧಿಕರ ಹುಡುಗಿ [...]

ನಯೀಭ್ ಮೆಹಫೂಝನ ಆತ್ಮ ಕಥೆಯ ಕೆಲವು ಕಬಾಬ್ ತುಂಡುಗಳು

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತೀರಿಕೊಂಡ ಈಜಿಪ್ಟ್ ಧೇಶದ ಅರಬಿ ಭಾಷೆಯ ಮಹಾನ್ ಬರಹಗಾರನ ಆತ್ಮ ಕಥೆಯ ಕೆಲವು ತುಂಡುಗಳು ನಿಮಗಾಗಿ

 
-1-
ಒಂದು ಪ್ರಾರ್ಥನೆ
ಕ್ರಾಂತಿಯಾಗಲೆಂದು ಪ್ರಾರ್ಥಿಸುತ್ತಿದ್ದಾಗ ನನಗಿನ್ನೂ ಏಳು ವರ್ಷವೂ ಆಗಿರಲಿಲ್ಲ.
ಆವತ್ತು ಬೆಳಗ್ಗೆ ಕೆಲಸದ ಹುಡುಗಿಯ ಕೈ ಹಿಡಕೊಂಡು ಶಾಲೆಗೆ ಕಾಲೆಳೆಯುತ್ತಾ ನಡೆಯುತ್ತಿದ್ದೆ. ಜೈಲಿಗೆ ಎಳೆದುಕೊಂಡು ಹೋಗುವ ಹಾಗೆ ಅನಿಸುತ್ತಿತ್ತು.ಕೈಯಲ್ಲೊಂದು ಕಾಪಿ ಪುಸ್ತಕ,ಕಣ್ಣುಗಳಲ್ಲಿ ಜಿಗುಪ್ಸೆ,ಎದೆಯೊಳಗೆ ಏನೋ ಅರಾಜಕತೆಯ ಆಸೆ. ತಣ್ಣನೆಯ ಕುಳಿರು ಚಡ್ಡಿಯ ಕೆಳಗೆ ಬತ್ತಲೆಕಾಲುಗಳನ್ನು ತಿವಿಯುತ್ತಿತ್ತು. ನೋಡಿದರೆ ಶಾಲೆಯ ಬಾಗಿಲು ಹಾಕಿತ್ತು. ಶಾಲೆಯ ಕಾವಲುಗಾರ ಗಟ್ಟಿ [...]

ಬರ್ಕೆ ಹಲಸಿನ ಹಣ್ಣು ಮತ್ತು ಬರ್ಮುಡಾ ಚಡ್ಡಿ

        ಬರ್ಕೆ ಹಲಸಿನ ಹಣ್ಣು ಬೀಳುತ್ತದೆ ಎಂದು ಅಂದುಕೊಂದು ನಾವು ಹಲಸಿನ ಮರದ ಕೆಳಗೆ ನಿಂತುಕೊಂಡಿದ್ದರೆ ಹಣ್ಣು ಕೊಯ್ಯಲು ಹತ್ತಿದ್ದ ಕುಂಞಮ್ಮದ್ ತಾನೇ ದೊಪ್ಪೆಂದು ಬಿದ್ದುಬಿಟ್ಟಿದ್ದ.ಆಸೆ ಕಣ್ಣು ಬಿಟ್ಟುಕೊಂಡು ಮಳೆಗಾಳಿಯ ನಡುವೆ ಸೊಳ್ಳೆ ಕಚ್ಚಿಸಿಕೊಂಡು ಪಿಚಿಪಿಚಿ ಕೆಸರಿನಲ್ಲಿ ಕಾಲು ಊರಲಾರದೆ ಒಂಟಿಕಾಲಿನಲ್ಲಿ ನಿಂತುಕೊಂಡಿದ್ದ ಪುಡಿಮಕ್ಕಳಾದ ನಾವು ಉಡದಂತೆ ಮರ ಏರಿದ್ದ ಕುಂಞಮ್ಮದ್ ಇನ್ನೇನು ಹಣ್ಣು ಬೀಳಿಸುತ್ತಾನೆ ಎಂದುಕೊಂಡಿದ್ದರೆ ಆತನೇ ಹಲಸಿನ ಹಣ್ಣಂತೆ ಉರುಳಿ ಕೆಸರಲ್ಲಿ ಮುಖ ಮುಚ್ಚಿ ಬಿದ್ದು ತೀರಿಕೊಂಡವನಂತೆ ನಿಶ್ಚಲನಾಗಿದ್ದ. ಆಮೇಲೆ ನಿದಾನಕ್ಕೆ ಎದ್ದು ಕುಂಟುತ್ತಾ [...]

ಟಾಲ್ ಸ್ಟಾಯ್ ಮಹರ್ಷಿಯ ಒಂದು ಪುಟ್ಟ ಕಾದಂಬರಿ

 
 
                           ‘ಹೇಗಾದರೂ ಮಾಡಿ ಒಂದು ಕಾದಂಬರಿ ಬರೆದುಬಿಡು.ಆಮೇಲೆ ನಿನ್ನ ಹಿಡಿಯುವವರೇ ಇರುವುದಿಲ್ಲ’ ಎಂದು ಗೆಳೆಯರು ಪುಸಲಾಯಿಸುತ್ತಿದ್ದರು.ಇವರು ಪುಸಲಾಯಿಸುತ್ತಿರುವುದರ ಹಿಂದೆ ಏನೋ ಮಸಲತ್ತಿರಬೇಕು.ಇಲ್ಲ,ನನಗಾಗುವುದಿಲ್ಲ ಎಂದು ನಾನು ತಲೆಕೆದರಿಕೊಂಡು ಊರಿಡೀ ಅಳುತ್ತಾ ಓಡಾಡುವುದನ್ನು ಕಂಡು ಖುಷಿಪಡಲು ಇವರು ಮಸಲತ್ತು ನಡೆಸುತ್ತಿರಬೇಕು ಎಂದು ನಾನವರ ಮಾತುಗಳನ್ನು ಕೇಳಿಸಿಯೂ ಕೇಳಿಸಿಕೊಳ್ಳದವನ ಹಾಗೆ ಸುಮ್ಮನೇ ಓಡಾಡುತ್ತಿದ್ದೆ.ಒಂದು ವೇಳೆ ಇವರು ಇನ್ನೂ ಹಠ ಹಿಡಿದರೆ ಹೇಗೆ ತಪ್ಪಿಸಿಕೊಳ್ಳುವುದು? ತಪ್ಪಿಸಿಕೊಳ್ಳಲಾಗದೆ ಬರೆಯಲೇ ಬೇಕಾಗಿ ಬಂದ ಪಕ್ಷದಲ್ಲಿ ಏನು ಬರೆಯುವುದು?
 ಕಾದಂಬರಿ ಬರೆಯುವುದು ಅಂದರೆ ಏನು ಸುಲಭವೇ ಅದಕ್ಕೆ ಜೀವನದರ್ಶನ [...]

ನಡೆಯಲು ಕಲಿಸಿದ ಪಾತಿಂಞ ಮತ್ತು ಆಧುನಿಕೋತ್ತರ ಬಿಕ್ಕಟ್ಟು!

ನನಗೆ ನಡೆಯಲು ಕಲಿಸಿದ ಮೇಲಿನ ಹಾಡಿಯ ಪಾತಿಂಞ ಮೊನ್ನೆ ಹೂವಿನಕೊಲ್ಲಿಗೆ ಹೋದಾಗ ಸಿಕ್ಕಿ ತುಂಬ ಖುಷಿ ಪಟ್ಟರು. ಕಾಲು ಪಾಲು ಕಾದಂಬರಿ ಬರೆದು ಸಾಗುತ್ತಿರುವ ನನಗೆ ಅವರ ಆಶೀರ್ವಾದ ಇನ್ನೂ ಸಿಕ್ಕಿಲ್ಲ.ಏಕೆಂದರೆ ಬರೆಯುತ್ತೇನೆ ಎಂದು ಅವರಲ್ಲಿ ಹೇಳಲು ನನಗೆ ದೈರ್ಯವಿಲ್ಲ.ಹೇಳಿದರೆ ಅದು ಪಾತಿಂಞಳಿಗೆ ಅರಿವಾಗುವುದೂ ಇಲ್ಲ.
ಎಂತಹ ಆಧುನಿಕೋತ್ತರ ಬಿಕ್ಕಟ್ಟು ಇದು ಪಾತಿಂಞ! ನೀವು ನನಗೆ  ನಡೆಯಲು ಕಲಿಸದಿದ್ದರೆ ಹೀಗೆಲ್ಲಾ ಆಗುತ್ತಿತ್ತಾ???

ಗಾಣಿಗರ ಸಿದ್ಧಮ್ಮನ ಇನ್ಪೋಸಿಸ್ ಕನಸು

 

ಮಧ್ಯಾಹ್ನದ ಹೊತ್ತು ನಿದ್ದೆ ಮಾಡುವ ನನ್ನ ಮಗನನ್ನು ನೋಡಿಕೊಳ್ಳಲು ಸಿದ್ಧಮ್ಮ ಎಂಬ ಗಾಣಿಗರ ಅಜ್ಜಿ ಬರುತ್ತಾಳೆ. ಈ ಅಜ್ಜಿಯ ಬೆನ್ನು ಸ್ವಲ್ಪ ಬಾಗಿದೆ. ಸೊಂಟ ಯಾವಾಗಲೂ ಹಿಡಿದುಕೊಂಡಿರುತ್ತದೆ. ಕೀಟಲೆಯಲ್ಲಿ ನನಗಿಂತಲೂ ಒಂದು ಕೈ ಮೇಲೆಯೇ ಇರುವ ನನ್ನ ಮಗ ಒಂದು ಕಣ್ಣು ತೆರೆದುಕೊಂಡು ಇನ್ನೊಂದು ಕಣ್ಣನ್ನು ಮುಚ್ಚಿ ಕಣ್ಣೆದುರು ಕಾಣಿಸುವ ಎಲ್ಲ ಚರಾಚರ ವಸ್ತುಗಳ ಸ್ಪೆಲ್ಲಿಂಗನ್ನು ಹೇಳಿಕೊಂಡು ಕ್ಯಾಟ್ ಅನ್ನುವ ಹೆಸರಲ್ಲಿ ‘ಸಿ’ ಯಾಕೆ ಬೇಕು? ‘ಯು’ ಯಿಂದ ಶುರುವಾಗುವುದಾದರೆ ಕೊಡೆಯನ್ನು ಯುಂಬ್ರೆಲಾ ಎಂದು ಕರೆಯಬೇಕಲ್ಲವೇ ಎಂದೆಲ್ಲಾ [...]

ರಾಮಾಪುರದಲ್ಲೊಂದು ಜನ್ಮರಹಸ್ಯ

                                                                  -೧-
 ನಾವು ರಾಮಾಪುರ ತಲುಪಿದಾಗ ರಾತ್ರಿಯಾಗಿತ್ತು. ಕತ್ತಲಲ್ಲಿ ಈ ದರಿದ್ರ ಧರೆಗೆ ಇಳಿದ ಕ್ಷುದ್ರ ದೇವತೆಯರಂತೆ ನಾವು ಮಹದೇಶ್ವರ ಟ್ರಾವೆಲ್ಸ್ ಬಸ್ಸಿನಿಂದ ಜಿಗಿದು ರಾಮಾಪುರ ಬಸ್ ಸ್ಟಾಪ್ ನಲ್ಲಿ ಇಳಿದಾಗ ಇದು ಯಾವ ಊರು? ಇಲ್ಲಿಯ ಜನರು ಹೇಗೆ? ಬಡವರಲ್ಲಿ ಬಡವರು ಎಷ್ಟು? ಕೊಬ್ಬಿರುವ ಭೂಮಾಲಕರು ಹೇಗೆ? ಅಲ್ಲಿನ ರಾಜಕಾರಣಿಗಳು ಯಾರು? ಅಧಿಕಾರಷಾಹಿ ಯಾರ ಬಾಲ? ಪೋಲೀಸು  ವ್ಯವಸ್ಥೆ ಯಾರ ಪರ- ಒಂದೂ ಗೊತ್ತಾಗದಂತೆ ಕಡ್ಲೆಪುರಿ ಮಾರುವ ಹೆಂಗಸಿನ ಸೀಮೆಣ್ಣೆ ಬುಡ್ಡಿಯ ಕರ್ರಗಿನ ಹೊಗೆಯಿಂದ ಆವೃತವಾದ ಮಂದ [...]

ಡಾ.ಯು.ಆರ್.ಎ. ಮತ್ತು ಮೈಸೂರಿನ ಬಾಲಕ

ನಮ್ಮ ಪ್ರೀತಿಯ ಬರಹಗಾರನ ಜೊತೆ ಮೈಸೂರಿನ ಈ ಬಾಲಕ ಏನು ಹೇಳುತ್ತಿರಬಹುದು?ಏನು ಕೇಳುತ್ತಿರಬಹುದು.
ನಿಮಗೇನನಿಸುತ್ತದೆ?
ಪ್ರತಿಕ್ರಿಯಿಸಿ!

ತೇಜಸ್ವಿ ನನ್ನ ಮೊಬೈಲ್ ನಂಬರ್ ಮರೆಯದಿರಲಿ ದೇವರೇ….

[ವ್ಯಂಗ್ಯಚಿತ್ರ ಕೃಪೆ:ಗುಜ್ಜಾರಪ್ಪ]
 
[...]

ರೈನರ್ ಮರಿಯಾ ರಿಲ್ಕ್ ನ ಇನ್ನೊಂದು ಕವಿತೆ..

 ಒಂಟಿ

ಎಲ್ಲವೂ ದೂರ
ಎಲ್ಲೋ ಹೋದಂತಿದೆ.
ಮೇಲೆ ಹೊಳೆಯುವ ತಾರೆ
ಕೋಟಿ ವರ್ಷಗಳಿಂದ
ತೀರಿಹೋದಂತಿದೆ.
ಈಗ ಹಾದು ಹೋದ ಬಂಡಿಯಲ್ಲಿ
ಕಣ್ಣೀರು ಕಂಡಂತೆ ಏನೋಕೆಟ್ಟದ್ದು
ಅಂದಂತೆ ಅನಿಸುತ್ತಿದೆ.
ಬೀದಿಯ ಆಚೆ ಬದಿ ಆಮನೆಯಲ್ಲಿ
ಗಡಿಯಾರ ಹೊಡೆಯುವುದು ನಿಂತು…
ಅದು ಚಲಿಸಿದ್ದು ಯಾವತ್ತು..?
ಅನಿಸುತ್ತಿದೆ ಎದೆಯೊಳಗಿಂದ ಎದ್ದು ಹೊರಟು ನಿಂತು
ಆ ದೊಡ್ಡ ಆಗಸದ ಅಡಿಯಲ್ಲಿ ನಡೆಯಲು,
ಅನಿಸುತ್ತಿದೆ ಪ್ರಾರ್ಥಿಸಲು.
ನಿಜವಾಗಲೂ ಗತಿಸಿಹೋದ ಎಲ್ಲ ತಾರೆಗಳ ನಡುವೆ
ಬಹಳ ಹಿಂದಿನದೊಂದು
ಇನ್ನೂ ಉಳಿದಿದೆ ಅನಿಸುತ್ತಿದೆ.
ಅದು ಯಾವುದದು
ನನಗೆ ಗೊತ್ತಿರುವಂತೆ
ಯಾವುದದು- ತನ್ನ ಕಿರಣದ ಕೊನೆಯಲ್ಲಿ
ಆಕಾಶದಲ್ಲಿ
ಒಂದು ಬಿಳಿಯ ಪಟ್ಟಣದಂತೆ
ನಿಂತಿರುವುದು.. .. ..

ಲಂಕೇಶರ ಮೇಲಿನ ವಿಳಾಸಕ್ಕೆ ಬರೆದ ಒಂದು ಹಳೆಯ ಪತ್ರ

[ತೇಜಸ್ವಿಯವರಿಲ್ಲದ ಸಂದರ್ಭದಲ್ಲಿ]

ಪ್ರಿಯ ಲಂಕೇಶರಿಗೆ ,
ಮೇಲೆ ಆ ನರಕದ೦ತಹ ಸ್ವರ್ಗದಲ್ಲಿ ನೀವು ಹೇಗೆ ಚಡಪಡಿಸುತ್ತಿರಬಹುದು ಎ೦ದು ಕತ್ತಲಲ್ಲಿ ಒಮ್ಮೆ ಗಹಗಹಿಸಿ ನಕ್ಕೆ . ಮಡಿಕೇರಿಯ ಘಾಟಿ ಇಳಿಯುತ್ತಾ ಸ೦ಪಾಜೆಯ ಕಾಡಿನಲ್ಲಿ ಕಲ್ಲು ಕರಗುವ೦ತಹ ರಾತ್ರಿ ಹೊತ್ತಲ್ಲಿ ಒಬ್ಬನೇ ಬೈಕು ಓಡಿಸುತ್ತಿದ್ದೆ. ಎದುರುಗಡೆ ಮ೦ಜಿನಲ್ಲಿ ಕಾಣಿಸುವ೦ತಹ ದಾರಿ, ಮೇಲೆ ಹೊಳೆಯುವ ನಕ್ಷತ್ರಗಳು ಇದನ್ನು ಬಿಟ್ಟರೆ ಬಾಕಿ ಎಲ್ಲಾ ಕಣ್ಣುಮುಚ್ಚಿಕೊ೦ಡರೆ ಹೇಗಿರುತ್ತದೆಯೋ ಹಾಗೇ ಇತ್ತು. ಮೇಲೆ ಕುಮಾರವ್ಯಾಸ , ಶೇಕ್ಸ್ ಪಿಯರ್, ಬಸವಣ್ಣ ಮರ್ಲಿನಮನ್ರೋ, ಹೆಲೆನ್, ದೇವರಾಜ್ ಅರಸು, ಪುರ೦ದರದಾಸ , ಬೇ೦ದ್ರೆ [...]

ಯಾಕಳುವೆ ಮಗು ತೇಜಸ್ವಿ…

ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು..
‘ಯಾಕಳುವೆ ಮಗು ತೇಜಸ್ವಿ..’ಎಂದು ಕುವೆಂಪು ಬರೆದಿದ್ದರು
‘ನೀನು ಎರಡು ವರ್ಷದ ಮಗು ನಾನು ಎರಡು ವರ್ಷದ ತಂದೆ’ ಎಂದಿದ್ದರು.
ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು
ಏನು ಬರೆಯುವುದು ಏನು ಚಿತ್ರ ತೆಗೆಯುವುದು ಏನು ಚಿಂತಿಸುವುದು
ಎಲ್ಲವೂ ಮಣ್ಣಲ್ಲಿ ಮಣ್ಣಾಗಿ ಬಿಡುವುದು.
ಕುರಿತು ಬರೆದ ಮರ , ಕುರಿತು ಬರೆದ ಮಲೆ- ಸರೋವರ,
ಮಾತು ಕೇಳಿ ನಕ್ಕು ಹೋದ ಜನ. ಬೈಸಿಕೊಂಡು ಕುಗ್ಗಿ ಹೋದ ಸಜ್ಜನ,
ಕಾಜಾಣ, ಕವಿಶೈಲ,- ಯಾವುದೂ ಉಳಿಯಬಿಡುವುದಿಲ್ಲ.
ತೇಜಸ್ವಿ, ನೀವಿಲ್ಲದ ಮೊದಲ ದಿನ - ಕೈ ಆಡುತ್ತಿಲ್ಲ.ಬಾಯಿ [...]

ಪೂರ್ಣ ಚಂದ್ರ ತೇಜಸ್ವಿ ತೀರಿಕೊಂಡರು

 
 
 
ಮೊನ್ನೆ ತಾನೇ ತೇಜಸ್ವಿಯವರ ಪತ್ನಿ ಆರ್. ರಾಜೇಶ್ವರಿ ಮೈಸೂರು ಆಕಾಶವಾಣಿಯಲ್ಲಿ ಮಾತನಾಡಿದ್ದರು. ತೇಜಸ್ವಿ ಎಷ್ಟು ಸುಂದರವಾಗಿ ಮಟನ್ ಪಲಾವ್ ಮಾಡುತ್ತಾರೆ ಎಂದು ಗಂಡನ ಎದುರೇ ಕೊಂಡಾಡಿದ್ದರು. ತೇಜಸ್ವಿ ಹಿನ್ನೆಲೆಯಲ್ಲಿ ನಾಚಿಕೊಂಡು ಕೇಳಿಸಿಕೊಳ್ಳುತ್ತಿದ್ದರು. ಈವತ್ತು ಅವರು ಇಲ್ಲ. ಕಾಲ ನಿಜಕ್ಕೂ ತುಂಬಾ ಕೆಟ್ಟ ಕಟುಕ.
ನಮ್ಮ ಪ್ರೀತಿಯ ಲೇಖಕನನ್ನು ಕಿತ್ತುಕೊಂಡ ಆತನಿಗೆ ಧಿಕ್ಕಾರ.
[ಚಿತ್ರ ಕೃಪೆ: ಕರ್ನಾಟಕ ಫೋಟೋ ನ್ಯೂಸ್]
 
 
 

ನಿನ್ನ ಕೆನ್ನೆಗಳನ್ನು…

ಮೌಲಾನಾ ಜಲಾಲುದ್ದೀನ್ ರೂಮಿಯವರ ಇನ್ನೊಂದು ಕವಿತೆ

ನಿನ್ನ ಮೃದು ಕೆನ್ನೆಯನ್ನ ಒಂದರೆಗಳಿಗೆ
ಈ ಕುಡುಕನ ಕೆನ್ನೆಗೆ ಒತ್ತು
ನನ್ನೊಳಗಿನದೇ ನನ್ನ ಕಾದಾಟ ಕಾಠಿಣ್ಯ ಮರೆತು ಬಿಡಲು.
ಈ ಬೆಳ್ಳಿನಾಣ್ಯಗಳನ್ನ ಚಾಚಿ ಹಿಡಿದಿರುವೆ
ಹೊನ್ನ ಬೆಳಕಿನ ಮಧುವ ಸುರಿದು ಬಿಡು ಅದಕೆ.
ಸ್ವರ್ಗದ ಏಳೂ ಬಾಗಿಲುಗಳ ತೆರೆದಿರುವೆ ನೀನು.
ಕೈಯನ್ನ ನನ್ನ ಬಿಗಿದ ಎದೆಯ ಮೇಲೆ ತಾ.
ಕೊಡುವುದೇನಿದ್ದರೂ ನಿನಗೆ ನಾನು ಈ ಭ್ರಮೆ.ಅದೇ ನಾನು!
ಒಂದು ಹೆಸರನ್ನಾದರೂ ಇಡು, ಅದಾದರೂ ಆಗಲಿ ನಿಜ.
ನೀ ಮಾತ್ರ ಸರಿ ಜೋಡಿಸಬಲ್ಲೆ ನೀನೇ ಮುರಿದದ್ದ
ನನ್ನ ಕುಸಿದಿರುವ ಮಿದುಳ.
ನಾನು ಬೇಡುತ್ತಿರುವುದು ಮಿಠಾಯಿಯನ್ನಲ್ಲ
ನಿನ್ನ ಕೊನೆಯಿರದ ಒಲವನ್ನ
ಎಷ್ಟೊಂದು ಸಲ [...]

ಮನಸ್ಸಿನಲ್ಲೇ ಮಹಾದೇವ

 

[photo:Nethraraju]
ಕನ್ನಡನಾಡಿನ ಎಲ್ಲೋ ಒಂದುಕಡೆ ಒಂದು ಕಲ್ಲಿನ ದೇವಾಯವಿದೆಯಂತೆ. ಆ ದೇವಾಲಯದ ಯಾವ ಕಲ್ಲನ್ನು ಮೊಟಕಿದರೂ ಅದರಿಂದ ಸಂಗೀತ ಹೊರಹೊಮ್ಮವುದಂತೆ. ಅದೇ ರೀತಿ ಮೈಸೂರಿನ ಹಳೆಯ ಕಾಲದ ಯಾರನ್ನು ಮಾತನಾಡಿಸಿದರೂ ಅವರಿಂದ ಮಹಾರಾಜರ ಕಥೆಗಳೇ ಹೊರ ಬರುವುದಂತೆ. ಇನ್ನೂ ಸ್ವಲ್ಪ ಕಡಿಮೆ ಹಳಬರನ್ನು ಮಾತನಾಡಿಸಿದರೆ ಅವರಿಂದ ಕುವೆಂಪು ಅವರ ಹೆಸರೇ ಬರುವುದಂತೆ.
`ಇವರಿಬ್ಬರ ಗುಂಗಿನಿಂದ ಹೊರಬಂದು ಬರೆಯುವುದೆಂದರೆ ಮೈಸೂರಿನಲ್ಲಿ ಹರಸಾಹಸದ ಕೆಲಸವೇ ಸರಿ. ಹಾಗಾಗಿ ನೀನು ಯಾಕೆ ಸ್ವಲ್ಪ ನಮ್ಮ ದೇವನೂರು ಮಹಾದೇವರನ್ನು ಮಾತನಾಡಿಸಿ ಬರೆಯಬಾರದು ಎಂದು ಗೆಳೆಯರೊಬ್ಬರು ಕೊಂಚ [...]