ನನ್ನ ಒಳ್ಳೆಯತನ ಮತ್ತು ನಿನ್ನ ಚಂದ

  
ನನ್ನ ಒಳ್ಳೆಯತನ ಮತ್ತು ನಿನ್ನ ಚಂದ
ನಿನ್ನ ಸಂಗೀತ ನನ್ನ ಕವಿತೆ
ಇದೆಲ್ಲ ಎಷ್ಟೊಂದು ಸುಳ್ಳು!
ನನ್ನ ನಾಸಿಕ ನಿನ್ನ ಕಾಲ ಬೆರಳನ್ನು ಘ್ರಾಣಿಸುತ್ತಿರುವುದು
ಎಷ್ಟು ಹೊತ್ತಿಂದ ಎಂಬುದನ್ನೂ ಮರೆತಿರುವುದು!
 

ಪ್ರೊಪೆಸರ್ ಕರೀಮುದ್ದೀನ್ ಸಾಹೇಬರು

‘ಹಿಂದೂಸ್ತಾನದ [...]

ಮಾರ್ಕ್ವೆಜ್ ಬದುಕಿ ಉಳಿಯಲಿ ದೇವರೇ…

ಈಗಲೂ ಬರೆಯಲಿಕ್ಕಾಗಿಯೇ ಬದುಕಿರುವ ಈ ಶತಮಾನದ ಅದ್ಭುತ ಕಥೆಗಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್.ಇನ್ನೂ ಉಳಿದಿರುವ ಕಥೆಗಳನ್ನು ಹೇಳಿ ಮುಗಿಸಲಿಕ್ಕಾಗಿಯೇ ಬದುಕಿ ಉಳಿದಿದ್ದಾನೆ. ಆತನ ಆತ್ಮ ಚರಿತ್ರೆಯ ಉಳಿದಿರುವ ಎರಡು ಸಂಪುಟಗಳನ್ನು ಬರೆದ ನಂತರವೂ ಆತ ಬದುಕಿರಲಿ ಎಂದು ನಾನೂ ಪ್ರಾರ್ಥಿಸುತ್ತಿದ್ದೇನೆ.

ಕೊಡಗಿನ ಅರಸರ ಹಿಟ್ಟಿನ ಅರಮನೆ

ಒಂದು ಕಾಲದಲ್ಲಿ ಕೊಡಗಿನ ನಮಗೆಲ್ಲರಿಗೂ ಮಹಾರಾಜರಾಗಿದ್ದ ಹಾಲೇರಿ ಅರಸರ ವಂಶದ ಕುಡಿಯೊಡನೆ ವಾದಕೊಡಗಿನ ಅರಸರ ಕುಡಿ ಮಾಡುತ್ತಿರುವ ನನ್ನ ಉದ್ಧಟತನಕ್ಕೆ ನನಗೇ ನಗುಬಂದು ಆ ನಗುವನ್ನು ತೋರಿಸಿಕೊಳ್ಳದೆ ನಾಗರಾಜ ಒಡೆಯರು ಖಾಲಿ ಹಿಟ್ಟಿನ ಚೀಲದೊಳಗೆ ಜತನದಲ್ಲಿ ಇಟ್ಟುಕೊಂಡಿದ್ದ ರಾಜಮನೆತನಕ್ಕೆ ಸಂಬಂಧಿಸಿದ ಅಮೂಲ್ಯ ದಾಖಲಾತಿಗಳನ್ನೂ, ಐತಿಹಾಸಿಕ ಕಾಗದ ಪತ್ರಗಳನ್ನೂ ಎತ್ತಿಕೊಂಡು ಅವುಗಳ ಮೇಲೆ ಹರಡಿದ್ದ ನಾನಾ ಹಿಟ್ಟುಗಳ ಧೂಳುಗಳನ್ನು ಜೋಪಾನವಾಗಿ ಕೊಡವಿ ನೋಡತೊಡಗಿದೆ.

ಅಂತ್ಯಸಂಸ್ಕಾರ ಮತ್ತು ಭೂಮಿ ವ್ಯವಹಾರ

ಆಮಿತಾತ ತೀರಿಹೋಗುವ ದಿನದವರೆಗೂ ತನಗೆ ಕಾಫಿತೋಟವೊ೦ದರ ಅರ್ಧಪಾಲು ಸಿಗುವುದು ಎಂದು ನಂಬಿಕೊಂಡು ಬದುಕಿದ್ದಳು.ನೂರಾರು ವರ್ಷಗಳ ಹಿಂದೆ ಬ್ರಿಟಿಶ್ ದೊರೆಯೊಬ್ಬ ಆಕೆಗೆ ಈ ಆಸೆ ಕೊಟ್ಟು ಕೊಡಗಿಗೆ ಕರೆದು ಕೊಂಡು ಬಂದನಂತೆ. ಆ ತೋಟ ಹಲವು ಸಾಹುಕಾರರ ಕೈದಾಟಿದ್ದರೂ ಆ ಪಾಲು ತನಗೆ ಸಿಗುವುದು ಎಂದು ಆಕೆ ನಂಬಿದ್ದಳು.ಅದರಲ್ಲಿ ಒಂದು ಪಾಲು ನನಗೂ ನೀಡುವುದಾಗಿ ಆಕೆ ಆಸೆ ಕೊಟ್ಟಿದ್ದಳು. ಇಂದು ಆಮಿತಾತ ತೀರಿಹೋಗುವವರೆಗೆ ನನಗೂ ಆ ನಂಬಿಕೆ ಇತ್ತು. ಇನ್ನು ಇಲ್ಲ.

ವೈ. ಜಯಮ್ಮ ಮತ್ತು ಕಡಲ ಚಿಪ್ಪುಗಳು

ಮೈಸೂರಿನ ಕೃಷ್ಣರಾಜ ಆಸ್ಪತ್ರೆಯಿಂದ ಇರ್ವಿನ್‌ ರಸ್ತೆ ನೆಹರೂ ವೃತ್ತ ವನ್ನು ಸೇರುವ ಮೊದಲು ಎಡಬದಿಯಲ್ಲಿ ರಸ್ತೆಗೆ ತಾಗಿಕೊಂಡಂತಿರುವ ಹಳೆಯ ಶೈಲಿಯ ಈ ಕಟ್ಟಡ ಎಂತಹ ದಾರಿಹೋಕನನ್ನು ಒಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ. ನೂರಾರು ವರ್ಷಗಳ ಹಿಂದೆ ಕಟ್ಟಿದಾಗ ಹೇಗೆ ಇತ್ತೋ ಇನ್ನೂ ಹಾಗೇ ಇರುವ ಈ ಕಟ್ಟಡದ ಮೇಲುಪ್ಪರಿಗೆಯಲ್ಲಿ ವಿಜಯ ಶಂಖಶುಕ್ತಿ ಕಲಾಕೇಂದ್ರ ಎನ್ನುವ ಹಳೆಯ ನಾಮಫಲಕವೊಂದು ಬಹಳ ವರ್ಷಗಳಿಂದ ತೂಗಾಡುತ್ತಿದೆ.ಕೊಂಚ ಅಸಹಜವಾಗಿ ಇದೆಯಲ್ಲ ಎಂದುಕೊಂಡು ಯಾವಾಗಲೂ ವಾರೆಯಾಗಿ ತೆರೆದುಕೊಂಡಿರುವ ಈ ಕಟ್ಟಡದ ಕೆಳ ಅಂತಸ್ತಿನ [...]

ಹೆಂಡದಂಗಡಿಯಿಂದ

ಹಗಲೆಲ್ಲ ಯೋಚಿಸುವೆ.ಇರುಳು ಅದನೇ ಹೇಳುವೆ.
ಎಲ್ಲಿಂದ ಬಂದೆ ನಾನೇನು ಮಾಡುತಿರುವೆ ಒಂದೂ ಅರಿಯೆ.
ನನ್ನ ರೂಹು ಬೇರೆ ಎಲ್ಲಿನದೋ, ಅದು ಗೊತ್ತು ನಿಜ
ಮತ್ತೆ ಅಲ್ಲಿಗೇ ಹೋಗಿ ಸೇರುವೆನು.
ಈ ಕುಡುಕುತನ ಬೇರೊಂದು ಹೆಂಡದಂಗಡಿಯಿಂದ ತೊಡಗಿದ್ದು
ಹಿಂತಿರುಗಿ ತಲುಪಿದಾಗ ಅಲ್ಲಿ
ಸುಮ್ಮಗಾಗುವೆನು ಪೂರಾ..
ಅದುವರೆಗೆ ಈ ಗೆಲ್ಲ ಮೇಲೆ ಹಕ್ಕಿ ನಾನು ಬೇರೊಂದು ಭೂಖಂಡದಿಂದ.

ಪ್ರಿಯ ಲಂಕೇಶರ ಹುಟ್ಟು ಹಬ್ಬಕ್ಕೆ ಒಂದು ಕವಿತೆ

ನಾವು ಎಲ್ಲರೂ
ನೀವು ಇದ್ದಿದ್ದರೆ
ಈ ಎಲ್ಲದರ ಕುರಿತು
ಏನು ತೀರ್ಮಾನ ತೆಗೆದುಕೊಳ್ಳುತ್ತಿದ್ದಿರಿ ಎಂದು
ಯೋಚಿಸುತ್ತಾ ಕುಳಿತಿರುವೆವು.
ಹೀಗೆ ನೀವು ಸಾರ್ವಜನಿಕ ತೀರ್ಮಾನಗಳನ್ನು
ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಬಹುಶಃ
ನಮಗೆ ಗೊತ್ತಿಲ್ಲ ಎನ್ನುವುದೂ ಒಂದು
ಚರ್ಚೆಯ ವಿಷಯವಾಗಿರುವುದು.

ನೋಡು ಬಾ ಚಂದಿರ…

ಆ ಸಂಜೆ ನನಗೆ ಇನ್ನೂ ನೆನಪಿದೆ. ಪರದೆ ಇಳಿಬಿಟ್ಟ ಸಣ್ಣಗಿನ ಬೆಳಕಿನ ಇಂತಹದೇ ಆ ಸಂಜೆ ಆ ನಾಲ್ವರು ಸಹೋದರಿಯರು ಒಂದೇ ದನಿಯಲ್ಲಿ ಒಂದೇ ಮನಸ್ಸಿನಲ್ಲಿ ಒಂದೇ ಆತ್ಮ ಹಾಡುತ್ತಿದೆ ಎನ್ನುವ ಹಾಗೆ ಕನ್ನಡದ ಒಂದೊಂದೇ ಹಾಡುಗಳನ್ನು ಮಗುವನ್ನು ಎತ್ತಿಕೊಳ್ಳುವಂತೆ, ಮಗುವನ್ನು ತೋಳಿನಿಂದ ತೋಳಿಗೆ ಬದಲಿಸುತ್ತಿರುವಂತೆ, ಮಗುವಿನ ಕಣ್ಣುಗಳನ್ನು ಒಬ್ಬೊಬ್ಬರಾಗಿ ದಿಟ್ಟಿಸಿ ನೋಡುತ್ತಿರುವಂತೆ ಹಾಡಿದ್ದರು. ನಾನು ಕಣ್ಣು ತುಂಬಿಕೊಂಡು ಅವರನ್ನು ನೋಡುತ್ತಿದ್ದೆ. ಈ ಹಾಡುಗಳು ಯಾವುದೂ ಅರ್ಥವಾಗದೇ ಹೋಗಿದ್ದಿದ್ದರೆ, ಕಣ್ಣುಗಳು ಮಸುಕಾಗಿರುವ ನನಗೆ ಅವರ ಹಾಡಿನ ಕಣ್ಣುಗಳು ಬಂದಿದ್ದರೆ, ಇವರ ಹಾಗೆ ನಾನೂ ಒಂದು ಕೊಳೆಯಿಲ್ಲದ ಆತ್ಮವಾಗಿ ಎಲ್ಲ ಕಡೆ ಸುಳಿದಾಡುವಂತಿದ್ದರೆ ಎಂದು ಹಂಬಲಿಸಿಕೊಂಡು ಕೂತಿದ್ದೆ. ಅಲಿಮಹಮ್ಮದ್‌ ಖಾನ್‌ ದುರಾನಿಯವರ ಕಣ್ಣು ಕಾಣಿಸದ ನಾಲಕ್ಕು ಪುತ್ರಿಯರಾದ ಖನೀಜ್‌ ಫಾತಿಮಾ, ಫಿರ್ದೌಸ್‌, ಆಯಿಶಾ ಸಿದ್ದಿಕಾ ಹಾಗೂ ಮಾರಿಯಾ ಕುಲ್ಸುಂ ಆವತ್ತು ಅಷ್ಟೊಂದು ಹಾಡಿ ನಗುತ್ತಾ ನನ್ನನ್ನು ಬೀಳು ಕೊಂಡಿದ್ದರು. ಆವತ್ತು ಕತ್ತಲಲ್ಲಿ ವಾಪಸು ಬರುವಾಗ ನನಗೆ ಯಾವು ಯಾವುದೋ ನಕ್ಷತ್ರಗಳು ವಿನಾಕಾರಣ ಗೋಚರಿಸುತ್ತಿದ್ದವು.